<p><strong>ಸಾಗರ:</strong> ‘ಆಧುನಿಕತೆಯ ಪ್ರಭಾವದಿಂದ ತ್ಯಾಜ್ಯ ಎಂಬುದು ವಸ್ತುಗಳ ವಲಯದಿಂದ ವ್ಯಕ್ತಿಗಳ ವಲಯಕ್ಕೆ ಪ್ರವೇಶಿಸುತ್ತಿದೆ’ ಎಂದು ಸಮಾಜ ವಿಜ್ಞಾನಿ ಶಿವವಿಶ್ವನಾಥನ್ ಆತಂಕ ವ್ಯಕ್ತಪಡಿಸಿದರು. ಹೆಗ್ಗೋಡಿನಲ್ಲಿ ನಡೆಯುತ್ತಿರುವ ‘ನೀನಾಸಂ ಸಂಸ್ಕೃತಿ ಶಿಬಿರ’ದಲ್ಲಿ ಭಾನುವಾರ ‘ತ್ಯಾಜ್ಯ ಪರಿಕಲ್ಪನೆಯ ಹೊಸ ಹೊಳಹುಗಳು’ ವಿಷಯದ ಮೇಲೆ ಮಾತನಾಡಿದರು.<br /> <br /> ‘ವ್ಯಕ್ತಿಗಳ ವಲಯಕ್ಕೆ ಪ್ರವೇಶಿಸುತ್ತಿರುವ ತ್ಯಾಜ್ಯದ ದೃಷ್ಟಿಕೋನದಿಂದಾಗಿ ಹಿರಿಯರನ್ನು ನಿಷ್ಪ್ರಯೋಜಕ ಎಂದು ಪರಿಗಣಿಸಲಾಗುತ್ತಿದೆ. ಹಿರಿಯರಿಂದ ಪಡೆಯುತ್ತಿದ್ದ ಜ್ಞಾನವನ್ನೇ ಅಂತರ್ಜಾಲದ ಮೂಲಕವೂ ಪಡೆಯಬಹುದೆಂಬ ಅಹಂ ಪ್ರದರ್ಶಿಸುತ್ತಿದ್ದೇವೆ’ ಎಂದು ವಿಶ್ಲೇಷಿಸಿದರು.<br /> <br /> ‘ಈ ಪಲ್ಲಟ ಅಮೆರಿಕ, ಆಫ್ರಿಕಾದಂತಹ ಬಡ ದೇಶಕ್ಕೆ ನೆರವು ನೀಡಿದರೆ ಪ್ರಯೋಜನವಿಲ್ಲ ಎಂಬ ಸನ್ನಿವೇಶವನ್ನೂ ನಿರ್ಮಿಸುತ್ತಿದೆ. ದೇಶದಲ್ಲಿ ದುರ್ಬಲರ ಸೇವೆ ಮಾಡಿದ ಮದರ್ ತೆರೆಸಾ ಕೂಡ ಅಪ್ರಸ್ತುತ ಎನಿಸಿದರೆ ಆಶ್ಚರ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.<br /> ಹಳ್ಳಿಗಳಿಗೆ ನಗರದ ದೊಡ್ಡ ಕೊಡುಗೆಯೇ ತ್ಯಾಜ್ಯ. ಇದನ್ನು ವಿಂಗಡಿಸುವವರಲ್ಲಿ, ವಿಲೇವಾರಿ ಮಾಡುವವರಲ್ಲೇ ಮೇಲು–ಕೀಳಿನ ಭಾವ ಸೃಷ್ಟಿಯಾಗುತ್ತಿದೆ. ವಿಲೇವಾರಿ ಮಾಡುವವರಿಗೂ ಘನತೆಯ ಬದುಕುಂಟು ಎಂದು ಅರಿಯಬೇಕಿದೆ ಎಂದರು.<br /> <br /> ‘ಹೊಸ ನಗರಗಳನ್ನು ನಿರ್ಮಾಣ ಮಾಡುವಾಗ ಅನೇಕ ಗ್ರಾಮಗಳನ್ನು ನೆಲಸಮ ಮಾಡಿದ್ದೇವೆ. ಈ ಪ್ರದೇಶಗಳಲ್ಲಿ ಪ್ರಾಕೃತಿಕ ತ್ಯಾಜ್ಯಗಳು ಹೇರಳವಾಗಿವೆ ಎಂಬುದನ್ನು ಮರೆತಿದ್ದೇವೆ. ಹಳ್ಳಿಯ ಭಗ್ನಾವಶೇಷಗಳು ಅಪ್ರಯೋಜಕವಲ್ಲ. ಅವುಗಳು ನೆನಪುಗಳನ್ನು ಕಟ್ಟಿಕೊಡುವ ಸಾಧನಗಳಾಗಿವೆ’ ಎಂದು ಬಣ್ಣಿಸಿದರು.<br /> <br /> ‘ತ್ಯಾಜ್ಯವೆಂಬುದು ದೇಶದಲ್ಲಿ ಅನೌಪಚಾರಿಕ ಅರ್ಥಶಾಸ್ತ್ರದಂತೆ, ರಾಜಕೀಯ ಕ್ಷೇತ್ರದ ಪ್ರಮುಖ ಭಾಗವೆನ್ನುವುದನ್ನು ಮರೆಯಲಾಗದು. ತಳಮಟ್ಟದ ಮಂದಿ ಕೈಗೊಳ್ಳುವ ವೃತ್ತಿಗಳ ಮೂಲಕವೇ ದೇಶದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕೆ ವಿನಾ ಪುಸ್ತಕಗಳ ಆಧಾರದ ಮೇಲೆ ಅಲ್ಲ’ ಎಂದು ಪ್ರತಿಪಾದಿಸಿದರು.<br /> <br /> ಇದಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ಶನಿವಾರ ಪ್ರದರ್ಶನಗೊಂಡ ‘ಚಿರಕುಮಾರ ಸಭಾ’ ನಾಟಕದ ಬಗ್ಗೆ ಚರ್ಚೆ, ಸಂವಾದ ನಡೆಯಿತು. ಮಧ್ಯಾಹ್ನ ವೈದೇಹಿ ಅವರ ಕಥೆ ಆಧರಿಸಿದ ’ಕ್ರೌಂಚ ಪಕ್ಷಿಗಳು’ ನಾಟಕವನ್ನು ನೀನಾಸಂ ಬಳಗದ ಕಲಾವಿದರು ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ‘ಆಧುನಿಕತೆಯ ಪ್ರಭಾವದಿಂದ ತ್ಯಾಜ್ಯ ಎಂಬುದು ವಸ್ತುಗಳ ವಲಯದಿಂದ ವ್ಯಕ್ತಿಗಳ ವಲಯಕ್ಕೆ ಪ್ರವೇಶಿಸುತ್ತಿದೆ’ ಎಂದು ಸಮಾಜ ವಿಜ್ಞಾನಿ ಶಿವವಿಶ್ವನಾಥನ್ ಆತಂಕ ವ್ಯಕ್ತಪಡಿಸಿದರು. ಹೆಗ್ಗೋಡಿನಲ್ಲಿ ನಡೆಯುತ್ತಿರುವ ‘ನೀನಾಸಂ ಸಂಸ್ಕೃತಿ ಶಿಬಿರ’ದಲ್ಲಿ ಭಾನುವಾರ ‘ತ್ಯಾಜ್ಯ ಪರಿಕಲ್ಪನೆಯ ಹೊಸ ಹೊಳಹುಗಳು’ ವಿಷಯದ ಮೇಲೆ ಮಾತನಾಡಿದರು.<br /> <br /> ‘ವ್ಯಕ್ತಿಗಳ ವಲಯಕ್ಕೆ ಪ್ರವೇಶಿಸುತ್ತಿರುವ ತ್ಯಾಜ್ಯದ ದೃಷ್ಟಿಕೋನದಿಂದಾಗಿ ಹಿರಿಯರನ್ನು ನಿಷ್ಪ್ರಯೋಜಕ ಎಂದು ಪರಿಗಣಿಸಲಾಗುತ್ತಿದೆ. ಹಿರಿಯರಿಂದ ಪಡೆಯುತ್ತಿದ್ದ ಜ್ಞಾನವನ್ನೇ ಅಂತರ್ಜಾಲದ ಮೂಲಕವೂ ಪಡೆಯಬಹುದೆಂಬ ಅಹಂ ಪ್ರದರ್ಶಿಸುತ್ತಿದ್ದೇವೆ’ ಎಂದು ವಿಶ್ಲೇಷಿಸಿದರು.<br /> <br /> ‘ಈ ಪಲ್ಲಟ ಅಮೆರಿಕ, ಆಫ್ರಿಕಾದಂತಹ ಬಡ ದೇಶಕ್ಕೆ ನೆರವು ನೀಡಿದರೆ ಪ್ರಯೋಜನವಿಲ್ಲ ಎಂಬ ಸನ್ನಿವೇಶವನ್ನೂ ನಿರ್ಮಿಸುತ್ತಿದೆ. ದೇಶದಲ್ಲಿ ದುರ್ಬಲರ ಸೇವೆ ಮಾಡಿದ ಮದರ್ ತೆರೆಸಾ ಕೂಡ ಅಪ್ರಸ್ತುತ ಎನಿಸಿದರೆ ಆಶ್ಚರ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.<br /> ಹಳ್ಳಿಗಳಿಗೆ ನಗರದ ದೊಡ್ಡ ಕೊಡುಗೆಯೇ ತ್ಯಾಜ್ಯ. ಇದನ್ನು ವಿಂಗಡಿಸುವವರಲ್ಲಿ, ವಿಲೇವಾರಿ ಮಾಡುವವರಲ್ಲೇ ಮೇಲು–ಕೀಳಿನ ಭಾವ ಸೃಷ್ಟಿಯಾಗುತ್ತಿದೆ. ವಿಲೇವಾರಿ ಮಾಡುವವರಿಗೂ ಘನತೆಯ ಬದುಕುಂಟು ಎಂದು ಅರಿಯಬೇಕಿದೆ ಎಂದರು.<br /> <br /> ‘ಹೊಸ ನಗರಗಳನ್ನು ನಿರ್ಮಾಣ ಮಾಡುವಾಗ ಅನೇಕ ಗ್ರಾಮಗಳನ್ನು ನೆಲಸಮ ಮಾಡಿದ್ದೇವೆ. ಈ ಪ್ರದೇಶಗಳಲ್ಲಿ ಪ್ರಾಕೃತಿಕ ತ್ಯಾಜ್ಯಗಳು ಹೇರಳವಾಗಿವೆ ಎಂಬುದನ್ನು ಮರೆತಿದ್ದೇವೆ. ಹಳ್ಳಿಯ ಭಗ್ನಾವಶೇಷಗಳು ಅಪ್ರಯೋಜಕವಲ್ಲ. ಅವುಗಳು ನೆನಪುಗಳನ್ನು ಕಟ್ಟಿಕೊಡುವ ಸಾಧನಗಳಾಗಿವೆ’ ಎಂದು ಬಣ್ಣಿಸಿದರು.<br /> <br /> ‘ತ್ಯಾಜ್ಯವೆಂಬುದು ದೇಶದಲ್ಲಿ ಅನೌಪಚಾರಿಕ ಅರ್ಥಶಾಸ್ತ್ರದಂತೆ, ರಾಜಕೀಯ ಕ್ಷೇತ್ರದ ಪ್ರಮುಖ ಭಾಗವೆನ್ನುವುದನ್ನು ಮರೆಯಲಾಗದು. ತಳಮಟ್ಟದ ಮಂದಿ ಕೈಗೊಳ್ಳುವ ವೃತ್ತಿಗಳ ಮೂಲಕವೇ ದೇಶದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕೆ ವಿನಾ ಪುಸ್ತಕಗಳ ಆಧಾರದ ಮೇಲೆ ಅಲ್ಲ’ ಎಂದು ಪ್ರತಿಪಾದಿಸಿದರು.<br /> <br /> ಇದಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ಶನಿವಾರ ಪ್ರದರ್ಶನಗೊಂಡ ‘ಚಿರಕುಮಾರ ಸಭಾ’ ನಾಟಕದ ಬಗ್ಗೆ ಚರ್ಚೆ, ಸಂವಾದ ನಡೆಯಿತು. ಮಧ್ಯಾಹ್ನ ವೈದೇಹಿ ಅವರ ಕಥೆ ಆಧರಿಸಿದ ’ಕ್ರೌಂಚ ಪಕ್ಷಿಗಳು’ ನಾಟಕವನ್ನು ನೀನಾಸಂ ಬಳಗದ ಕಲಾವಿದರು ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>