<p><strong>ಬೆಂಗಳೂರು:</strong> `ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ 12 ಮಂದಿ ಬಿಜೆಪಿ ಶಾಸಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪಕ್ಷದ ವರ್ಚಸ್ಸಿಗೆ ದೊಡ್ಡ ಪೆಟ್ಟಾಗಲಿದೆ~ ಎಂದು ಪಕ್ಷದ ವಕ್ತಾರ ಸಿ.ಟಿ.ರವಿ ಹೇಳಿದ್ದಾರೆ.<br /> <br /> `ಅಡ್ಡಮತದಾನ ಮಾಡಿದ್ದು ಯಾರು ಎಂಬುದು ಗೊತ್ತಾಗಿದೆ. ಇದರ ಪತ್ತೆಗೆ ಸಿಬಿಐ ತನಿಖೆ ಅಗತ್ಯ ಇಲ್ಲ. ಪಕ್ಷದ ಎಲ್ಲ ಮುಖಂಡರು ಈ ಕುರಿತು ಚರ್ಚಿಸಬೇಕು. ಈ ಪ್ರವೃತ್ತಿಗೆ ತಕ್ಷಣ ಕಡಿವಾಣ ಹಾಕದಿದ್ದರೆ ಕೊಳೆತ ಹಣ್ಣುಗಳ ಜತೆ ಒಳ್ಳೆಯ ಹಣ್ಣುಗಳೂ ಹಾಳಾಗುತ್ತವೆ~ ಎಂದು ರವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> `ನನ್ನ ಜತೆ ಇದ್ದರೆ ಸಾಕು; ಏನು ಮಾಡಿದರೂ ಕ್ಷಮೆ ಎನ್ನುವ ನೀತಿಯನ್ನು ಪಕ್ಷದ ಪ್ರಮುಖ ನಾಯಕರು ಕೈಬಿಡಬೇಕು. ಪಕ್ಷಕ್ಕೆ ಮೋಸ ಮಾಡಿದವರು ಮುಂದಿನ ದಿನಗಳಲ್ಲಿ ಮುಖಂಡರನ್ನೂ ವಂಚಿಸುವರು. ಮುಖಂಡರು ಇದನ್ನು ಅರಿಯಬೇಕು~ ಎಂದರು.<br /> <br /> ಅವಕಾಶವಾದಿಗಳ ಕೂಟ ರಚಿಸಿಕೊಂಡಿರುವ ಜೆಡಿಎಸ್ನ ಕುಮ್ಮಕ್ಕಿನಿಂದಾಗಿ ಕೆಲವರು ಅಡ್ಡಮತದಾನ ಮಾಡಿದ್ದಾರೆ. ಇದಕ್ಕೆ ತಕ್ಕ ಶಾಸ್ತಿ ಆಗಬೇಕು ಎಂದೂ ಒತ್ತಾಯಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ 12 ಮಂದಿ ಬಿಜೆಪಿ ಶಾಸಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪಕ್ಷದ ವರ್ಚಸ್ಸಿಗೆ ದೊಡ್ಡ ಪೆಟ್ಟಾಗಲಿದೆ~ ಎಂದು ಪಕ್ಷದ ವಕ್ತಾರ ಸಿ.ಟಿ.ರವಿ ಹೇಳಿದ್ದಾರೆ.<br /> <br /> `ಅಡ್ಡಮತದಾನ ಮಾಡಿದ್ದು ಯಾರು ಎಂಬುದು ಗೊತ್ತಾಗಿದೆ. ಇದರ ಪತ್ತೆಗೆ ಸಿಬಿಐ ತನಿಖೆ ಅಗತ್ಯ ಇಲ್ಲ. ಪಕ್ಷದ ಎಲ್ಲ ಮುಖಂಡರು ಈ ಕುರಿತು ಚರ್ಚಿಸಬೇಕು. ಈ ಪ್ರವೃತ್ತಿಗೆ ತಕ್ಷಣ ಕಡಿವಾಣ ಹಾಕದಿದ್ದರೆ ಕೊಳೆತ ಹಣ್ಣುಗಳ ಜತೆ ಒಳ್ಳೆಯ ಹಣ್ಣುಗಳೂ ಹಾಳಾಗುತ್ತವೆ~ ಎಂದು ರವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> `ನನ್ನ ಜತೆ ಇದ್ದರೆ ಸಾಕು; ಏನು ಮಾಡಿದರೂ ಕ್ಷಮೆ ಎನ್ನುವ ನೀತಿಯನ್ನು ಪಕ್ಷದ ಪ್ರಮುಖ ನಾಯಕರು ಕೈಬಿಡಬೇಕು. ಪಕ್ಷಕ್ಕೆ ಮೋಸ ಮಾಡಿದವರು ಮುಂದಿನ ದಿನಗಳಲ್ಲಿ ಮುಖಂಡರನ್ನೂ ವಂಚಿಸುವರು. ಮುಖಂಡರು ಇದನ್ನು ಅರಿಯಬೇಕು~ ಎಂದರು.<br /> <br /> ಅವಕಾಶವಾದಿಗಳ ಕೂಟ ರಚಿಸಿಕೊಂಡಿರುವ ಜೆಡಿಎಸ್ನ ಕುಮ್ಮಕ್ಕಿನಿಂದಾಗಿ ಕೆಲವರು ಅಡ್ಡಮತದಾನ ಮಾಡಿದ್ದಾರೆ. ಇದಕ್ಕೆ ತಕ್ಕ ಶಾಸ್ತಿ ಆಗಬೇಕು ಎಂದೂ ಒತ್ತಾಯಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>