<p><strong>ಬೆಂಗಳೂರು (ಪಿಟಿಐ</strong>): ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ಕರ್ನಾಟಕ ರಾಜ್ಯದಲ್ಲಿ ನ್ಯೂನತೆಗಳಿಂದ ಕೂಡಿತ್ತು ಎಂದು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಹೇಳಲಾಗಿದೆ.<br /> <br /> 2007-12ರ ಅವಧಿಯಲ್ಲಿ ಈ ಯೋಜನೆಯ ಅನುಷ್ಠಾನವು ರಾಜ್ಯದಲ್ಲಿ ಸಮರ್ಪಕವಾಗಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.<br /> <br /> ವಾರ್ಷಿಕ ಯೋಜನೆಯ ಮಂಜೂರಾತಿ ಆಮೆಗತಿಯಲ್ಲಿತ್ತು. ಹಲವು ಬಾರಿ ಮುಂದೂಡಿ, ಹಣಕಾಸು ವರ್ಷದ ಕೊನೆಯ ಹೊತ್ತಿಗೆ ಮಂಜೂರಾತಿ ಪಡೆಯಲಾಗಿತ್ತೆಂದು ವರದಿ ಹೇಳಿದೆ.<br /> <br /> ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ಸಮೀಕ್ಷೆಗಳಿಗಾಗಿ ನಿಗದಿ ಪಡಿಸಿದ ಹಣಕಾಸು ಅಸಮರ್ಪಕವಾಗಿತ್ತು ಪರಿಣಾಮವಾಗಿ ಸಮೀಕ್ಷೆಗಳೂ ಲೋಪದೋಷದಿಂದ ಕೂಡಿದ್ದವು. ಹೀಗಾಗಿ ಈ ಸಮೀಕ್ಷೆಗಳು ವಿಶ್ವಾಸಾರ್ಹತೆ ಹೊಂದಿಲ್ಲ ಎಂದೂ ವರದಿ ತಿಳಿಸಿದೆ.<br /> <br /> ಈ ಯೋಜನೆ ಸಂಬಂಧಿಸಿದಂತೆ ಮಾಡಲಾದ ಖರ್ಚು ವೆಚ್ಚಗಳ ಮಾಹಿತಿಯೂ ದೋಷಪೂರ್ಣವಾಗಿವೆ. ಹಲವು ಕೆಲಸಕಾರ್ಯಗಳು ಅಪೂರ್ಣ ಸ್ಥಿತಿಯಲ್ಲಿವೆ ಎಂದೂ ವರದಿ ಹೇಳಿದೆ.<br /> <br /> ಕಾಮಗಾರಿಯ ವಿಳಂಬ ಗತಿಯ ನಡೆಯಿಂದಾಗಿ ಯೋಜನಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಹಲವು ಯೋಜನೆಗಳಿಗೆ ಬಂಡವಾಳ ಕಡಿಮೆಯಾಗಿ ಅವು ನೆನೆಗುದಿಗೆ ಬೀಳುವಂತಾಗಿದೆ ಎಂದು ಹೇಳಲಾಗಿದೆ.<br /> <br /> ಇದಲ್ಲದೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಲ್ಲೂ ಹಲವು ನ್ಯೂನತೆಗಳನ್ನು ವರದಿ ಪತ್ತೆ ಹಚ್ಚಿದೆ.<br /> <br /> ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿಯ 7 ನಗರಸಭೆಗಳಿಗೆ ಹಂಚಿಕೆ ಮಾಡಲಾದ ತಲಾ 100 ಕೋಟಿ ರೂಪಾಯಿಗಳನ್ನು ಸಮರ್ಪಕ ಸಮೀಕ್ಷೆಯಿಲ್ಲದೆ ಮಾಡಲಾಗಿತ್ತು ಎಂದು ವರದಿ ದೂಷಿಸಿದೆ.<br /> <br /> ಮುಖ್ಯವಾಗಿ ಟೆಂಡರ್ ಆಹ್ವಾನದಲ್ಲಿ ಪಾರದರ್ಶಕತೆ ತುಂಬಾ ಕಡಿಮೆಯಾಗಿತ್ತು. ಒಪ್ಪಂದ ನಿರ್ವಹಣೆಯೂ ಕೂಡ ಅಸಮರ್ಪಕವಾಗಿತ್ತು ಎಂದು ವರದಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು (ಪಿಟಿಐ</strong>): ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ಕರ್ನಾಟಕ ರಾಜ್ಯದಲ್ಲಿ ನ್ಯೂನತೆಗಳಿಂದ ಕೂಡಿತ್ತು ಎಂದು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಹೇಳಲಾಗಿದೆ.<br /> <br /> 2007-12ರ ಅವಧಿಯಲ್ಲಿ ಈ ಯೋಜನೆಯ ಅನುಷ್ಠಾನವು ರಾಜ್ಯದಲ್ಲಿ ಸಮರ್ಪಕವಾಗಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.<br /> <br /> ವಾರ್ಷಿಕ ಯೋಜನೆಯ ಮಂಜೂರಾತಿ ಆಮೆಗತಿಯಲ್ಲಿತ್ತು. ಹಲವು ಬಾರಿ ಮುಂದೂಡಿ, ಹಣಕಾಸು ವರ್ಷದ ಕೊನೆಯ ಹೊತ್ತಿಗೆ ಮಂಜೂರಾತಿ ಪಡೆಯಲಾಗಿತ್ತೆಂದು ವರದಿ ಹೇಳಿದೆ.<br /> <br /> ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ಸಮೀಕ್ಷೆಗಳಿಗಾಗಿ ನಿಗದಿ ಪಡಿಸಿದ ಹಣಕಾಸು ಅಸಮರ್ಪಕವಾಗಿತ್ತು ಪರಿಣಾಮವಾಗಿ ಸಮೀಕ್ಷೆಗಳೂ ಲೋಪದೋಷದಿಂದ ಕೂಡಿದ್ದವು. ಹೀಗಾಗಿ ಈ ಸಮೀಕ್ಷೆಗಳು ವಿಶ್ವಾಸಾರ್ಹತೆ ಹೊಂದಿಲ್ಲ ಎಂದೂ ವರದಿ ತಿಳಿಸಿದೆ.<br /> <br /> ಈ ಯೋಜನೆ ಸಂಬಂಧಿಸಿದಂತೆ ಮಾಡಲಾದ ಖರ್ಚು ವೆಚ್ಚಗಳ ಮಾಹಿತಿಯೂ ದೋಷಪೂರ್ಣವಾಗಿವೆ. ಹಲವು ಕೆಲಸಕಾರ್ಯಗಳು ಅಪೂರ್ಣ ಸ್ಥಿತಿಯಲ್ಲಿವೆ ಎಂದೂ ವರದಿ ಹೇಳಿದೆ.<br /> <br /> ಕಾಮಗಾರಿಯ ವಿಳಂಬ ಗತಿಯ ನಡೆಯಿಂದಾಗಿ ಯೋಜನಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಹಲವು ಯೋಜನೆಗಳಿಗೆ ಬಂಡವಾಳ ಕಡಿಮೆಯಾಗಿ ಅವು ನೆನೆಗುದಿಗೆ ಬೀಳುವಂತಾಗಿದೆ ಎಂದು ಹೇಳಲಾಗಿದೆ.<br /> <br /> ಇದಲ್ಲದೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಲ್ಲೂ ಹಲವು ನ್ಯೂನತೆಗಳನ್ನು ವರದಿ ಪತ್ತೆ ಹಚ್ಚಿದೆ.<br /> <br /> ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿಯ 7 ನಗರಸಭೆಗಳಿಗೆ ಹಂಚಿಕೆ ಮಾಡಲಾದ ತಲಾ 100 ಕೋಟಿ ರೂಪಾಯಿಗಳನ್ನು ಸಮರ್ಪಕ ಸಮೀಕ್ಷೆಯಿಲ್ಲದೆ ಮಾಡಲಾಗಿತ್ತು ಎಂದು ವರದಿ ದೂಷಿಸಿದೆ.<br /> <br /> ಮುಖ್ಯವಾಗಿ ಟೆಂಡರ್ ಆಹ್ವಾನದಲ್ಲಿ ಪಾರದರ್ಶಕತೆ ತುಂಬಾ ಕಡಿಮೆಯಾಗಿತ್ತು. ಒಪ್ಪಂದ ನಿರ್ವಹಣೆಯೂ ಕೂಡ ಅಸಮರ್ಪಕವಾಗಿತ್ತು ಎಂದು ವರದಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>