‘ತುಮಕೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಅಡುಗೆ ಸಾಮಾಗ್ರಿ ಪೂರೈಕೆ ಟೆಂಡರ್ನಲ್ಲಿ ಲೋಪದೋಷಗಳಾಗಿದ್ದು, ಗರಿಷ್ಠ ವೆಚ್ಚದ ಸಾಮಾಗ್ರಿಗಳಿಗೆ ಕಡಿಮೆ ವೆಚ್ಚ ನಮೂದಿಸಿ ಅಕ್ರಮವಾಗಿ ಗುತ್ತಿಗೆ ಪಡೆಯಲಾಗಿದೆ. ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ’ ಎಂಬ ವರದಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಎಸಿಬಿ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೋಟ ತಿಳಿಸಿದರು.