<figcaption>""</figcaption>.<p><strong>ಬೆಂಗಳೂರು:</strong> ದಸರಾ ಬಳಿಕ ತರಕಾರಿ ದರಗಳಲ್ಲಿ ಏರಿಳಿತ ಕಂಡು ಬಂದಿವೆ. ದುಬಾರಿಯಾಗಿದ್ದ ತರಕಾರಿಗಳ ದರ ದಿಢೀರ್ ಕುಸಿದಿವೆ. ಅಗ್ಗವಾಗಿದ್ದ ತರಕಾರಿ ಬೆಲೆಗಳೂ ಏರಿವೆ.</p>.<p>ಈ ಸಲ ದಸರಾಕ್ಕೆ ತರಕಾರಿ ದುಬಾರಿ ಎನಿಸಿಕೊಳ್ಳಲಿಲ್ಲ. ಆದರೆ, ಭಾರಿ ಮಳೆಯಿಂದ ಹಾನಿಗೆ ಒಳಗಾಗಿದ್ದ ತರಕಾರಿಗಳು ಮಾತ್ರ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿದ್ದವು. ಆವಕ ಪ್ರಮಾಣದ ಕುಸಿತದಿಂದ ಬೆಲೆಗಳು ಸಾಮಾನ್ಯವಾಗಿ ಏರಿದ್ದವು.</p>.<p>ಹೂಕೋಸು, ಎಲೆಕೋಸು, ಕ್ಯಾಪ್ಸಿಕಂ, ಮೆಣಸಿನಕಾಯಿ, ಬೀಟ್ರೂಟ್, ಬೆಂಡೆಕಾಯಿ, ಆಲೂಗಡ್ಡೆ ಬೆಲೆ ಏರಿಕೆ ಕಂಡಿವೆ. ಶುಂಠಿ ದರ ದಿಢೀರ್ ಕುಸಿದಿದ್ದು, ಪ್ರತಿ ಕೆ.ಜಿ.ಗೆ ₹50ರಿಂದ ₹80ರಂತೆ ಮಾರಾಟ ವಾಗುತ್ತಿದೆ. ಕ್ಯಾರೆಟ್, ಬೆಳ್ಳುಳ್ಳಿ, ಈರುಳ್ಳಿ ದರಗಳು ಪ್ರತಿದಿನವೂ ಏರಿಳಿತ ಕಾಣುತ್ತಿವೆ.</p>.<p>‘ಈರುಳ್ಳಿಯ ಸಗಟು ದರ ಪ್ರತಿ ಕೆ.ಜಿಗೆ ₹70 ಹಾಗೂ ಆಲೂಗಡ್ಡೆಯ ದರ ಪ್ರತಿ ಕೆ.ಜಿಗೆ ₹40ರಷ್ಟು ಮಾತ್ರ ಇದೆ’ ಎಂದು ಬೆಂಗಳೂರು ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಉದಯ್ ಶಂಕರ್ ತಿಳಿಸಿದರು.</p>.<p>‘ಬೇಡಿಕೆ ಇದ್ದ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಬರಲಾರಂಭಿಸಿದೆ. ಇದರಿಂದ ದುಬಾರಿಯಾಗಿದ್ದ ತರಕಾರಿಗಳ ದರ ಕೊಂಚ ಇಳಿದಿದೆ. ಚಳಿಗಾಲ ಆರಂಭಗೊಂಡಿರುವುದರಿಂದ ಈ ಅವಧಿಯಲ್ಲಿ ಬಳಕೆಯಾಗುವ ತರಕಾರಿಗಳ ದರ ಸಾಮಾನ್ಯವಾಗಿಯೇ ಏರತೊಡಗಿದೆ’ ಎನ್ನುತ್ತಾರೆ ದಾಸನಪುರ ಎಪಿಎಂಸಿ ಉಪ ಪ್ರಾಂಗಣದ ತರಕಾರಿ-ಸೊಪ್ಪು ವರ್ತಕ ಕುಮಾರ್.</p>.<p class="Subhead">ಚಕ್ಕೋತ ಸೊಪ್ಪು ದುಬಾರಿ: ಸೊಪ್ಪುಗಳಲ್ಲಿ ಚಕ್ಕೋತ ದರ ಏರಿದ್ದು, ಪ್ರತಿ ಕಟ್ಟಿಗೆ ₹30ರಂತೆ ಮಾರಾಟ ಆಗುತ್ತಿದೆ. ಕೊತ್ತಂಬರಿ ಹಾಗೂ ಪಾಲಕ್ ದರಗಳು ತಲಾ ₹5 ಹೆಚ್ಚಳ ಕಂಡಿವೆ. ದಂಟು, ಸಬ್ಬಕ್ಕಿ, ಮೆಂತ್ಯ ಹಾಗೂ ಹರಿವೆ ಸೊಪ್ಪಿನ ದರಗಳು ಕಡಿಮೆ ಇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಬೆಂಗಳೂರು:</strong> ದಸರಾ ಬಳಿಕ ತರಕಾರಿ ದರಗಳಲ್ಲಿ ಏರಿಳಿತ ಕಂಡು ಬಂದಿವೆ. ದುಬಾರಿಯಾಗಿದ್ದ ತರಕಾರಿಗಳ ದರ ದಿಢೀರ್ ಕುಸಿದಿವೆ. ಅಗ್ಗವಾಗಿದ್ದ ತರಕಾರಿ ಬೆಲೆಗಳೂ ಏರಿವೆ.</p>.<p>ಈ ಸಲ ದಸರಾಕ್ಕೆ ತರಕಾರಿ ದುಬಾರಿ ಎನಿಸಿಕೊಳ್ಳಲಿಲ್ಲ. ಆದರೆ, ಭಾರಿ ಮಳೆಯಿಂದ ಹಾನಿಗೆ ಒಳಗಾಗಿದ್ದ ತರಕಾರಿಗಳು ಮಾತ್ರ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿದ್ದವು. ಆವಕ ಪ್ರಮಾಣದ ಕುಸಿತದಿಂದ ಬೆಲೆಗಳು ಸಾಮಾನ್ಯವಾಗಿ ಏರಿದ್ದವು.</p>.<p>ಹೂಕೋಸು, ಎಲೆಕೋಸು, ಕ್ಯಾಪ್ಸಿಕಂ, ಮೆಣಸಿನಕಾಯಿ, ಬೀಟ್ರೂಟ್, ಬೆಂಡೆಕಾಯಿ, ಆಲೂಗಡ್ಡೆ ಬೆಲೆ ಏರಿಕೆ ಕಂಡಿವೆ. ಶುಂಠಿ ದರ ದಿಢೀರ್ ಕುಸಿದಿದ್ದು, ಪ್ರತಿ ಕೆ.ಜಿ.ಗೆ ₹50ರಿಂದ ₹80ರಂತೆ ಮಾರಾಟ ವಾಗುತ್ತಿದೆ. ಕ್ಯಾರೆಟ್, ಬೆಳ್ಳುಳ್ಳಿ, ಈರುಳ್ಳಿ ದರಗಳು ಪ್ರತಿದಿನವೂ ಏರಿಳಿತ ಕಾಣುತ್ತಿವೆ.</p>.<p>‘ಈರುಳ್ಳಿಯ ಸಗಟು ದರ ಪ್ರತಿ ಕೆ.ಜಿಗೆ ₹70 ಹಾಗೂ ಆಲೂಗಡ್ಡೆಯ ದರ ಪ್ರತಿ ಕೆ.ಜಿಗೆ ₹40ರಷ್ಟು ಮಾತ್ರ ಇದೆ’ ಎಂದು ಬೆಂಗಳೂರು ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಉದಯ್ ಶಂಕರ್ ತಿಳಿಸಿದರು.</p>.<p>‘ಬೇಡಿಕೆ ಇದ್ದ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಬರಲಾರಂಭಿಸಿದೆ. ಇದರಿಂದ ದುಬಾರಿಯಾಗಿದ್ದ ತರಕಾರಿಗಳ ದರ ಕೊಂಚ ಇಳಿದಿದೆ. ಚಳಿಗಾಲ ಆರಂಭಗೊಂಡಿರುವುದರಿಂದ ಈ ಅವಧಿಯಲ್ಲಿ ಬಳಕೆಯಾಗುವ ತರಕಾರಿಗಳ ದರ ಸಾಮಾನ್ಯವಾಗಿಯೇ ಏರತೊಡಗಿದೆ’ ಎನ್ನುತ್ತಾರೆ ದಾಸನಪುರ ಎಪಿಎಂಸಿ ಉಪ ಪ್ರಾಂಗಣದ ತರಕಾರಿ-ಸೊಪ್ಪು ವರ್ತಕ ಕುಮಾರ್.</p>.<p class="Subhead">ಚಕ್ಕೋತ ಸೊಪ್ಪು ದುಬಾರಿ: ಸೊಪ್ಪುಗಳಲ್ಲಿ ಚಕ್ಕೋತ ದರ ಏರಿದ್ದು, ಪ್ರತಿ ಕಟ್ಟಿಗೆ ₹30ರಂತೆ ಮಾರಾಟ ಆಗುತ್ತಿದೆ. ಕೊತ್ತಂಬರಿ ಹಾಗೂ ಪಾಲಕ್ ದರಗಳು ತಲಾ ₹5 ಹೆಚ್ಚಳ ಕಂಡಿವೆ. ದಂಟು, ಸಬ್ಬಕ್ಕಿ, ಮೆಂತ್ಯ ಹಾಗೂ ಹರಿವೆ ಸೊಪ್ಪಿನ ದರಗಳು ಕಡಿಮೆ ಇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>