ರಾಜ್ಯ ಸರ್ಕಾರ ಮಂಜುನಾಥ್ ಅವರನ್ನು 2023ರ ಮಾರ್ಚ್ನಲ್ಲೇ ಯುವಿಸಿಇ ನಿರ್ದೇಶಕರನ್ನಾಗಿ ಆಯ್ಕೆ ಮಾಡಿತ್ತು. ಆದರೆ, ಅವರು ಸ್ಥಾನದ ಜವಾಬ್ದಾರಿ ವಹಿಸಿಕೊಂಡಿರಲಿಲ್ಲ. ಹೆಚ್ಚುವರಿ ಸಮಯ ಕೇಳುತ್ತಲೇ ಬಂದಿದ್ದರು. ಅವರಿಗೆ ನೀಡಿದ್ದ ಸಮಯಾವಕಾಶದಂತೆ ಇದೇ ವರ್ಷದ ಜ.31ಕ್ಕೆ ಅವರು ಅಧಿಕಾರ ಸ್ವೀಕರಿಸಬೇಕಿತ್ತು. ಈಗ ಯುವಿಸಿಇ ಆಡಳಿತ ಮಂಡಳಿಗೆ ಪತ್ರ ಬರೆದಿರುವ ಅವರು, ಅಧಿಕಾರ ವಹಿಸಿಕೊಳ್ಳಬೇಕಾದರೆ ಸಂಬಳದ ಪ್ಯಾಕೇಜ್ ಜತೆಗೆ ಕೆಲ ಷರತ್ತುಗಳನ್ನೂ ಪೂರೈಸುವಂತೆ, ಅದಕ್ಕೆ ಅಗತ್ಯವಾದ ಭತ್ಯೆ ನಿಗದಿ ಮಾಡುವಂತೆ ಕೋರಿದ್ದಾರೆ. ‘ಇಲ್ಲದಿದ್ದರೆ ತಮ್ಮ ಬಳಿ ಇತರೆ ಸರ್ಕಾರಿ ಸಂಸ್ಥೆಗಳಿಂದ ಆಹ್ವಾನವಿದ್ದು, ಯುವಿಸಿಇ ಜವಾಬ್ದಾರಿ ವಹಿಸಿಕೊಳ್ಳುವ ಕುರಿತು ಪರಿಶೀಲಿಸಬೇಕಾಗುತ್ತದೆ. ಯಾವುದಕ್ಕೂ ಪ್ರತಿಕ್ರಿಯಿಸಿ’ ಎಂದಿದ್ದಾರೆ.