<p><strong>ವಿಜಾಪುರ: </strong>ವಿಜಾಪುರ ಜಿಲ್ಲೆ ಭಾನುವಾರ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಸೂಫಿ ಸಂತರು-ಶರಣರ ನಾಡಿಗೆ ರಾಜ್ಯದ ವಿವಿಧೆಡೆಯ ಸಾವಿರಕ್ಕೂ ಹೆಚ್ಚು ಮಠಾಧೀಶರು ಆಗಮಿಸಿದ್ದರು. ಪಟ್ಟಣದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿಸಲಾಯಿತು! ಐದು ಹೆಲಿಕಾಪ್ಟರ್ಗಳು ಹಾರಾಡಿದವು.<br /> <br /> ಅಖಿಲ ಕರ್ನಾಟಕ ಅಶೋಕ ಖೇಣಿ ಯೂತ್ ಮೂವ್ಮೆಂಟ್ನಿಂದ ಇಲ್ಲಿ ಹಮ್ಮಿಕೊಂಡಿದ್ದ ವರ್ಣರಂಜಿತ ಸಮಾರಂಭದಲ್ಲಿ ನೈಸ್ ಸಂಸ್ಥೆಯ ಮುಖ್ಯಸ್ಥ, ಉದ್ಯಮಿ ಅಶೋಕ ಖೇಣಿ ತಮ್ಮ 62ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇದರ ಜೊತೆಗೆ 162 ಜೋಡಿಗಳ ಸಾಮೂಹಿಕ ವಿವಾಹ, ಸರ್ವಧರ್ಮ ಸಮ್ಮೇಳನ ಸಹ ನಡೆಯಿತು.<br /> <br /> ವಿಶಾಲವಾದ ವೇದಿಕೆಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ವೇದಿಕೆಯ ಮೇಲೆ 62 ಜ್ಯೋತಿಗಳನ್ನು ಬೆಳಗಿಸಿ ಖೇಣಿ ಹುಟ್ಟು ಹಬ್ಬ ಆಚರಿಸಲಾಯಿತು. ಹೆಲಿಕಾಪ್ಟರ್ ಮೂಲಕ ವೇದಿಕೆಯ ಮೇಲೆ ಪುಷ್ಪವೃಷ್ಟಿ ನಡೆಯಿತು.<br /> <br /> `ಅಶೋಕ ಖೇಣಿ ತತ್ವ-ಕಾಯಕ ನಿಷ್ಠ ವ್ಯಕ್ತಿ~ ಎಂದು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ `ಖೇಣಿ ಕರ್ನಾಟಕದ ಅಭಿವೃದ್ಧಿಯ ಏಣಿ~ ಎಂದು ಪೇಜಾವರ ಮಠದ ವಿಶ್ವೇಶ್ತೀರ್ಥ ಸ್ವಾಮೀಜಿ ಶ್ಲಾಘಿಸಿದರು. ನಟರಾದ ಅಂಬರೀಷ್, ಸುದೀಪ್, ಹಿನ್ನೆಲೆ ಗಾಯಕ ಸೋನು ನಿಗಮ್, ಸಚಿವ ಮುರುಗೇಶ ನಿರಾಣಿ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಂ.ಬಿ. ಪಾಟೀಲ, ಅಪ್ಪು ಪಟ್ಟಣಶೆಟ್ಟಿ, ಡಾ.ಎಸ್.ಎಸ್. ಬಗಲಿ, ವಿಠ್ಠಲ ಕಟಕಧೋಂಡ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ: </strong>ವಿಜಾಪುರ ಜಿಲ್ಲೆ ಭಾನುವಾರ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಸೂಫಿ ಸಂತರು-ಶರಣರ ನಾಡಿಗೆ ರಾಜ್ಯದ ವಿವಿಧೆಡೆಯ ಸಾವಿರಕ್ಕೂ ಹೆಚ್ಚು ಮಠಾಧೀಶರು ಆಗಮಿಸಿದ್ದರು. ಪಟ್ಟಣದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿಸಲಾಯಿತು! ಐದು ಹೆಲಿಕಾಪ್ಟರ್ಗಳು ಹಾರಾಡಿದವು.<br /> <br /> ಅಖಿಲ ಕರ್ನಾಟಕ ಅಶೋಕ ಖೇಣಿ ಯೂತ್ ಮೂವ್ಮೆಂಟ್ನಿಂದ ಇಲ್ಲಿ ಹಮ್ಮಿಕೊಂಡಿದ್ದ ವರ್ಣರಂಜಿತ ಸಮಾರಂಭದಲ್ಲಿ ನೈಸ್ ಸಂಸ್ಥೆಯ ಮುಖ್ಯಸ್ಥ, ಉದ್ಯಮಿ ಅಶೋಕ ಖೇಣಿ ತಮ್ಮ 62ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇದರ ಜೊತೆಗೆ 162 ಜೋಡಿಗಳ ಸಾಮೂಹಿಕ ವಿವಾಹ, ಸರ್ವಧರ್ಮ ಸಮ್ಮೇಳನ ಸಹ ನಡೆಯಿತು.<br /> <br /> ವಿಶಾಲವಾದ ವೇದಿಕೆಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ವೇದಿಕೆಯ ಮೇಲೆ 62 ಜ್ಯೋತಿಗಳನ್ನು ಬೆಳಗಿಸಿ ಖೇಣಿ ಹುಟ್ಟು ಹಬ್ಬ ಆಚರಿಸಲಾಯಿತು. ಹೆಲಿಕಾಪ್ಟರ್ ಮೂಲಕ ವೇದಿಕೆಯ ಮೇಲೆ ಪುಷ್ಪವೃಷ್ಟಿ ನಡೆಯಿತು.<br /> <br /> `ಅಶೋಕ ಖೇಣಿ ತತ್ವ-ಕಾಯಕ ನಿಷ್ಠ ವ್ಯಕ್ತಿ~ ಎಂದು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ `ಖೇಣಿ ಕರ್ನಾಟಕದ ಅಭಿವೃದ್ಧಿಯ ಏಣಿ~ ಎಂದು ಪೇಜಾವರ ಮಠದ ವಿಶ್ವೇಶ್ತೀರ್ಥ ಸ್ವಾಮೀಜಿ ಶ್ಲಾಘಿಸಿದರು. ನಟರಾದ ಅಂಬರೀಷ್, ಸುದೀಪ್, ಹಿನ್ನೆಲೆ ಗಾಯಕ ಸೋನು ನಿಗಮ್, ಸಚಿವ ಮುರುಗೇಶ ನಿರಾಣಿ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಂ.ಬಿ. ಪಾಟೀಲ, ಅಪ್ಪು ಪಟ್ಟಣಶೆಟ್ಟಿ, ಡಾ.ಎಸ್.ಎಸ್. ಬಗಲಿ, ವಿಠ್ಠಲ ಕಟಕಧೋಂಡ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>