<p><strong>ಕಮಲಾಪುರ (ಕಲಬುರ್ಗಿ ಜಿಲ್ಲೆ):</strong> ಕರ್ತವ್ಯ ನಿಷ್ಠೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಿದರೆ ಕುಗ್ರಾಮ, ತಾಂಡಾಗಳಲ್ಲೂ ಸರ್ಕಾರಿ ಶಾಲೆಗಳ ಸುಧಾರಣೆ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಶಂಕರನಾಯಕ ತಾಂಡಾ ಶಾಲೆಯ ಶಿಕ್ಷಕ ಶಂಕರಲಿಂಗ ಬ. ಹಿಪ್ಪರಗಿ.</p>.<p>ಇದು ಕಿರಿಯ ಪ್ರಾಥಮಿಕ ಶಾಲೆ. 1ರಿಂದ 5ನೇ ತರಗತಿ ವರೆಗೆ 45 ಮಕ್ಕಳು ಇದ್ದು, ಕೊರೊನಾ ಕಾರಣಕ್ಕೆ ಭೌತಿಕ ತರಗತಿ ಇಲ್ಲದಿದ್ದರೂ ಈ ಶಾಲೆಗೆ ಮಕ್ಕಳು ತಂಡಗಳಲ್ಲಿ ಸರದಿಯಂತೆ ಬರುತ್ತಿದ್ದಾರೆ. ಈ ಶಾಲೆಯಲ್ಲಿ ಒಬ್ಬ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.</p>.<p>‘ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಶಾಲೆಯಲ್ಲಿ ವಿಶೇಷ ತರಗತಿ ನಡೆಸುತ್ತೇನೆ. ಓದು ಅಷ್ಟೇ ಅಲ್ಲ. ನಾಟಕ–ಜನಪದ ಕಲೆಗಳ ಅಭಿನಯಕ್ಕೆ ಪ್ರೋತ್ಸಾಹಿಸುತ್ತಿದ್ದು, ಅದಕ್ಕಾಗಿ ಮೈಕ್ ಸೆಟ್ ಹಾಗೂ ಪೋಷಾಕುಗಳನ್ನು ಖರೀದಿಸಿದ್ದೇವೆ’ ಎನ್ನುತ್ತಾರೆ ಶಂಕರಲಿಂಗ.</p>.<p>‘ಈ ಶಾಲೆಗೆ ಸಹ ಶಿಕ್ಷಕರಾಗಿ 2008 ರಲ್ಲಿ ಶಂಕರಲಿಂಗ ನೇಮಕವಾದರು. ಉದ್ಯೋಗ ಖಾತರಿ ಅಡಿ ಕಾಂಪೌಂಡ್ ನಿರ್ಮಿಸಿಕೊಂಡರು. ಸದ್ಯ ಸ್ವಂತ ಖರ್ಚಿನಲ್ಲೇ ಗೇಟ್ ಅಳವಡಿಸಿದ್ದಾರೆ. ಆವರಣದಲ್ಲಿ ಹೂ, ಹಣ್ಣಿನ ಸಸಿಗಳನ್ನು ನೆಟ್ಟಿದ್ದಾರೆ. ಕೂರಲು ಆಸನಗಳನ್ನು ಹಾಕಿದ್ದಾರೆ. ವ್ಯವಸ್ಥಿತ ಶೌಚಾಲಯವಿದೆ. ಇದಕ್ಕೆಲ್ಲ ಈ ಶಿಕ್ಷಕರ ಪರಿಶ್ರಮವೇ ಕಾರಣ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜಕುಮಾರ ರಾಠೋಡ ತಿಳಿಸಿದರು.</p>.<p>‘ಕೋವಿಡ್ ಸಂದರ್ಭದಲ್ಲಿ ಪ್ರತಿದಿನ ಮನೆ ಮನೆಗೆ ಬಂದು ಪಾಠ ಮಾಡಿದ್ದಾರೆ. ಮಕ್ಕಳಿಗೆ ತರಬೇತಿ ನೀಡಿ ವಸತಿ ಶಾಲೆಗಳಲ್ಲಿ ಪ್ರವೇಶ ಕೊಡಿಸಲು ಪ್ರಯತ್ನಿಸುತ್ತಾರೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ಶಿವಾಜಿ ರಾಠೋಡ ಹೇಳಿದರು.</p>.<p>ಉಡುಗೊರೆ: ಶಂಕರಲಿಂಗ ತಾಂಡಾ ರಾಷ್ಟ್ರೀಯ ಹೆದ್ದಾರಿಯಿಂದ 3 ಕಿ.ಮೀ ದೂರದಲ್ಲಿದೆ. ಪಕ್ಕಾ ರಸ್ತೆ ಇಲ್ಲ. ಇಲ್ಲಿ ಸುಮಾರು 300 ಜನಸಂಖ್ಯೆ ಇದೆ. ಕಮಲಾಪುರದಲ್ಲಿ ಮನೆ ಮಾಡಿರುವ ಶಂಕರಲಿಂಗ ಸಿಂದಿಬಸವ ಕ್ರಾಸ್ವರೆಗೆ ಬಸ್ಗಳಲ್ಲಿ ಬಂದು, ಅಲ್ಲಿಂದ ಶಾಲೆಗೆ ನಡೆದುಕೊಂಡು ಬರುತ್ತಿದ್ದರು. ಪಾಲಕ ಅರುಣಕುಮಾರ ರಾಠೋಡ ಅವರು ₹44 ಸಾವಿರ ನೀಡಿ ಎರಡು ವರ್ಷಗಳ ಹಿಂದೆ ದ್ವಿಚಕ್ರವಾಹನ (ಟಿವಿಎಸ್ ಮೊಪೆಡ್)ವನ್ನು ಈ ಶಿಕ್ಷಕರಿಗೆ ಉಡುಗೊರೆಯಾಗಿ ನೀಡಿದ್ದಾರೆ. ‘ನಮ್ಮ ಶಾಲೆ ಹಾಗೂ ಮಕ್ಕಳಿಗೆ ಅವರು ಮಾಡಿದ ಸೇವೆಗೆ ಇದೊಂದು ಚಿಕ್ಕ ಕಾಣಿಕೆ’ ಎನ್ನುತ್ತಾರೆ ಅರುಣಕುಮಾರ ರಾಠೋಡ.</p>.<p><strong>ಶಾಲೆಯ ಅಭಿವೃದ್ಧಿಗೆ ಶ್ರಮ</strong><br />ಒಂದೇ ಕೊಠಡಿಯಲ್ಲಿ 5 ನೇ ತರಗತಿವರೆಗೆ ಶಾಲೆ ನಡೆಯುತ್ತಿತ್ತು. ಶಂಕರಲಿಂಗರಿಗೆ ಸುಧಾರಣೆ ಮಾಡಬೇಕೆಂಬ ಹಂಬಲ ಶುರುವಾಯಿತು. ಸರ್ವ ಶಿಕ್ಷಣ ಯೋಜನೆಯಡಿ ಇನ್ನೊಂದು ಕೊಠಡಿ ಮಂಜೂರು ಮಾಡಿಸಿಕೊಂಡರು. ಶಾಲೆಯ ಅಂದ ಹೆಚ್ಚಿಸಲು ವೈಯಕ್ತಿಕವಾಗಿ ₹ 20 ಸಾವಿರ ಖರ್ಚುಮಾಡಿದ್ದಾರೆ. ನಂತರ ಸಮುದಾಯದ ಸಹಭಾಗಿತ್ವದೊಂದಿಗೆ ಶಾಲಾ ಅವರಣದಲ್ಲಿ ತಲಾ 25 ಟ್ರ್ಯಾಕ್ಟ್ರ್ ಲೋಡ್ ಕಲ್ಲು, ಮರುಮ್ ಹಾಕಿ ಆವರಣ ಸಮತಟ್ಟುಗೊಳಿಸಿದ್ದಾರೆ.</p>.<p>*<br />ಶಾಲೆಗೆ ಸೌಲಭ್ಯ ಕಲ್ಪಿಸಲು ತಾಂಡಾ ನಿವಾಸಿಗಳು ಸಹಕರಿಸಿದ್ದಾರೆ. ಸಮುದಾಯದೊಂದಿಗೆ ಬೆರೆತು ಕೆಲಸ ಮಾಡಿದ್ದರ ಪ್ರತಿಫಲ ಇದು<br /><em><strong>–ಶಂಕರಲಿಂಗ ಬ. ಹಿಪ್ಪರಗಿ, ಶಿಕ್ಷಕ</strong></em></p>.<p><em><strong>*</strong></em><br />ನಮ್ಮ ತಾಂಡಾ ಶಾಲೆಯ ಶೈಕ್ಷಣಿಕ ಗುಣಮಟ್ಟ ಮನಗಂಡು ಸುತ್ತಲಿನ ತಾಂಡಾಗಳ ಮಕ್ಕಳೂ ಇಲ್ಲಿ ದಾಖಲಾಗಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ.<br /><em><strong>–ಶಿವಾಜಿ ರಾಠೋಡ, ಎಸ್ಡಿಎಂಸಿ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲಾಪುರ (ಕಲಬುರ್ಗಿ ಜಿಲ್ಲೆ):</strong> ಕರ್ತವ್ಯ ನಿಷ್ಠೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಿದರೆ ಕುಗ್ರಾಮ, ತಾಂಡಾಗಳಲ್ಲೂ ಸರ್ಕಾರಿ ಶಾಲೆಗಳ ಸುಧಾರಣೆ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಶಂಕರನಾಯಕ ತಾಂಡಾ ಶಾಲೆಯ ಶಿಕ್ಷಕ ಶಂಕರಲಿಂಗ ಬ. ಹಿಪ್ಪರಗಿ.</p>.<p>ಇದು ಕಿರಿಯ ಪ್ರಾಥಮಿಕ ಶಾಲೆ. 1ರಿಂದ 5ನೇ ತರಗತಿ ವರೆಗೆ 45 ಮಕ್ಕಳು ಇದ್ದು, ಕೊರೊನಾ ಕಾರಣಕ್ಕೆ ಭೌತಿಕ ತರಗತಿ ಇಲ್ಲದಿದ್ದರೂ ಈ ಶಾಲೆಗೆ ಮಕ್ಕಳು ತಂಡಗಳಲ್ಲಿ ಸರದಿಯಂತೆ ಬರುತ್ತಿದ್ದಾರೆ. ಈ ಶಾಲೆಯಲ್ಲಿ ಒಬ್ಬ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.</p>.<p>‘ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಶಾಲೆಯಲ್ಲಿ ವಿಶೇಷ ತರಗತಿ ನಡೆಸುತ್ತೇನೆ. ಓದು ಅಷ್ಟೇ ಅಲ್ಲ. ನಾಟಕ–ಜನಪದ ಕಲೆಗಳ ಅಭಿನಯಕ್ಕೆ ಪ್ರೋತ್ಸಾಹಿಸುತ್ತಿದ್ದು, ಅದಕ್ಕಾಗಿ ಮೈಕ್ ಸೆಟ್ ಹಾಗೂ ಪೋಷಾಕುಗಳನ್ನು ಖರೀದಿಸಿದ್ದೇವೆ’ ಎನ್ನುತ್ತಾರೆ ಶಂಕರಲಿಂಗ.</p>.<p>‘ಈ ಶಾಲೆಗೆ ಸಹ ಶಿಕ್ಷಕರಾಗಿ 2008 ರಲ್ಲಿ ಶಂಕರಲಿಂಗ ನೇಮಕವಾದರು. ಉದ್ಯೋಗ ಖಾತರಿ ಅಡಿ ಕಾಂಪೌಂಡ್ ನಿರ್ಮಿಸಿಕೊಂಡರು. ಸದ್ಯ ಸ್ವಂತ ಖರ್ಚಿನಲ್ಲೇ ಗೇಟ್ ಅಳವಡಿಸಿದ್ದಾರೆ. ಆವರಣದಲ್ಲಿ ಹೂ, ಹಣ್ಣಿನ ಸಸಿಗಳನ್ನು ನೆಟ್ಟಿದ್ದಾರೆ. ಕೂರಲು ಆಸನಗಳನ್ನು ಹಾಕಿದ್ದಾರೆ. ವ್ಯವಸ್ಥಿತ ಶೌಚಾಲಯವಿದೆ. ಇದಕ್ಕೆಲ್ಲ ಈ ಶಿಕ್ಷಕರ ಪರಿಶ್ರಮವೇ ಕಾರಣ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜಕುಮಾರ ರಾಠೋಡ ತಿಳಿಸಿದರು.</p>.<p>‘ಕೋವಿಡ್ ಸಂದರ್ಭದಲ್ಲಿ ಪ್ರತಿದಿನ ಮನೆ ಮನೆಗೆ ಬಂದು ಪಾಠ ಮಾಡಿದ್ದಾರೆ. ಮಕ್ಕಳಿಗೆ ತರಬೇತಿ ನೀಡಿ ವಸತಿ ಶಾಲೆಗಳಲ್ಲಿ ಪ್ರವೇಶ ಕೊಡಿಸಲು ಪ್ರಯತ್ನಿಸುತ್ತಾರೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ಶಿವಾಜಿ ರಾಠೋಡ ಹೇಳಿದರು.</p>.<p>ಉಡುಗೊರೆ: ಶಂಕರಲಿಂಗ ತಾಂಡಾ ರಾಷ್ಟ್ರೀಯ ಹೆದ್ದಾರಿಯಿಂದ 3 ಕಿ.ಮೀ ದೂರದಲ್ಲಿದೆ. ಪಕ್ಕಾ ರಸ್ತೆ ಇಲ್ಲ. ಇಲ್ಲಿ ಸುಮಾರು 300 ಜನಸಂಖ್ಯೆ ಇದೆ. ಕಮಲಾಪುರದಲ್ಲಿ ಮನೆ ಮಾಡಿರುವ ಶಂಕರಲಿಂಗ ಸಿಂದಿಬಸವ ಕ್ರಾಸ್ವರೆಗೆ ಬಸ್ಗಳಲ್ಲಿ ಬಂದು, ಅಲ್ಲಿಂದ ಶಾಲೆಗೆ ನಡೆದುಕೊಂಡು ಬರುತ್ತಿದ್ದರು. ಪಾಲಕ ಅರುಣಕುಮಾರ ರಾಠೋಡ ಅವರು ₹44 ಸಾವಿರ ನೀಡಿ ಎರಡು ವರ್ಷಗಳ ಹಿಂದೆ ದ್ವಿಚಕ್ರವಾಹನ (ಟಿವಿಎಸ್ ಮೊಪೆಡ್)ವನ್ನು ಈ ಶಿಕ್ಷಕರಿಗೆ ಉಡುಗೊರೆಯಾಗಿ ನೀಡಿದ್ದಾರೆ. ‘ನಮ್ಮ ಶಾಲೆ ಹಾಗೂ ಮಕ್ಕಳಿಗೆ ಅವರು ಮಾಡಿದ ಸೇವೆಗೆ ಇದೊಂದು ಚಿಕ್ಕ ಕಾಣಿಕೆ’ ಎನ್ನುತ್ತಾರೆ ಅರುಣಕುಮಾರ ರಾಠೋಡ.</p>.<p><strong>ಶಾಲೆಯ ಅಭಿವೃದ್ಧಿಗೆ ಶ್ರಮ</strong><br />ಒಂದೇ ಕೊಠಡಿಯಲ್ಲಿ 5 ನೇ ತರಗತಿವರೆಗೆ ಶಾಲೆ ನಡೆಯುತ್ತಿತ್ತು. ಶಂಕರಲಿಂಗರಿಗೆ ಸುಧಾರಣೆ ಮಾಡಬೇಕೆಂಬ ಹಂಬಲ ಶುರುವಾಯಿತು. ಸರ್ವ ಶಿಕ್ಷಣ ಯೋಜನೆಯಡಿ ಇನ್ನೊಂದು ಕೊಠಡಿ ಮಂಜೂರು ಮಾಡಿಸಿಕೊಂಡರು. ಶಾಲೆಯ ಅಂದ ಹೆಚ್ಚಿಸಲು ವೈಯಕ್ತಿಕವಾಗಿ ₹ 20 ಸಾವಿರ ಖರ್ಚುಮಾಡಿದ್ದಾರೆ. ನಂತರ ಸಮುದಾಯದ ಸಹಭಾಗಿತ್ವದೊಂದಿಗೆ ಶಾಲಾ ಅವರಣದಲ್ಲಿ ತಲಾ 25 ಟ್ರ್ಯಾಕ್ಟ್ರ್ ಲೋಡ್ ಕಲ್ಲು, ಮರುಮ್ ಹಾಕಿ ಆವರಣ ಸಮತಟ್ಟುಗೊಳಿಸಿದ್ದಾರೆ.</p>.<p>*<br />ಶಾಲೆಗೆ ಸೌಲಭ್ಯ ಕಲ್ಪಿಸಲು ತಾಂಡಾ ನಿವಾಸಿಗಳು ಸಹಕರಿಸಿದ್ದಾರೆ. ಸಮುದಾಯದೊಂದಿಗೆ ಬೆರೆತು ಕೆಲಸ ಮಾಡಿದ್ದರ ಪ್ರತಿಫಲ ಇದು<br /><em><strong>–ಶಂಕರಲಿಂಗ ಬ. ಹಿಪ್ಪರಗಿ, ಶಿಕ್ಷಕ</strong></em></p>.<p><em><strong>*</strong></em><br />ನಮ್ಮ ತಾಂಡಾ ಶಾಲೆಯ ಶೈಕ್ಷಣಿಕ ಗುಣಮಟ್ಟ ಮನಗಂಡು ಸುತ್ತಲಿನ ತಾಂಡಾಗಳ ಮಕ್ಕಳೂ ಇಲ್ಲಿ ದಾಖಲಾಗಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ.<br /><em><strong>–ಶಿವಾಜಿ ರಾಠೋಡ, ಎಸ್ಡಿಎಂಸಿ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>