ಧಾರವಾಡ: ‘ಅವರು (ಬಿ.ಕೆ.ಹರಿಪ್ರಸಾದ್) ನನ್ನ ಹೆಸರು ಹೇಳಿದ್ದಾರಾ? ಸಾರ್ವತ್ರಿಕ ಹೇಳಿಕೆಗಳಿಗೆಲ್ಲ (ಜನರಲ್ ಸ್ಟೇಟ್ಮೆಂಟ್) ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದರು.
‘ಕೈಗೆ ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು, ಪಂಚೆ ಕಟ್ಟಿಕೊಂಡು ಒಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸಿದ್ದರಾಮಯ್ಯ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಸಿದ್ದರಾಮಯ್ಯ ಈ ರೀತಿ ಹೇಳಿದರು.
ಓದಿ: ಕೈಗೆ ಹ್ಯೂಬ್ಲೋಟ್ ವಾಚ್, ಪಂಚೆಯೊಳಗೆ ಖಾಕಿ ಚಡ್ಡಿ : ಸಿದ್ದರಾಮಯ್ಯ ವಿರುದ್ದ ಹರಿಪ್ರಸಾದ್ ಪರೋಕ್ಷ ವಾಗ್ದಾಳಿ