ಬಳಿಕ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿ, ‘ಅನಂತಕುಮಾರ್ ಅವರು ನಂಬಿಕೊಂಡು ಬಂದಿರುವ ತತ್ವವನ್ನೇ ಅನುಸರಿಸುತ್ತಿದ್ದೇನೆ. ದೇಶ ಮೊದಲು, ಪಕ್ಷ ನಂತರ ಮತ್ತು ನಾನು– ನನ್ನದು ಎಂಬುದು ಕೊನೆಯದು. ಕೇಂದ್ರ ನಾಯಕತ್ವ ಯಾವ ತೀರ್ಮಾನವನ್ನು ತೆಗೆದುಕೊಳ್ಳುತ್ತದೆಯೊ ಅದಕ್ಕೆ ಬದ್ಧಳಾಗಿ ಆ ಪ್ರಕಾರವೇ ಕಾರ್ಯ ನಿರ್ವಹಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.