ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಮೊದಲು, ಪಕ್ಷ ನಂತರ: ತೇಜಸ್ವಿನಿ ಟ್ವೀಟ್‌

Last Updated 25 ಮಾರ್ಚ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು:‘ದೇಶ ಮೊದಲು, ಪಕ್ಷ ನಂತರ, ನಾನು ಎಂಬುದು ಕೊನೆಯದು’.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ಘೋಷಿಸದ ಕಾರಣ ಸೋಮವಾರ ನೂರಾರು ಕಾರ್ಯಕರ್ತರು ತಮ್ಮ ಮನೆಗೆ ಭೇಟಿ ನೀಡಿ ಆತಂಕ ತೋಡಿಕೊಂಡಾಗ ತೇಜಸ್ವಿನಿ ಅನಂತಕುಮಾರ್‌ ತಮ್ಮ ಅಭಿಮಾನಿಗಳಿಗೆ ಹೇಳಿದ ಮಾತುಗಳು.

ಬಳಿಕ ಅವರು ತಮ್ಮ ಟ್ವಿಟರ್‌ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿ, ‘ಅನಂತಕುಮಾರ್‌ ಅವರು ನಂಬಿಕೊಂಡು ಬಂದಿರುವ ತತ್ವವನ್ನೇ ಅನುಸರಿಸುತ್ತಿದ್ದೇನೆ. ದೇಶ ಮೊದಲು, ಪಕ್ಷ ನಂತರ ಮತ್ತು ನಾನು– ನನ್ನದು ಎಂಬುದು ಕೊನೆಯದು. ಕೇಂದ್ರ ನಾಯಕತ್ವ ಯಾವ ತೀರ್ಮಾನವನ್ನು ತೆಗೆದುಕೊಳ್ಳುತ್ತದೆಯೊ ಅದಕ್ಕೆ ಬದ್ಧಳಾಗಿ ಆ ಪ್ರಕಾರವೇ ಕಾರ್ಯ ನಿರ್ವಹಿಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲೂ ಇದೇ ಚರ್ಚೆ: ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅವರಿಗೆ ಟಿಕೆಟ್‌ ಘೋಷಿಸದೇ ಇರುವ ಬಗ್ಗೆ ಬಿಜೆಪಿ ಕಚೇರಿಯಲ್ಲಿದ್ದ ಕಾರ್ಯಕರ್ತರು ಮತ್ತು ನಾಯಕರೂ ಇದೇ ಚರ್ಚೆಯಲ್ಲಿ ತೊಡಗಿದ್ದರು. ಪ್ರಧಾನಿ ಮೋದಿಯವರೇ ಸ್ಪರ್ಧಿಸುತ್ತಾರೋ ಎಂಬ ಬಗ್ಗೆ ಖಚಿತತೆ ಇಲ್ಲ. ನಾಮ ಪತ್ರ ಸಲ್ಲಿಸಲು ನಾಳೆಯೇ ಕೊನೆ ದಿನ (ಮಂಗಳವಾರ) ಎಂಬ ಕಾರ್ಯಕರ್ತರಲ್ಲಿತ್ತು. ಈ ಮಧ್ಯೆ ಪ್ರಚಾರ ಕಾರ್ಯವನ್ನೂ ತೇಜಸ್ವಿನಿ ಅವರು ಭರದಿಂದ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT