ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬೆಂಗಳೂರು ಜನಸ್ನೇಹಿ ನಗರ ಎಂಬ ವರದಿ ಬಂದಿದೆ. ಆದರೆ, ಪಾದಚಾರಿ ಮಾರ್ಗಗಳಲ್ಲಿ ಜಾಗವಿಲ್ಲದೆ ಜನರು ರಸ್ತೆಯ ಮೇಲೆ ನಡೆಯುವಂತಾಗಿದೆ. ಇತ್ತೀಚೆಗೆ ಮೂವರು ಟ್ಯಾಂಕರ್ ಗುದ್ದಿ ಮೃತಪಟ್ಟಿದ್ದಾರೆ. ಇದಕ್ಕೆಲ್ಲ ಎಂಎಲ್ಎಗಳ ಆಪ್ತರ ಹಫ್ತಾ ವಸೂಲಿಯೇ ಕಾರಣ’ ಎಂದು ದೂರಿದರು.