‘ಹೊಸ ವಿನ್ಯಾಸ ಚೆನ್ನಾಗಿದೆ. ಇನ್ನಷ್ಟು ವಿಭಾಗಗಳು ಬೇಕಿತ್ತು’ ಎನ್ನುವುದು ಬೆಂಗಳೂರಿನ ವಕೀಲ ಕೆ.ಬಿ.ಕೆ.ಸ್ವಾಮಿ ಅವರ ಅಭಿಪ್ರಾಯ. ‘ಆರೋಗ್ಯ, ತಂತ್ರಜ್ಞಾನ, ಆಟೋಮೊಬೈಲ್, ಆಹಾರ ಕುರಿತಂತೆ ಪ್ರತ್ಯೇಕ ವಿಭಾಗಗಳನ್ನು ಮಾಡಿರುವುದು ಓದುಗರಿಗೆ ಅನುಕೂಲ ಮಾಡಿಕೊಟ್ಟಿದೆ. ಇದೇ ರೀತಿಕೋರ್ಟ್, ಕಾನೂನು, ಸಂವಿಧಾನಾತ್ಮಕ ವಿಷಯಗಳಿಗಾಗಿ ಪ್ರತ್ಯೇಕ ವಿಭಾಗವನ್ನು ಮಾಡಬೇಕಿತ್ತು’ ಎಂದು ಅವರು ಸಲಹೆ ನೀಡಿದ್ದಾರೆ.