ಹಜ್ ಭವನಕ್ಕೆ ನಿವೇಶನ ನೀಡಿ, ಹಣ ಕೊಟ್ಟಿದ್ದು ನಮ್ಮ ಸರ್ಕಾರ ಇದ್ದಾಗ. ಅದಕ್ಕೆ ಟಿಪ್ಪು ಹೆಸರಿಟ್ಟು ವಿವಾದ ಎಬ್ಬಿಸಲು ಮುಂದಾಗಿರುವುದು ಸರಿಯಲ್ಲ. ಹಜ್ ಭವನ ಎಂದೇ ಇರಲಿ. ಇಲ್ಲವಾದರೆ, ಅಬ್ದುಲ್ ಕಲಾಂ ಹೆಸರಿಡಲು ನಮ್ಮ ತಕರಾರಿಲ್ಲ. ಅನಗತ್ಯವಾಗಿ ರಾಜ್ಯದ ವಾತಾವರಣ ಕಲುಷಿತ ಮಾಡುವುದು ಬೇಡ ಎಂದೂ ಅವರು ಹೇಳಿದರು.