<p><strong>ಮಂಗಳೂರು:</strong> ನಗರದ ವಿವಿಧ ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 2.15ರ ಹೊತ್ತಿಗೆ ಲಘು ಭೂಕಂಪನ ಆದ ಅನುಭವ ಆಗಿದೆ. ಕಡಲ ತೀರದ ನಿವಾಸಿಗಳಿಗೆ ಹಾಗೂ ಮೀನುಗಾರರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.<br /> ಸುನಾಮಿ ಸಂಭವಿಸಿದರೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿಢೀರ್ ಸಭೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿದರು.<br /> <br /> `ಮೀನುಗಾರಿಕೆಗೆ ತೆರಳಿದವರು ಸಮುದ್ರದಿಂದ ವಾಪಸ್ಸಾಗುವಂತೆ ಸೂಚನೆ ನೀಡಲಾಗಿದೆ. ಕಡಲಿನ ಬೆಳವಣಿಗೆ ಬಗ್ಗೆ ನಿಗಾ ವಹಿಸಲಾಗಿದೆ. ಕಡಲ ಕಿನಾರೆಗೆ ತೆರಳದಂತೆ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಸುನಾಮಿ ಚೆನ್ನೈ ಸಮುದ್ರ ತೀರಕ್ಕೆ ಅಪ್ಪಳಿಸಿದರೆ ನಮಗೆ ಮಾಹಿತಿ ಬರುತ್ತದೆ. ಆ ಬೆಳವಣಿಗೆಯನ್ನು ನೋಡಿಕೊಂಡು ಇಲ್ಲಿನ ಸಮುದ್ರ ತೀರದ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನರು ಭಯಪಡುವ ಅಗತ್ಯ ಇಲ್ಲ~ ಎಂದು ಜಿಲ್ಲಾಧಿಕಾರಿ ಎನ್. ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ ತಿಳಿಸಿದರು.<br /> <br /> <strong>ಕಂಪನ ಅನುಭವ:</strong> `ನಾನು ಕುಳಿತಿದ್ದ ಕುರ್ಚಿ ಕೆಲವು ಸೆಕೆಂಡುಗಳ ಕಾಲ ಏಕಾಏಕಿ ಅಲ್ಲಾಡಿದೆ. ನಮ್ಮ ಕಚೇರಿಯಲ್ಲಿದ್ದ ಕೆಲವರಿಗೂ ಇದೇ ಅನುಭವ ಆಗಿದೆ~ ಎಂದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹೀರಾ ವಿ. ಭಟ್ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ನಗರದ ಹೃದಯ ಭಾಗದಲ್ಲಿರುವ ಬಾವುಟಗುಡ್ಡೆಯ ವಾಣಿಜ್ಯ ಹಾಗೂ ವಸತಿ ಸಂಕೀರ್ಣದಲ್ಲಿದ್ದವರಿಗೂ ಭೂಕಂಪನ ಅನುಭವ ಆಗಿದೆ. ಮಧ್ಯಾಹ್ನ 2.15ರ ಸುಮಾರಿಗೆ ವಸತಿ ಸಂಕೀರ್ಣದಲ್ಲಿದ್ದವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.<br /> <br /> `ಮಧ್ಯಾಹ್ನ 2.15ರ ಸುಮಾರಿಗೆ ಎರಡು ಬಾರಿ ಅಪಾರ್ಟ್ಮೆಂಟ್ ನಡುಗಿದ ಅನುಭವ ಆಯಿತು~ ಎಂದು ಬಾವುಟಗುಡ್ಡೆಯ `ಲೋಬೋಪ್ರಭು~ ವಸತಿ ಸಂಕೀರ್ಣದ ನಿವಾಸಿ ಲಾರೆನ್ಸ್ ಡಿಸೋಜ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಕೂಳೂರಿನ ಗುಪ್ತ ಕೋಲ್ ಸಂಸ್ಥೆ ಕಚೇರಿ ಇರುವ ವಾಣಿಜ್ಯ ಸಂಕೀರ್ಣದಲ್ಲೂ ಭೂಕಂಪನ ಅನುಭವ ಆಗಿದೆ. <br /> `ನಾನು ಊಟ ಮುಗಿಸಿ ಬಂದು ಕುರ್ಚಿಯಲ್ಲಿ ಕುಳಿತಿದ್ದೆ. ಏಕಾಏಕಿ ಕುರ್ಚಿ ಅಲ್ಲಾಡಿದ ಅನುಭವ ಆಯಿತು. ಮೊದಲು ಆರೋಗ್ಯ ಸಮಸ್ಯೆಯಿಂದ ಹೀಗಾಗಿರಬಹುದು ಎಂದುಕೊಂಡಿದ್ದೆ. ಬಳಿಕ ಇದೇ ರೀತಿಯ ಅನುಭವ ಅನೇಕರಿಗೆ ಆಗಿದ್ದು ತಿಳಿಯಿತು~ ಎಂದು ಸಂಸ್ಥೆ ಸಿಬ್ಬಂದಿ ರಾಮದಾಸ ಎಕ್ಕೂರು ತಿಳಿಸಿದರು.<br /> <br /> <strong>ಮೀನುಗಾರರು ನಿರಾತಂಕ<br /> ಮಂಗಳೂರು:</strong> ಸುನಾಮಿ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದ್ದರೂ ಇಲ್ಲಿನ ಮೀನುಗಾರರು ಸ್ವಲ್ಪವೂ ಆತಂಕಗೊಂಡಿಲ್ಲ. <br /> <br /> `ಸಾಮಾನ್ಯವಾಗಿ ಸಮುದ್ರದಲ್ಲಿ ಸ್ವಲ್ಪ ಏರುಪೇರಾದರೂ ನಮ್ಮ ಅನುಭವಕ್ಕೆ ಬರುತ್ತದೆ. ನಾವು ಸಮುದ್ರದ ಕಿನಾರೆಯಲ್ಲೇ ಇದ್ದೇವೆ. ರಾತ್ರಿ 7.30 ಆದರೂ ಸುನಾಮಿ ಲಕ್ಷಣವಿಲ್ಲ. ಸಾಕಷ್ಟು ಮೀನುಗಾರರು ಸಮುದ್ರಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಜನರು ಆತಂಕಪಡುವ ಅಗತ್ಯ ಇಲ್ಲ~ ಎಂದು ಮೀನುಗಾರ ಮುಖಂಡ ಉಮೇಶ್ ಕರ್ಕೇರ `ಪ್ರಜಾವಾಣಿ~ಗೆ ತಿಳಿಸಿದರು. <br /> <br /> `ಸಾಮಾನ್ಯವಾಗಿ ಸುನಾಮಿ ಅಥವಾ ತೂಫಾನ್ ಎದ್ದರೆ ಸಮುದ್ರ ತೀರದ ಮರಳಿನ ಮಟ್ಟದಲ್ಲಿ ಏರುಪೇರಾಗುತ್ತದೆ. ಸಮುದ್ರ ತೀರದಲ್ಲಿ ನೀರು ಕೆಸರು ಮಯವಾಗುತ್ತದೆ. ಅಂತಹ ಲಕ್ಷಣ ಕಾಣಿಸಿಲ್ಲ~ ಎಂದರು.<br /> `ಸುನಾಮಿ ಬಂದರೆ ಮೀನುಗಾರರು ಸಮುದ್ರದಲ್ಲಿರುವುದೇ ಹೆಚ್ಚು ಸುರಕ್ಷಿತ. ದಡದಲ್ಲಿದ್ದವರಿಗೆ ಹೆಚ್ಚು ಅಪಾಯ~ ಎಂದು ಇನ್ನೊಬ್ಬ ಮೀನುಗಾರ ಮೋಹನ ಬೆಂಗ್ರೆ ತಿಳಿಸಿದರು.<br /> <br /> <strong>ಕೋಡಿಮಠ ಶ್ರೀಗಳು ಹೇಳಿದ್ದು ಏನು?</strong><br /> <strong>ರಾಯಚೂರು: </strong> `ಈ ದೇಶದ ಮಹಾನಗರಗಳಿಗೆ ಆಪತ್ತು ಕಾದಿದ್ದು, ಭೂಕಂಪನ ಆಗಲಿದೆ. ಭಯೋತ್ಪಾದನೆ ಭೀತಿ ಇನ್ನೂ ಹೆಚ್ಚಾಗಲಿದೆ. ನವೆಂಬರ್,ಡಿಸೆಂಬರ್ನಲ್ಲಿ ಮತ್ತೆ ವರುಣ ಆರ್ಭಟಿಸಲಿದ್ದಾನೆ. 2020ರ ನಂತರವೇ ರಾಜಕೀಯ ಸ್ಥಿರತೆ ಬರಲಿದೆ~.<br /> <br /> ಇದು ಮಂಗಳವಾರ ರಾಯಚೂರಿಗೆ ಭೇಟಿ ನೀಡಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹೇಳಿದ ಭವಿಷ್ಯದ ನುಡಿ. ಮರುದಿನವೇ ಅಂದರೆ ಬುಧವಾರ ಬೆಂಗಳೂರು, ಕೊಲ್ಕತ್ತಾ, ಚೆನ್ನೈ, ಸೇರಿದಂತೆ ಹಲವು ನಗರಗಳಲ್ಲಿ ಭೂಕಂಪನ ಆಗಿದೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ನಗರದ ವಿವಿಧ ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 2.15ರ ಹೊತ್ತಿಗೆ ಲಘು ಭೂಕಂಪನ ಆದ ಅನುಭವ ಆಗಿದೆ. ಕಡಲ ತೀರದ ನಿವಾಸಿಗಳಿಗೆ ಹಾಗೂ ಮೀನುಗಾರರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.<br /> ಸುನಾಮಿ ಸಂಭವಿಸಿದರೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿಢೀರ್ ಸಭೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿದರು.<br /> <br /> `ಮೀನುಗಾರಿಕೆಗೆ ತೆರಳಿದವರು ಸಮುದ್ರದಿಂದ ವಾಪಸ್ಸಾಗುವಂತೆ ಸೂಚನೆ ನೀಡಲಾಗಿದೆ. ಕಡಲಿನ ಬೆಳವಣಿಗೆ ಬಗ್ಗೆ ನಿಗಾ ವಹಿಸಲಾಗಿದೆ. ಕಡಲ ಕಿನಾರೆಗೆ ತೆರಳದಂತೆ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಸುನಾಮಿ ಚೆನ್ನೈ ಸಮುದ್ರ ತೀರಕ್ಕೆ ಅಪ್ಪಳಿಸಿದರೆ ನಮಗೆ ಮಾಹಿತಿ ಬರುತ್ತದೆ. ಆ ಬೆಳವಣಿಗೆಯನ್ನು ನೋಡಿಕೊಂಡು ಇಲ್ಲಿನ ಸಮುದ್ರ ತೀರದ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನರು ಭಯಪಡುವ ಅಗತ್ಯ ಇಲ್ಲ~ ಎಂದು ಜಿಲ್ಲಾಧಿಕಾರಿ ಎನ್. ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ ತಿಳಿಸಿದರು.<br /> <br /> <strong>ಕಂಪನ ಅನುಭವ:</strong> `ನಾನು ಕುಳಿತಿದ್ದ ಕುರ್ಚಿ ಕೆಲವು ಸೆಕೆಂಡುಗಳ ಕಾಲ ಏಕಾಏಕಿ ಅಲ್ಲಾಡಿದೆ. ನಮ್ಮ ಕಚೇರಿಯಲ್ಲಿದ್ದ ಕೆಲವರಿಗೂ ಇದೇ ಅನುಭವ ಆಗಿದೆ~ ಎಂದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹೀರಾ ವಿ. ಭಟ್ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ನಗರದ ಹೃದಯ ಭಾಗದಲ್ಲಿರುವ ಬಾವುಟಗುಡ್ಡೆಯ ವಾಣಿಜ್ಯ ಹಾಗೂ ವಸತಿ ಸಂಕೀರ್ಣದಲ್ಲಿದ್ದವರಿಗೂ ಭೂಕಂಪನ ಅನುಭವ ಆಗಿದೆ. ಮಧ್ಯಾಹ್ನ 2.15ರ ಸುಮಾರಿಗೆ ವಸತಿ ಸಂಕೀರ್ಣದಲ್ಲಿದ್ದವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.<br /> <br /> `ಮಧ್ಯಾಹ್ನ 2.15ರ ಸುಮಾರಿಗೆ ಎರಡು ಬಾರಿ ಅಪಾರ್ಟ್ಮೆಂಟ್ ನಡುಗಿದ ಅನುಭವ ಆಯಿತು~ ಎಂದು ಬಾವುಟಗುಡ್ಡೆಯ `ಲೋಬೋಪ್ರಭು~ ವಸತಿ ಸಂಕೀರ್ಣದ ನಿವಾಸಿ ಲಾರೆನ್ಸ್ ಡಿಸೋಜ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಕೂಳೂರಿನ ಗುಪ್ತ ಕೋಲ್ ಸಂಸ್ಥೆ ಕಚೇರಿ ಇರುವ ವಾಣಿಜ್ಯ ಸಂಕೀರ್ಣದಲ್ಲೂ ಭೂಕಂಪನ ಅನುಭವ ಆಗಿದೆ. <br /> `ನಾನು ಊಟ ಮುಗಿಸಿ ಬಂದು ಕುರ್ಚಿಯಲ್ಲಿ ಕುಳಿತಿದ್ದೆ. ಏಕಾಏಕಿ ಕುರ್ಚಿ ಅಲ್ಲಾಡಿದ ಅನುಭವ ಆಯಿತು. ಮೊದಲು ಆರೋಗ್ಯ ಸಮಸ್ಯೆಯಿಂದ ಹೀಗಾಗಿರಬಹುದು ಎಂದುಕೊಂಡಿದ್ದೆ. ಬಳಿಕ ಇದೇ ರೀತಿಯ ಅನುಭವ ಅನೇಕರಿಗೆ ಆಗಿದ್ದು ತಿಳಿಯಿತು~ ಎಂದು ಸಂಸ್ಥೆ ಸಿಬ್ಬಂದಿ ರಾಮದಾಸ ಎಕ್ಕೂರು ತಿಳಿಸಿದರು.<br /> <br /> <strong>ಮೀನುಗಾರರು ನಿರಾತಂಕ<br /> ಮಂಗಳೂರು:</strong> ಸುನಾಮಿ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದ್ದರೂ ಇಲ್ಲಿನ ಮೀನುಗಾರರು ಸ್ವಲ್ಪವೂ ಆತಂಕಗೊಂಡಿಲ್ಲ. <br /> <br /> `ಸಾಮಾನ್ಯವಾಗಿ ಸಮುದ್ರದಲ್ಲಿ ಸ್ವಲ್ಪ ಏರುಪೇರಾದರೂ ನಮ್ಮ ಅನುಭವಕ್ಕೆ ಬರುತ್ತದೆ. ನಾವು ಸಮುದ್ರದ ಕಿನಾರೆಯಲ್ಲೇ ಇದ್ದೇವೆ. ರಾತ್ರಿ 7.30 ಆದರೂ ಸುನಾಮಿ ಲಕ್ಷಣವಿಲ್ಲ. ಸಾಕಷ್ಟು ಮೀನುಗಾರರು ಸಮುದ್ರಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಜನರು ಆತಂಕಪಡುವ ಅಗತ್ಯ ಇಲ್ಲ~ ಎಂದು ಮೀನುಗಾರ ಮುಖಂಡ ಉಮೇಶ್ ಕರ್ಕೇರ `ಪ್ರಜಾವಾಣಿ~ಗೆ ತಿಳಿಸಿದರು. <br /> <br /> `ಸಾಮಾನ್ಯವಾಗಿ ಸುನಾಮಿ ಅಥವಾ ತೂಫಾನ್ ಎದ್ದರೆ ಸಮುದ್ರ ತೀರದ ಮರಳಿನ ಮಟ್ಟದಲ್ಲಿ ಏರುಪೇರಾಗುತ್ತದೆ. ಸಮುದ್ರ ತೀರದಲ್ಲಿ ನೀರು ಕೆಸರು ಮಯವಾಗುತ್ತದೆ. ಅಂತಹ ಲಕ್ಷಣ ಕಾಣಿಸಿಲ್ಲ~ ಎಂದರು.<br /> `ಸುನಾಮಿ ಬಂದರೆ ಮೀನುಗಾರರು ಸಮುದ್ರದಲ್ಲಿರುವುದೇ ಹೆಚ್ಚು ಸುರಕ್ಷಿತ. ದಡದಲ್ಲಿದ್ದವರಿಗೆ ಹೆಚ್ಚು ಅಪಾಯ~ ಎಂದು ಇನ್ನೊಬ್ಬ ಮೀನುಗಾರ ಮೋಹನ ಬೆಂಗ್ರೆ ತಿಳಿಸಿದರು.<br /> <br /> <strong>ಕೋಡಿಮಠ ಶ್ರೀಗಳು ಹೇಳಿದ್ದು ಏನು?</strong><br /> <strong>ರಾಯಚೂರು: </strong> `ಈ ದೇಶದ ಮಹಾನಗರಗಳಿಗೆ ಆಪತ್ತು ಕಾದಿದ್ದು, ಭೂಕಂಪನ ಆಗಲಿದೆ. ಭಯೋತ್ಪಾದನೆ ಭೀತಿ ಇನ್ನೂ ಹೆಚ್ಚಾಗಲಿದೆ. ನವೆಂಬರ್,ಡಿಸೆಂಬರ್ನಲ್ಲಿ ಮತ್ತೆ ವರುಣ ಆರ್ಭಟಿಸಲಿದ್ದಾನೆ. 2020ರ ನಂತರವೇ ರಾಜಕೀಯ ಸ್ಥಿರತೆ ಬರಲಿದೆ~.<br /> <br /> ಇದು ಮಂಗಳವಾರ ರಾಯಚೂರಿಗೆ ಭೇಟಿ ನೀಡಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹೇಳಿದ ಭವಿಷ್ಯದ ನುಡಿ. ಮರುದಿನವೇ ಅಂದರೆ ಬುಧವಾರ ಬೆಂಗಳೂರು, ಕೊಲ್ಕತ್ತಾ, ಚೆನ್ನೈ, ಸೇರಿದಂತೆ ಹಲವು ನಗರಗಳಲ್ಲಿ ಭೂಕಂಪನ ಆಗಿದೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>