ಸಾಗರದಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಪ್ರೊ. ಎಂ.ಎಸ್. ವೇಣುಗೋಪಾಲ್, ಎಂ.ಕೆ. ಶ್ರೀಧರ್ ಹಾಗೂ ನಿರಂಜನ್ ಅತಿಥಿಗಳಾಗಿದ್ದರು. ಅತಿಥಿಗಳು ಹಾಗೂ ಪ್ರೇಕ್ಷರ ನಡುವೆ ಅವರ ಜೀವನಾನುಭವವನ್ನು ಹಂಚಿಕೊಳ್ಳುವ ಕಾರ್ಯಕ್ರಮ ಅದಾಗಿತ್ತು. ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಎಂ.ಕೆ. ಶ್ರೀಧರ್ ಅವರ ಉತ್ತರ ನಮ್ಮೆಲ್ಲರ ಕಣ್ಣು ತೆರೆಸುವಂತದ್ದು. ಅದು ಏನು ಎಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.