‘ಸರಾಗವಾಗಿ ಹರಿಯದ ಚರಂಡಿ ನೀರಿನ ಕಾರಣ ಸೊಳ್ಳೆಗಳು ಹೆಚ್ಚಿವೆ. ಫಾಗಿಂಗ್ ಮಾಡಿಲ್ಲ, ಇಂದು ಮಗು ಮೃತಪಟ್ಟ ನಂತರ ಗ್ರಾಮ ಪಂಚಾಯ್ತಿ ಆಡಳಿತ ಎಚ್ಚೆತ್ತುಕೊಂಡಿದೆ, ದೇವಸ್ಥಾನದ ಆವರಣದ ಬಳಿ ಮಾತ್ರ ಹೆಚ್ಚಾಗಿ ಸ್ವಚ್ಛತೆ ಮಾಡುತ್ತಾರೆ, ಉಳಿದೆಡೆ ಗಮನ ಹರಿಸುವುದಿಲ್ಲ, ಪಿಡಿಓ ಅವರನ್ನು ಕೇಳಿದರೆ ಸಿಡುಕಿನಿಂದ ಮಾತನಾಡಿಸುತ್ತಾರೆ, ಪಿಡಿಓ ಮೊದಲೇ ಸ್ವಚ್ಛತೆಗೊಳಿಸಿದ್ದರೆ ಮಗು ಮೃತಪಡುತ್ತಿರಲಿಲ್ಲ’ ಎಂದು ಗ್ರಾಮದ ಪ್ರೇಮಾ ಚೋಪಡೆ, ಗಂಗೂಬಾಯಿ ಗಾಯಕವಾಡ, ರಂಗನಾಥ ತೆಳಗಡೆ ದೂರಿದರು.