<p><strong>ಬೆಂಗಳೂರು: </strong>ಇನ್ನು ಮುಂದೆ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (ಎಸ್ಡಿಎಂಸಿ)ಗಳ ಬ್ಯಾಂಕ್ ಖಾತೆಗಳಿಗೆ ಸರ್ವ ಶಿಕ್ಷಣ ಅಭಿಯಾನದ (ಎಸ್ಎಸ್ಎ) ಅನುದಾನ ನೇರವಾಗಿ ವರ್ಗವಾಗಲಿದೆ.<br /> <br /> ಅನುದಾನ ಬಿಡುಗಡೆಯಲ್ಲಿ ವಿಳಂಬ ಮತ್ತು ದುರುಪಯೋಗ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅನುದಾನ ಹಂಚಿಕೆ ವಿಕೇಂದ್ರೀಕರಣಗೊಳಿಸುವ ಉದ್ದೇಶವನ್ನೂ ಸಹ ಈ ವ್ಯವಸ್ಥೆ ಹೊಂದಿದ್ದು, ಎಲ್ಲ ಎಸ್ಡಿಎಂಸಿಗಳು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆ ತೆರೆಯುವುದು ಕಡ್ಡಾಯವಾಗಿದೆ. ಈ ಎಲ್ಲ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ತನ್ನ ಬಳಿ ಇಟ್ಟುಕೊಳ್ಳುವ ಎಸ್ಎಸ್ಎ, ಹಣಕಾಸಿನ ವ್ಯವಹಾರಗಳ ಮೇಲೆ ಪೂರ್ಣ ನಿಗಾ ವಹಿಸಲಿದೆ.<br /> <br /> ಎಸ್ಡಿಎಂಸಿಗಳಿಗೆ ಎಷ್ಟು ಹಣ ಹಂಚಿಕೆಯಾಗಿದೆ ಮತ್ತು ಎಷ್ಟು ಬಾಕಿ ಉಳಿದಿದೆ ಹಾಗೂ ಹೇಗೆ ವೆಚ್ಚ ಮಾಡಲಾಗಿದೆ ಸೇರಿದಂತೆ ಎಲ್ಲ ವಿವರಗಳನ್ನು ನಿರಂತರವಾಗಿ ಪರಿಶೀಲಿಸಲಿದೆ. ಈ ಮೂಲಕ ಸಕಾಲದಲ್ಲಿ ಮತ್ತು ಸಮರ್ಪಕವಾಗಿ ಅನುದಾನ ಬಳಕೆಯಾಗುವಂತೆ ಕ್ರಮ ಕೈಗೊಳ್ಳಲಿದೆ.<br /> <br /> ಮೊದಲು ಪ್ರತಿಯೊಂದು ಕಾರ್ಯಕ್ರಮಕ್ಕೆ ಹಲವು ಹಂತಗಳ ಅಧಿಕಾರಿಗಳ ಮೂಲಕ ಎಸ್ಡಿಎಂಸಿಗಳಿಗೆ ಅನುದಾನ ಬಿಡುಗಡೆಯಾಗುತ್ತಿತ್ತು. ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಅನುದಾನ ತಲುಪಿ, ನಂತರ ಎಸ್ಡಿಎಂಸಿಗಳಿಗೆ ಹಂಚಿಕೆಯಾಗುತ್ತಿತ್ತು.<br /> <br /> ಈ ಎಲ್ಲ ಪ್ರಕ್ರಿಯೆಗಳಿಂದ ಅನುದಾನ ತಲುಪುವುದು ವಿಳಂಬವಾಗಿ ಯೋಜನೆಅನುಷ್ಠಾನ ಮಂದಗತಿಯಲ್ಲಿ ಸಾಗುತ್ತಿದ್ದವು. ಜತೆಗೆ ತಾರತಮ್ಯ ಸಹ ನಡೆಯುತ್ತಿತ್ತು. ಅಧಿಕಾರಿಗಳ ಮನೋಭಿಲಾಷೆಗೆ ತಕ್ಕಂತೆ ಅನುದಾನ ಬಿಡುಗಡೆಯಾದ ಪ್ರಕರಣಗಳು ವರದಿಯಾಗಿದ್ದರಿಂದ ಈ ಬದಲಾವಣೆ ಮಾಡಲಾಗಿದೆ.<br /> <br /> `ನಿರ್ದಿಷ್ಟ ಯೋಜನೆಗೆ ಅನುದಾನ ಮೀಸಲಿಡಲಾಗುತ್ತಿತ್ತು. ಆದರೆ, ಪ್ರಧಾನ ಕಚೇರಿ ಗಮನಕ್ಕೆ ತಾರದೆ ಜಿಲ್ಲಾಮಟ್ಟದಲ್ಲೇ ಯೋಜನೆ ಮೂಲ ಸ್ವರೂಪವನ್ನೇ ಬದಲಾಯಿಸಿ ಇತರ ಯೋಜನೆಗಳಿಗೆ ಈ ಅನುದಾನ ಬಳಸಿಕೊಳ್ಳಲಾಗುತ್ತಿತ್ತು. ಇದರಿಂದ ಉದ್ದೇಶಿತ ಯೋಜನೆಗೆ ಅನುದಾನ ದೊರೆಯದೇ ವಿಫಲವಾಗುತ್ತಿತ್ತು' ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಸುಬೋಧ್ ಯಾದವ್ ಹೇಳಿದರು.<br /> <br /> `ಈ ಹೊಸ ವ್ಯವಸ್ಥೆಯಿಂದ ಎಸ್ಎಸ್ಎ ಅನುದಾನದ ಬಳಕೆ ವಿಕೇಂದ್ರೀಕರಣಕ್ಕೂ ಅವಕಾಶವಾಗಲಿದೆ ಮತ್ತು ವೆಚ್ಚದ ಬಗ್ಗೆ ನಿಗಾ ವಹಿಸುವುದು ಸುಲಭವಾಗಲಿದೆ. ಜತೆಗೆ ತಾರತಮ್ಯ ನಡೆದಿರುವ ಮೂಲವನ್ನೂ ಪತ್ತೆ ಮಾಡಬಹುದು. ನಿರ್ದಿಷ್ಟ ಯೋಜನೆಗೆ ಅನುದಾನ ಹಂಚಿಕೆಯಾದ ಸಂಪೂರ್ಣ ವಿವರ ಮತ್ತು ಯಾವ ಏಜೆನ್ಸಿ ಅಥವಾ ಸಂಸ್ಥೆಗೆ ಈ ಯೋಜನೆ ವಹಿಸಲಾಗಿದೆ ಎಂಬ ಪೂರ್ಣ ವಿವರ ನಮ್ಮ ಬಳಿ ಲಭ್ಯವಿರುತ್ತದೆ. ಈ ಅನುದಾನ ಯಾವ ರೀತಿ ಖರ್ಚು ಮಾಡಲಾಗುತ್ತಿದೆ ಎನ್ನುವುದನ್ನು ನಿರಂತರ ಪರಿಶೀಲಿಸಲಾಗುವುದು' ಎಂದರು.<br /> <br /> ಎಸ್ಡಿಎಂಸಿಗಳಿಗೆ ಬಿಡುಗಡೆಯಾದ ಅನುದಾನದ ವಿವರಗಳು ಡಿಡಿಪಿಐ ಮತ್ತು ಬಿಇಒಗೆ ದೊರೆಯಲಿದೆ. ಈ ಅಧಿಕಾರಿಗಳು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ಜತೆಗೂಡಿ ಎಸ್ಎಸ್ಎ ಅನುದಾನ ಬಳಕೆಯ ಉಸ್ತುವಾರಿ ವಹಿಸಲಿದ್ದಾರೆ.ಸದ್ಯಕ್ಕೆ ಎಸ್ಡಿಎಂಸಿಗಳ ಶೇ 80ರಷ್ಟು ಬ್ಯಾಂಕ್ ಖಾತೆಗಳ ವಿವರಗಳು ಎಸ್ಎಸ್ಎನಲ್ಲಿ ಲಭ್ಯ ಇದೆ. ಇದನ್ನು ರಿಶೀಲಿಸುವ ಕಾರ್ಯ ಇದೀಗ ಆರಂಭವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಇನ್ನು ಮುಂದೆ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (ಎಸ್ಡಿಎಂಸಿ)ಗಳ ಬ್ಯಾಂಕ್ ಖಾತೆಗಳಿಗೆ ಸರ್ವ ಶಿಕ್ಷಣ ಅಭಿಯಾನದ (ಎಸ್ಎಸ್ಎ) ಅನುದಾನ ನೇರವಾಗಿ ವರ್ಗವಾಗಲಿದೆ.<br /> <br /> ಅನುದಾನ ಬಿಡುಗಡೆಯಲ್ಲಿ ವಿಳಂಬ ಮತ್ತು ದುರುಪಯೋಗ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅನುದಾನ ಹಂಚಿಕೆ ವಿಕೇಂದ್ರೀಕರಣಗೊಳಿಸುವ ಉದ್ದೇಶವನ್ನೂ ಸಹ ಈ ವ್ಯವಸ್ಥೆ ಹೊಂದಿದ್ದು, ಎಲ್ಲ ಎಸ್ಡಿಎಂಸಿಗಳು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆ ತೆರೆಯುವುದು ಕಡ್ಡಾಯವಾಗಿದೆ. ಈ ಎಲ್ಲ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ತನ್ನ ಬಳಿ ಇಟ್ಟುಕೊಳ್ಳುವ ಎಸ್ಎಸ್ಎ, ಹಣಕಾಸಿನ ವ್ಯವಹಾರಗಳ ಮೇಲೆ ಪೂರ್ಣ ನಿಗಾ ವಹಿಸಲಿದೆ.<br /> <br /> ಎಸ್ಡಿಎಂಸಿಗಳಿಗೆ ಎಷ್ಟು ಹಣ ಹಂಚಿಕೆಯಾಗಿದೆ ಮತ್ತು ಎಷ್ಟು ಬಾಕಿ ಉಳಿದಿದೆ ಹಾಗೂ ಹೇಗೆ ವೆಚ್ಚ ಮಾಡಲಾಗಿದೆ ಸೇರಿದಂತೆ ಎಲ್ಲ ವಿವರಗಳನ್ನು ನಿರಂತರವಾಗಿ ಪರಿಶೀಲಿಸಲಿದೆ. ಈ ಮೂಲಕ ಸಕಾಲದಲ್ಲಿ ಮತ್ತು ಸಮರ್ಪಕವಾಗಿ ಅನುದಾನ ಬಳಕೆಯಾಗುವಂತೆ ಕ್ರಮ ಕೈಗೊಳ್ಳಲಿದೆ.<br /> <br /> ಮೊದಲು ಪ್ರತಿಯೊಂದು ಕಾರ್ಯಕ್ರಮಕ್ಕೆ ಹಲವು ಹಂತಗಳ ಅಧಿಕಾರಿಗಳ ಮೂಲಕ ಎಸ್ಡಿಎಂಸಿಗಳಿಗೆ ಅನುದಾನ ಬಿಡುಗಡೆಯಾಗುತ್ತಿತ್ತು. ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಅನುದಾನ ತಲುಪಿ, ನಂತರ ಎಸ್ಡಿಎಂಸಿಗಳಿಗೆ ಹಂಚಿಕೆಯಾಗುತ್ತಿತ್ತು.<br /> <br /> ಈ ಎಲ್ಲ ಪ್ರಕ್ರಿಯೆಗಳಿಂದ ಅನುದಾನ ತಲುಪುವುದು ವಿಳಂಬವಾಗಿ ಯೋಜನೆಅನುಷ್ಠಾನ ಮಂದಗತಿಯಲ್ಲಿ ಸಾಗುತ್ತಿದ್ದವು. ಜತೆಗೆ ತಾರತಮ್ಯ ಸಹ ನಡೆಯುತ್ತಿತ್ತು. ಅಧಿಕಾರಿಗಳ ಮನೋಭಿಲಾಷೆಗೆ ತಕ್ಕಂತೆ ಅನುದಾನ ಬಿಡುಗಡೆಯಾದ ಪ್ರಕರಣಗಳು ವರದಿಯಾಗಿದ್ದರಿಂದ ಈ ಬದಲಾವಣೆ ಮಾಡಲಾಗಿದೆ.<br /> <br /> `ನಿರ್ದಿಷ್ಟ ಯೋಜನೆಗೆ ಅನುದಾನ ಮೀಸಲಿಡಲಾಗುತ್ತಿತ್ತು. ಆದರೆ, ಪ್ರಧಾನ ಕಚೇರಿ ಗಮನಕ್ಕೆ ತಾರದೆ ಜಿಲ್ಲಾಮಟ್ಟದಲ್ಲೇ ಯೋಜನೆ ಮೂಲ ಸ್ವರೂಪವನ್ನೇ ಬದಲಾಯಿಸಿ ಇತರ ಯೋಜನೆಗಳಿಗೆ ಈ ಅನುದಾನ ಬಳಸಿಕೊಳ್ಳಲಾಗುತ್ತಿತ್ತು. ಇದರಿಂದ ಉದ್ದೇಶಿತ ಯೋಜನೆಗೆ ಅನುದಾನ ದೊರೆಯದೇ ವಿಫಲವಾಗುತ್ತಿತ್ತು' ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಸುಬೋಧ್ ಯಾದವ್ ಹೇಳಿದರು.<br /> <br /> `ಈ ಹೊಸ ವ್ಯವಸ್ಥೆಯಿಂದ ಎಸ್ಎಸ್ಎ ಅನುದಾನದ ಬಳಕೆ ವಿಕೇಂದ್ರೀಕರಣಕ್ಕೂ ಅವಕಾಶವಾಗಲಿದೆ ಮತ್ತು ವೆಚ್ಚದ ಬಗ್ಗೆ ನಿಗಾ ವಹಿಸುವುದು ಸುಲಭವಾಗಲಿದೆ. ಜತೆಗೆ ತಾರತಮ್ಯ ನಡೆದಿರುವ ಮೂಲವನ್ನೂ ಪತ್ತೆ ಮಾಡಬಹುದು. ನಿರ್ದಿಷ್ಟ ಯೋಜನೆಗೆ ಅನುದಾನ ಹಂಚಿಕೆಯಾದ ಸಂಪೂರ್ಣ ವಿವರ ಮತ್ತು ಯಾವ ಏಜೆನ್ಸಿ ಅಥವಾ ಸಂಸ್ಥೆಗೆ ಈ ಯೋಜನೆ ವಹಿಸಲಾಗಿದೆ ಎಂಬ ಪೂರ್ಣ ವಿವರ ನಮ್ಮ ಬಳಿ ಲಭ್ಯವಿರುತ್ತದೆ. ಈ ಅನುದಾನ ಯಾವ ರೀತಿ ಖರ್ಚು ಮಾಡಲಾಗುತ್ತಿದೆ ಎನ್ನುವುದನ್ನು ನಿರಂತರ ಪರಿಶೀಲಿಸಲಾಗುವುದು' ಎಂದರು.<br /> <br /> ಎಸ್ಡಿಎಂಸಿಗಳಿಗೆ ಬಿಡುಗಡೆಯಾದ ಅನುದಾನದ ವಿವರಗಳು ಡಿಡಿಪಿಐ ಮತ್ತು ಬಿಇಒಗೆ ದೊರೆಯಲಿದೆ. ಈ ಅಧಿಕಾರಿಗಳು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ಜತೆಗೂಡಿ ಎಸ್ಎಸ್ಎ ಅನುದಾನ ಬಳಕೆಯ ಉಸ್ತುವಾರಿ ವಹಿಸಲಿದ್ದಾರೆ.ಸದ್ಯಕ್ಕೆ ಎಸ್ಡಿಎಂಸಿಗಳ ಶೇ 80ರಷ್ಟು ಬ್ಯಾಂಕ್ ಖಾತೆಗಳ ವಿವರಗಳು ಎಸ್ಎಸ್ಎನಲ್ಲಿ ಲಭ್ಯ ಇದೆ. ಇದನ್ನು ರಿಶೀಲಿಸುವ ಕಾರ್ಯ ಇದೀಗ ಆರಂಭವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>