‘ಗಡ್ಡಪ್ಪ ನನ್ನ ಸಂಬಂಧಿಯೂ ಆಗಿದ್ದಾರೆ. ಕಳೆದ ತಿಂಗಳೂ ಅವರಿಗೆ ಆರೋಗ್ಯ ಸಮಸ್ಯೆ ಆಗಿತ್ತು, ಆಸ್ಪತ್ರೆಗೆ ತೋರಿಸಿದ್ದೆವು. ಈಗ ಮುಖಕ್ಕೆ ಪಾರ್ಶ್ವವಾಯು ಆಗಿರುವ ಕಾರಣ ತೊದಲುತ್ತಿದ್ದಾರೆ. ಅವರಿಗೆ ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಚಾರ ತಿಳಿದು ನಾನೂ ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದೇನೆ. ಕೆಲವರು ಗಡ್ಡಪ್ಪ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ನೋವಾಗಿದೆ’ ಎಂದು ತಿಳಿಸಿದರು.