ಹುಬ್ಬಳ್ಳಿ:‘ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗದ ನಾಯಕನಲ್ಲ. ಅವರು ಸರ್ವ ಜನಾಂಗದ, ಸರ್ವ ಧರ್ಮದ ನಾಯಕ’ ಎಂದು ಡಿ.ಕೆ. ಶಿವಕುಮಾರ್ ಬಣ್ಣಿಸಿದರು.
ವಿರೋಧ ಪಕ್ಷಗಳನ್ನು ಟೀಕಿಸುವ ಗೋಜಿಗೆ ಹೋಗದ ಅವರು, ಮುಂಬರುವ ಚುನಾವಣೆಯಲ್ಲಿ ಹೈಕಮಾಂಡ್ ಸಾಮೂಹಿಕ ನಾಯಕತ್ವವನ್ನೇ ಬೆಂಬಲಿಸಿದೆ. ನಾನು ಅಥವಾ ಸಿದ್ದರಾಮಯ್ಯ ಮಾತ್ರ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. ಬದಲಿಗೆ, ನೀವೇ ಸರ್ಕಾರ ರಚನೆಯ ಸೂತ್ರಧಾರರು’ ಎಂದರು.