ಪ್ರಸ್ತುತ ನಾನು ಆರೋಗ್ಯವಾಗಿದ್ದು, ಪಟ್ಟದ ದೇವರನ್ನು ಪೂಜಿಸುವ ಸಾಮರ್ಥ್ಯ ಇರುವುದರಿಂದ ನನ್ನ ವಶಕ್ಕೆ ನೀಡಬೇಕೆಂದು ಕೇಳಿದಾಗ ಕೊಡುತ್ತಿಲ್ಲ. ದೇವರು ನನ್ನ ವಶಕ್ಕೆ ಸಿಗುವವರೆಗೂ ಉಪವಾಸ ವ್ರತ ನಡೆಸುತ್ತಿದ್ದೇನೆ. ದೇವರ ಪ್ರಸಾದ ಸ್ವೀಕರಿಸದೆ ಮುಂದೆ ಅನಾಹುತ ನಡೆದರೆ ಬಾಕಿ ಮಠಾಧೀಶರೇ ಜವಾಬ್ದಾರಿ ಎಂದು ಈ ಮೂಲಕ ತಿಳಿಸುತ್ತಿದ್ದೇನೆ’ ಎಂದು ಶಿರೂರು ಶ್ರೀಗಳು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದರು.