<p><strong>ಹುಬ್ಬಳ್ಳಿ:</strong> ‘ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಇರುವ ಮಾಹಿತಿ ಪರಿಷ್ಕರಣೆ ಮಾಡಿದ್ದ ಸಾಲು ನೋಡಿ ಎದೆಗೆ ಕಲ್ಲು ಹೊಡೆದ ಹಾಗಾಯಿತು’ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.</p>.<p>ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುವೆಂಪು ಹಾಗೂ ಬಸವಣ್ಣನರ ತತ್ವಕ್ಕೆ ಅಪಚಾರವಾಗುವಂಥ ಕೆಲಸ ನಡೆಯುತ್ತಿದೆ. ಸೈದ್ಧಾಂತಿಕ ವಿಚಾರಕ್ಕೆ ಯಾರೂ ಕೈ ಹಾಕಬೇಡಿ. ಅವರ ಸಂದೇಶಗಳನ್ನು ಮಕ್ಕಳಿಗೆ ನೀಡುವಂತಾಗಬೇಕು. ಅದನ್ನು ಬಿಟ್ಟು ಬಸವಣ್ಣನವರ ಮೂಲ ಉದ್ದೇಶವನ್ನೇ ದಾರಿ ತಪ್ಪಿಸುವಂತಾಗಬಾರದು’ಎಂದು ಅಭಿಪ್ರಾಯ ಪಟ್ಟರು.</p>.<p>‘ಅಸಮಾನತೆ ವಿರುದ್ದ ಬಸವಣ್ಣನವರು ಮನೆಯನ್ನು ಬಿಟ್ಟರು. ಅದು ಜಗಜ್ಜಾಹಿರು. ಆದರೆ, ಪಠ್ಯಪುಸ್ತಕದಲ್ಲಿ ಸೇರಿಸಿದ್ದೇನು?<br />ಅದನ್ನು ನೋಡಿ ನಮಗೆ ಬಹಳ ಬೇಸರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ತಂದೆಯವರು ಬಸವಣ್ಣನ ಭಕ್ತರಾಗಿದ್ದರು. ಅನೇಕ ಪೂಜ್ಯರ ಮಾರ್ಗದರ್ಶನ ನಿಮಗಿದೆ. ಪುಸ್ತಕ ಬಿಡುಗಡೆ ಆಗುವ ಮೊದಲು ಲೋಪದೋಷ ಸರಿಪಡಿಸಿ. ಬಸವಣ್ಣನವರ ತತ್ವ-ಸಿದ್ದಾಂತಕ್ಕೆ ಧಕ್ಕೆ ತಂದರೆ ನಾವು ಸಹಿಸಲ್ಲ’ಎಂದು ಎಚ್ಚರಿಕೆ ನೀಡಿದರು.</p>.<p><strong>ಓದಿ...<a href="https://www.prajavani.net/district/chitradurga/text-books-controversy-sanehalli-panditharadhya-swamiji-write-a-letter-to-basavaraj-bommai-941146.html" target="_blank">ಪಠ್ಯ ಪರಿಷ್ಕರಣೆಗೆ ವಿರೋಧ: ಸಿಎಂ ಬಸವರಾಜ ಬೊಮ್ಮಾಯಿಗೆ ಸಾಣೇಹಳ್ಳಿ ಶ್ರೀ ಪತ್ರ</a></strong></p>.<p>‘ಬೊಮ್ಮಾಯಿ ಅವರೇ, ಬಸವಣ್ಣನವರ ತತ್ವ-ಸಿದ್ದಾಂತಗಳನ್ನು ಜಗತ್ತಿಗೆ ತಿಳಿಸಿ. ನಿಮ್ಮ ತಂದೆಯವರು ಹೇಗೆ ಬದುಕಿದ್ದರು ಎನ್ನುವುದನ್ನು ಒಮ್ಮೆ ತಿರುಗಿ ನೋಡಿ. ನೀವು ಮೌನ ವಹಿಸಿದರೆ ಬಸವ ಭಕ್ತರಿಗೆ ನೋವಾಗುತ್ತದೆ’ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಇರುವ ಮಾಹಿತಿ ಪರಿಷ್ಕರಣೆ ಮಾಡಿದ್ದ ಸಾಲು ನೋಡಿ ಎದೆಗೆ ಕಲ್ಲು ಹೊಡೆದ ಹಾಗಾಯಿತು’ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.</p>.<p>ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುವೆಂಪು ಹಾಗೂ ಬಸವಣ್ಣನರ ತತ್ವಕ್ಕೆ ಅಪಚಾರವಾಗುವಂಥ ಕೆಲಸ ನಡೆಯುತ್ತಿದೆ. ಸೈದ್ಧಾಂತಿಕ ವಿಚಾರಕ್ಕೆ ಯಾರೂ ಕೈ ಹಾಕಬೇಡಿ. ಅವರ ಸಂದೇಶಗಳನ್ನು ಮಕ್ಕಳಿಗೆ ನೀಡುವಂತಾಗಬೇಕು. ಅದನ್ನು ಬಿಟ್ಟು ಬಸವಣ್ಣನವರ ಮೂಲ ಉದ್ದೇಶವನ್ನೇ ದಾರಿ ತಪ್ಪಿಸುವಂತಾಗಬಾರದು’ಎಂದು ಅಭಿಪ್ರಾಯ ಪಟ್ಟರು.</p>.<p>‘ಅಸಮಾನತೆ ವಿರುದ್ದ ಬಸವಣ್ಣನವರು ಮನೆಯನ್ನು ಬಿಟ್ಟರು. ಅದು ಜಗಜ್ಜಾಹಿರು. ಆದರೆ, ಪಠ್ಯಪುಸ್ತಕದಲ್ಲಿ ಸೇರಿಸಿದ್ದೇನು?<br />ಅದನ್ನು ನೋಡಿ ನಮಗೆ ಬಹಳ ಬೇಸರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ತಂದೆಯವರು ಬಸವಣ್ಣನ ಭಕ್ತರಾಗಿದ್ದರು. ಅನೇಕ ಪೂಜ್ಯರ ಮಾರ್ಗದರ್ಶನ ನಿಮಗಿದೆ. ಪುಸ್ತಕ ಬಿಡುಗಡೆ ಆಗುವ ಮೊದಲು ಲೋಪದೋಷ ಸರಿಪಡಿಸಿ. ಬಸವಣ್ಣನವರ ತತ್ವ-ಸಿದ್ದಾಂತಕ್ಕೆ ಧಕ್ಕೆ ತಂದರೆ ನಾವು ಸಹಿಸಲ್ಲ’ಎಂದು ಎಚ್ಚರಿಕೆ ನೀಡಿದರು.</p>.<p><strong>ಓದಿ...<a href="https://www.prajavani.net/district/chitradurga/text-books-controversy-sanehalli-panditharadhya-swamiji-write-a-letter-to-basavaraj-bommai-941146.html" target="_blank">ಪಠ್ಯ ಪರಿಷ್ಕರಣೆಗೆ ವಿರೋಧ: ಸಿಎಂ ಬಸವರಾಜ ಬೊಮ್ಮಾಯಿಗೆ ಸಾಣೇಹಳ್ಳಿ ಶ್ರೀ ಪತ್ರ</a></strong></p>.<p>‘ಬೊಮ್ಮಾಯಿ ಅವರೇ, ಬಸವಣ್ಣನವರ ತತ್ವ-ಸಿದ್ದಾಂತಗಳನ್ನು ಜಗತ್ತಿಗೆ ತಿಳಿಸಿ. ನಿಮ್ಮ ತಂದೆಯವರು ಹೇಗೆ ಬದುಕಿದ್ದರು ಎನ್ನುವುದನ್ನು ಒಮ್ಮೆ ತಿರುಗಿ ನೋಡಿ. ನೀವು ಮೌನ ವಹಿಸಿದರೆ ಬಸವ ಭಕ್ತರಿಗೆ ನೋವಾಗುತ್ತದೆ’ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>