ಬೆಂಗಳೂರು: ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವವರ ಮೇಲಿನ ಹಲ್ಲೆ, ದಾಳಿಯನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ರಜತ ಮಹೋತ್ಸವವನ್ನು ಸೋಮವಾರ ದೆಹಲಿಯಿಂದ ವಿಡಿಯೊ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸಮರ ಸೇನಾನಿಗಳ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಅವರಿಗೆ ₹ 50 ಲಕ್ಷದ ವಿಮಾ ರಕ್ಷೆ ನೀಡಲಾಗಿದೆ ಎಂದರು.
I want to state it clearly- violence, abuse and rude behaviour against front-line workers is not acceptable: PM Narendra Modi pic.twitter.com/wVVBBvCo1X
ವೈದ್ಯಕೀಯ ಸಲಕರಣೆ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆಯ ಹಾದಿಯಲ್ಲಿದೆ. ದೇಶ ಈಗಾಗಲೇ 1 ಕೋಟಿ ಪಿಪಿಇ ಕಿಟ್, 1.25 ಕೋಟಿ ಎನ್ 95 ಮುಖಗವಸು ತಯಾರಿಸಿದೆ. 30 ಸಾವಿರ ಹೆಚ್ಚುವರಿ ಎಂಬಿಬಿಎಸ್ ಹಾಗೂ 15 ಸಾವಿರ ಸ್ನಾತಕೋತ್ತರ ಸೀಟುಗಳನ್ನು ಸರ್ಕಾರ ಹೆಚ್ಚಿಸಿದೆ. 2025ರೊಳಗೆ ದೇಶದಿಂದ ಕ್ಷಯ ರೋಗ ನಿರ್ಮೂಲನೆ ಮಾಡುವ ಸಂಕಲ್ಪ ಮಾಡಲಾಗಿದೆ ಎಂದರು.
ರಾಜ್ಯವು ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ ಅವರು, ವಿಶ್ವವಿದ್ಯಾಲಯದ ಸಾಧನೆಗಳನ್ನು ಸಹ ಕೊಂಡಾಡಿದರು.
The virus may be an invisible enemy. But our warriors, medical workers are invincible. In the battle of Invisible vs Invincible, our medical workers are sure to win: PM Narendra Modi pic.twitter.com/vqo5QIivfS