<p><strong>ಶಿವಮೊಗ್ಗ:</strong> ಸಮೀಪದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಆರು ತಿಂಗಳ ಹಿಂದೆ ಜನಿಸಿದ ಬಹು ಅಪರೂಪದ ಕಪ್ಪು ಬಣ್ಣದ ಚಿರತೆ ಮರಿಯನ್ನು ಸಾರ್ವಜನಿಕರ ವೀಕ್ಷಣೆಗೆ ಭಾನುವಾರ ಬಿಡಲಾಯಿತು.<br /> <br /> ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ನಂಜುಂಡಸ್ವಾಮಿ ತ್ಯಾವರೆಕೊಪ್ಪದ ಹುಲಿ- ಸಿಂಹಧಾಮದಲ್ಲಿರುವ ಚಿರತೆ ಸಾಕಾಣಿಕೆ ಮನೆಯಿಂದ ಕಪ್ಪು ಬಣ್ಣದ ಈ ಹೆಣ್ಣು ಮರಿಯನ್ನು ಚಿರತೆ ಪ್ರದರ್ಶನ ಆವರಣಕ್ಕೆ ಬಿಡುಗಡೆ ಮಾಡಿದರು.<br /> <br /> ಸಿಂಹ ಧಾಮದಲ್ಲಿ `ಕೃತಿಕಾ~ ಎಂಬ ಹೆಸರಿನ ಚಿರತೆಯು ಈ ಕಪ್ಪು ಮರಿಗೆ ಜನ್ಮ ನೀಡಿತ್ತು. <br /> ಕಾರ್ಯಕ್ರಮದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜುಂಡಸ್ವಾಮಿ, ರಾಜ್ಯದ ಮೃಗಾಲಯಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ತ್ಯಾವರೆಕೊಪ್ಪದ ಹುಲಿ- ಸಿಂಹಧಾಮಲ್ಲಿ ಚಿರತೆಯೊಂದು ಕಪ್ಪು ಬಣ್ಣದ ಮರಿಗೆ ಜನ್ಮ ನೀಡಿದೆ. ರಾಜ್ಯದಲ್ಲಿ ಬನ್ನೇರುಘಟ್ಟ ಹಾಗೂ ತ್ಯಾವರೆಕೊಪ್ಪದಲ್ಲಿ ಮಾತ್ರ ಸಫಾರಿಗಳಿವೆ ಎಂದು ಮಾಹಿತಿ ನೀಡಿದರು.<br /> <br /> ತ್ಯಾವರೆಕೊಪ್ಪದ ಸಿಂಹಧಾಮವನ್ನು ಇನ್ನಷ್ಟು ಆಕರ್ಷಿಸಲು ಮೈಸೂರು ಮೃಗಾಲಯದಿಂದ 117 ವಿವಿಧ ಪಕ್ಷಿಗಳನ್ನು ತರಿಸಲಾಗಿದೆ. ತಮಿಳುನಾಡಿನಿಂದ 2 `ಎಮು~ ಪಕ್ಷಿಗಳನ್ನು ತರಲಾಗಿದೆ. ಸಫಾರಿಗಾಗಿ ಒಂದು ಹೊಸ ವಾಹನ ನೀಡಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಸಮೀಪದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಆರು ತಿಂಗಳ ಹಿಂದೆ ಜನಿಸಿದ ಬಹು ಅಪರೂಪದ ಕಪ್ಪು ಬಣ್ಣದ ಚಿರತೆ ಮರಿಯನ್ನು ಸಾರ್ವಜನಿಕರ ವೀಕ್ಷಣೆಗೆ ಭಾನುವಾರ ಬಿಡಲಾಯಿತು.<br /> <br /> ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ನಂಜುಂಡಸ್ವಾಮಿ ತ್ಯಾವರೆಕೊಪ್ಪದ ಹುಲಿ- ಸಿಂಹಧಾಮದಲ್ಲಿರುವ ಚಿರತೆ ಸಾಕಾಣಿಕೆ ಮನೆಯಿಂದ ಕಪ್ಪು ಬಣ್ಣದ ಈ ಹೆಣ್ಣು ಮರಿಯನ್ನು ಚಿರತೆ ಪ್ರದರ್ಶನ ಆವರಣಕ್ಕೆ ಬಿಡುಗಡೆ ಮಾಡಿದರು.<br /> <br /> ಸಿಂಹ ಧಾಮದಲ್ಲಿ `ಕೃತಿಕಾ~ ಎಂಬ ಹೆಸರಿನ ಚಿರತೆಯು ಈ ಕಪ್ಪು ಮರಿಗೆ ಜನ್ಮ ನೀಡಿತ್ತು. <br /> ಕಾರ್ಯಕ್ರಮದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜುಂಡಸ್ವಾಮಿ, ರಾಜ್ಯದ ಮೃಗಾಲಯಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ತ್ಯಾವರೆಕೊಪ್ಪದ ಹುಲಿ- ಸಿಂಹಧಾಮಲ್ಲಿ ಚಿರತೆಯೊಂದು ಕಪ್ಪು ಬಣ್ಣದ ಮರಿಗೆ ಜನ್ಮ ನೀಡಿದೆ. ರಾಜ್ಯದಲ್ಲಿ ಬನ್ನೇರುಘಟ್ಟ ಹಾಗೂ ತ್ಯಾವರೆಕೊಪ್ಪದಲ್ಲಿ ಮಾತ್ರ ಸಫಾರಿಗಳಿವೆ ಎಂದು ಮಾಹಿತಿ ನೀಡಿದರು.<br /> <br /> ತ್ಯಾವರೆಕೊಪ್ಪದ ಸಿಂಹಧಾಮವನ್ನು ಇನ್ನಷ್ಟು ಆಕರ್ಷಿಸಲು ಮೈಸೂರು ಮೃಗಾಲಯದಿಂದ 117 ವಿವಿಧ ಪಕ್ಷಿಗಳನ್ನು ತರಿಸಲಾಗಿದೆ. ತಮಿಳುನಾಡಿನಿಂದ 2 `ಎಮು~ ಪಕ್ಷಿಗಳನ್ನು ತರಲಾಗಿದೆ. ಸಫಾರಿಗಾಗಿ ಒಂದು ಹೊಸ ವಾಹನ ನೀಡಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>