ಪರಿಹಾರಕ್ಕೆ ಬೇಕು ₹70 ಸಾವಿರ ಕೋಟಿ
‘ಪರಿಹಾರಕ್ಕೆ ಸುಮಾರು ₹70,000 ಕೋಟಿ ಬೇಕಾಗುತ್ತದೆ. ಜಮೀನು ಕಳೆದುಕೊಳ್ಳುವ ರೈತರಿಗೆ ಮೂರು ಆರ್ಥಿಕ ವರ್ಷದಲ್ಲಿ ಪರಿಹಾರದ ಮೊತ್ತವನ್ನು ಪಾವತಿಸಲಾವುದು’ ಎಂದು ಸಿದ್ದರಾಮಯ್ಯ ಹೇಳಿದರು. ‘ಪ್ರತಿ ವರ್ಷ ₹15 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿ ಇದಕ್ಕಾಗಿಯೇ ನೀಡಲಾಗುವುದು. ಸರ್ಕಾರ ನಿಗದಿಪಡಿಸಿದ ದರವನ್ನು ಒಪ್ಪಿಕೊಂಡು ಭೂಸ್ವಾಧೀನಕ್ಕೆ ರೈತರ ಮನವೊಲಿಸುವುದಾಗಿ ಆ ಭಾಗದ ಸಚಿವರು, ಶಾಸಕರು ಮತ್ತು ರೈತ ಮುಖಂಡರು ತಿಳಿಸಿದ್ದಾರೆ. ರಾಜ್ಯದ ಜನರಿಗೆ ಒಳಿತು ಮಾಡುವ ಈ ಯೋಜನೆಗೆ ರೈತರು ಭೂಮಿ ನೀಡಲು ಒಪ್ಪಿಗೆ ನೀಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಅವರು ಪ್ರತಿಪಾದಿಸಿದರು.