‘ವಿಜಯನಗರ ಠಾಣೆ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾದ ಪೊಲೀಸರು, ಆರೋಪಿಗಳಿದ್ದ ಕಾರನ್ನು ಸುತ್ತುವರಿದರು. ಈ ವೇಳೆಗೆ ಕಾರಿನಿಂದ ಹೊರಬಂದ ಸುಖವಿಂದರ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಮೊದಲಿಗೆ ಇನ್ಸ್ಪೆಕ್ಟರ್ ಕುಮಾರ್ ಅವರ ಕೈಯನ್ನು ತಿರುಚಿ ದೂರಕ್ಕೆ ತಳ್ಳಿದ್ದಾನೆ. ನಂತರ, ಎಎಸ್ಐ ವೆಂಕಟೇಶ್ ಅವರ ಮುಖ ಮತ್ತು ಎದೆಗೆ ಬಲವಾಗಿ ಗುದ್ದಿದ್ದಾನೆ. ಒಂದು ಕೈಯಲ್ಲಿ ಕಾನ್ಸ್ಟೆಬಲ್ ವೀರಭದ್ರಸ್ವಾಮಿ ಕುತ್ತಿಗೆ ಹಿಡಿದ ಆತ ಮತ್ತೊಂದು ಕೈಯಲ್ಲಿ ತನ್ನ ರಿವಾಲ್ವರ್ ತೆಗೆಯಲು ಮುಂದಾದ. ಈ ಸಂದರ್ಭದಲ್ಲಿ, ಕೆಳಗೆ ಬಿದ್ದಿದ್ದ ಕುಮಾರ್ ತಮ್ಮ ರಿವಾಲ್ವರ್ನಿಂದ ಗುಂಡು ಹಾರಿಸಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.