ಬೆಂಗಳೂರು:ಕರ್ನಾಟಕ ಲೇಖಕಿಯರ ಸಂಘವು ‘ತ್ರಿವೇಣಿ ದತ್ತಿನಿಧಿ’ ಸಣ್ಣ ಕಥಾ ಸ್ಪರ್ಧೆಗೆಯುವ ಲೇಖಕಿಯರಿಂದ ಕಥೆಗಳನ್ನು ಆಹ್ವಾನಿಸಿದೆ.
ಎಲ್ಲೂ ಪ್ರಕಟವಾಗದ ಸ್ವರಚಿತ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಪ್ರಥಮ ಬಹುಮಾನ ₹ 3 ಸಾವಿರ, ದ್ವಿತೀಯ ಬಹುಮಾನ ₹ 2 ಸಾವಿರ, ತೃತೀಯ ಬಹುಮಾನ ₹ 1 ಸಾವಿರ ನಿಗದಿಪಡಿಸಲಾಗಿದೆ. 18 ರಿಂದ 40 ವರ್ಷಗಳ ಒಳಗಿನ ಲೇಖಕಿಯರು ಭಾಗವಹಿಸಬಹುದು.
ಕಥೆಯನ್ನು ಇ–ಮೇಲ್ ಮೂಲಕ ಕಳುಹಿಸಲು ಸೆ. 23 ಕೊನೆಯ ದಿನ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
ಇ–ಮೇಲ್ ವಿಳಾಸ: lekhaki2012@gmail.com. ಮಾಹಿತಿಗೆ ಸಂಪರ್ಕ ಸಂಖ್ಯೆ9845293704.