‘ವೈಚಾರಿಕ ಭಿನ್ನತೆ ಇರುವ ಜನರಲ್ಲಿ ಸಂವಾದ ನಡೆಯಬೇಕೆ ಹೊರತು ವಿವಾದವಲ್ಲ. ಆಗ ಮಾತ್ರ ಸಹಕಾರದ ಸಂಬಂಧ ಹುಟ್ಟಿಕೊಳ್ಳುತ್ತದೆ. ವೈಚಾರಿಕವಾಗಿ ಮೇಲ್ಮಟ್ಟದ ವಿರೋಧಿಗಳ ನಡುವೆ ಸಂವಾದ ನಡೆಯಬೇಕು. ಗಾಂಧಿ–ಅಂಬೇಡ್ಕರ್, ಅಂಬೇಡ್ಕರ್–ಕಮ್ಯುನಿಸ್ಟ್, ಕಮ್ಯುನಿಸ್ಟ್–ಗಾಂಧಿ ನಡುವೆ ಅಷ್ಟೇ ಅಲ್ಲ, ವೈಚಾರಿಕವಾಗಿ ವಿರೋಧಿಗಳ ನಡುವೆಯೂ ನಡೆಯಬೇಕು. ದೀನ್ ದಯಾಳ್ ಉಪಾಧ್ಯಾಯರ ಸಿದ್ಧಾಂತಗಳ ನಡುವೆಯೂ ನಡೆಯಬೇಕು’ ಎಂದು ಸಲಹೆ ನೀಡಿದರು.