<p>ಚಿಕ್ಕಮಗಳೂರು: ತಾಲ್ಲೂಕಿನ ಬಾಬಾಬುಡನ್ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ಸೋಮವಾರ ದತ್ತ ಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ನೆರವೇರಿತು.<br /> ಜಿಲ್ಲಾ/ ತಾಲ್ಲೂಕು ಪಂಚಾಯಿತಿ ಚುನಾವಣೆ, ಮೈಕೊರೆಯುವ ಚಳಿ ಮತ್ತು ತುಂತುರು ಮಳೆಯಿಂದಾಗಿ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಮಧ್ಯಾಹ್ನ 2 ಗಂಟೆಯವರೆಗೆ ಒಟ್ಟು 6000 ಭಕ್ತರು ತೆರಳಿದ್ದಾರೆ ಎಂದು ಕೈಮರ ಚೆಕ್ಪೋಸ್ಟ್ ಪೊಲೀಸರು ಮಾಹಿತಿ ನೀಡಿದರು.<br /> <br /> ಗುಹೆಯ ತಾತ್ಕಾಲಿಕ ಪುನರ್ ನಿರ್ಮಾಣ ಕಾಮಗಾರಿಯನ್ನು ತರಾತುರಿಯಲ್ಲಿ ಪೂರ್ಣಗೊಳಿಸಿದ್ದ ರಾಜ್ಯ ಸರ್ಕಾರ ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾಲಾಧಾರಿಗಳ ಗುಹೆ ಪ್ರವೇಶಕ್ಕೆ ಅನುಮತಿ ನೀಡಿತ್ತು. ಗುಹೆಯೊಳಗೆ ದತ್ತಪಾದುಕೆಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.<br /> <br /> ಗಿರಿಗೆ ಆಗಮಿಸಿದ್ದ ಮಾಲಾಧಾರಿಗಳಲ್ಲಿ ಕರಾವಳಿ ಜಿಲ್ಲೆಯ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಂಗಳೂರು, ಉಡುಪಿ, ಕಾರ್ಕಳ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಿನಿ ಬಸ್ಗಳು ಬಂದಿದ್ದವು.<br /> <br /> ದತ್ತಪೀಠದ ಬಲಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ ನಡೆಸಲು ಹಾಕಿದ್ದ ತಾತ್ಕಾಲಿಕ ಶೆಡ್ನ ಕೆಲವು ಶೀಟ್ಗಳು ಗಾಳಿಗೆ ಹಾರಿ ಹೋಗಿದ್ದವು. ಅಳಿದುಳಿದ ಶೆಡ್ನಲ್ಲಿಯೇ ದತ್ತಹೋಮ, ಗಣಹೋಮ ಸೇರಿದಂತೆ ವಿವಿಧ ಪೂಜಾವಿಧಿಗಳನ್ನು ನೆರವೇರಿಸಲು ಸಂಘ ಪರಿವಾರ ಯತ್ನಿಸುತ್ತಿತ್ತು.<br /> <br /> ಪ್ರಜ್ವಲಿಸದ ಅಗ್ನಿ: ಮುಂಜಾನೆ 9 ಗಂಟೆಗೆ ಹೋಮ ಪ್ರಾರಂಭಿಸಲು ಅಗ್ನಿ ಪೂಜೆ ನಡೆಸಿದರೂ ಜೋರು ಗಾಳಿ ಮತ್ತು ಥಂಡಿ ವಾತಾವರಣದಿಂದಾಗಿ ಹೋಮಕುಂಡದಲ್ಲಿ ಅಗ್ನಿ ಪ್ರಜ್ವಲಿಸಲೇ ಇಲ್ಲ. ಅಂತೂ ಇಂತೂ 11 ಗಂಟೆಗೆ ಕರ್ಪೂರಗಳು ಉರಿಯತೊಡಗಿದವು. ತಕ್ಷಣ ಮಾಲಾಧಾರಿಗಳು ಹೋಮಕುಂಡ ಸುತ್ತ ತಡೆಗೋಡೆಯಂತೆ ನಿಂತು ದತ್ತಹೋಮ ನಡೆಯಲು ನೆರವಾದರು.<br /> <br /> ವಿಎಚ್ಪಿ ಮುಖಂಡ ಶಿವಶಂಕರ್ ಮತ್ತು ಬಜರಂಗದಳದ ಪ್ರಾಂತ ಸಂಚಾಲಕ ಸೂರ್ಯನಾರಾಯಣ್ ಪೂರ್ಣಾಹುತಿ ನೆರವೇರಿಸಿದರು.<br /> ಅಧಿಕಾರಿಗಳಿಗೆ ಪೇಚಾಟ: ಬೆಂಗಳೂರಿನ ಶ್ರೀಧರಾಶ್ರಮದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಪಾದುಕೆಗಳ ದರ್ಶನ ಪಡೆದು ಒಳಗೆ ಕುಳಿತವರು ಗಂಟೆಗಳು ಕಳೆದರೂ ಮೇಲೆ ಏಳದಿದ್ದುದು ಕಂದಾಯ ಅಧಿಕಾರಿಗಳಲ್ಲಿ ಆತಂಕದ ಗೆರೆ ಮೂಡಿಸಿದ್ದವು.<br /> <br /> ಹಲವು ಬಾರಿ ಅಧಿಕಾರಿಗಳು ಮತ್ತು ಪೊಲೀಸರು ‘ಮೇಲೇಳಿ ಸ್ವಾಮೀಜಿ’ ಎಂದು ಸೂಚಿಸಿದರೂ ಅಧಿಕಾರಿಗಳ ವಿನಂತಿಗೆ ಮೌನವ್ರತ ಹಿಡಿದಿದ್ದ ಸ್ವಾಮೀಜಿ ಸೊಪ್ಪು ಹಾಕಲಿಲ್ಲ. ಅಂತೂ ಇಂತೂ ಸ್ವಾಮೀಜಿ ಮಧ್ಯಾಹ್ನ 12 ಗಂಟೆಗೆ ಗುಹೆಯಿಂದ ಹೊರ ಬಂದರು.<br /> <br /> <strong>40 ವರ್ಷದೊಳಗಿನ ಪೊಲೀಸರು:</strong><br /> ದತ್ತ ಜಯಂತಿ ನಿಭಾಯಿಸಲು ಸಾವಿರಾರು ಪೊಲೀಸರು ಕರ್ತವ್ಯದ ಮೇಲೆ ಗಿರಿಗೆ ಬಂದಿದ್ದರು. ಇದೇ ಮೊದಲ ಬಾರಿಗೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪೊಲೀಸರನ್ನು ಮಾತ್ರ ಇಲಾಖೆ ಗಿರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದು ವಿಶೇಷವಾಗಿತ್ತು. <br /> <br /> ಭಾರೀ ಚಳಿಯಿಂದಾಗಿ ಪೊಲೀಸರು ಅನಾರೋಗ್ಯ ಪೀಡಿತರಾಗುತ್ತಿದ್ದುದು ಕೆಲವೊಮ್ಮೆ ಅಸುನೀಗುತ್ತಿದ್ದುದನ್ನು ಗಮನಿಸಿ ಜಿಲ್ಲಾ ಪೊಲೀಸರು ಈ ನಿಯಮ ಜಾರಿ ಮಾಡಿದ್ದರು.<br /> <br /> ಪಶ್ಚಿಮ ವಲಯ ಐಜಿಪಿ ಅಲೋಕ್ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಿತ್ರ ಹೆರಾಜೆ ಬಂದೋಬಸ್ತ್ನ ಉಸ್ತುವಾರಿ ಹೊತ್ತಿದ್ದರು.<br /> <br /> ಶಾಸಕರಾದ ಸಿ.ಟಿ.ರವಿ, ಡಿ.ಎನ್.ಜೀವರಾಜ್, ಎಂ.ಪಿ.ಕುಮಾರಸ್ವಾಮಿ, ಸಂಸದ ಡಿ.ವಿ.ಸದಾನಂದಗೌಡ, ಸಂಘ ಪರಿವಾರದ ಮುಖಂಡರಾದ ಪ್ರದೀಪ್, ರಘು, ಖಾಂಡ್ಯ ಪ್ರವೀಣ್, ಶಿವಶಂಕರ್, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ಪ್ರಕಾಶ್ಶರ್ಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ತಾಲ್ಲೂಕಿನ ಬಾಬಾಬುಡನ್ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ಸೋಮವಾರ ದತ್ತ ಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ನೆರವೇರಿತು.<br /> ಜಿಲ್ಲಾ/ ತಾಲ್ಲೂಕು ಪಂಚಾಯಿತಿ ಚುನಾವಣೆ, ಮೈಕೊರೆಯುವ ಚಳಿ ಮತ್ತು ತುಂತುರು ಮಳೆಯಿಂದಾಗಿ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಮಧ್ಯಾಹ್ನ 2 ಗಂಟೆಯವರೆಗೆ ಒಟ್ಟು 6000 ಭಕ್ತರು ತೆರಳಿದ್ದಾರೆ ಎಂದು ಕೈಮರ ಚೆಕ್ಪೋಸ್ಟ್ ಪೊಲೀಸರು ಮಾಹಿತಿ ನೀಡಿದರು.<br /> <br /> ಗುಹೆಯ ತಾತ್ಕಾಲಿಕ ಪುನರ್ ನಿರ್ಮಾಣ ಕಾಮಗಾರಿಯನ್ನು ತರಾತುರಿಯಲ್ಲಿ ಪೂರ್ಣಗೊಳಿಸಿದ್ದ ರಾಜ್ಯ ಸರ್ಕಾರ ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾಲಾಧಾರಿಗಳ ಗುಹೆ ಪ್ರವೇಶಕ್ಕೆ ಅನುಮತಿ ನೀಡಿತ್ತು. ಗುಹೆಯೊಳಗೆ ದತ್ತಪಾದುಕೆಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.<br /> <br /> ಗಿರಿಗೆ ಆಗಮಿಸಿದ್ದ ಮಾಲಾಧಾರಿಗಳಲ್ಲಿ ಕರಾವಳಿ ಜಿಲ್ಲೆಯ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಂಗಳೂರು, ಉಡುಪಿ, ಕಾರ್ಕಳ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಿನಿ ಬಸ್ಗಳು ಬಂದಿದ್ದವು.<br /> <br /> ದತ್ತಪೀಠದ ಬಲಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ ನಡೆಸಲು ಹಾಕಿದ್ದ ತಾತ್ಕಾಲಿಕ ಶೆಡ್ನ ಕೆಲವು ಶೀಟ್ಗಳು ಗಾಳಿಗೆ ಹಾರಿ ಹೋಗಿದ್ದವು. ಅಳಿದುಳಿದ ಶೆಡ್ನಲ್ಲಿಯೇ ದತ್ತಹೋಮ, ಗಣಹೋಮ ಸೇರಿದಂತೆ ವಿವಿಧ ಪೂಜಾವಿಧಿಗಳನ್ನು ನೆರವೇರಿಸಲು ಸಂಘ ಪರಿವಾರ ಯತ್ನಿಸುತ್ತಿತ್ತು.<br /> <br /> ಪ್ರಜ್ವಲಿಸದ ಅಗ್ನಿ: ಮುಂಜಾನೆ 9 ಗಂಟೆಗೆ ಹೋಮ ಪ್ರಾರಂಭಿಸಲು ಅಗ್ನಿ ಪೂಜೆ ನಡೆಸಿದರೂ ಜೋರು ಗಾಳಿ ಮತ್ತು ಥಂಡಿ ವಾತಾವರಣದಿಂದಾಗಿ ಹೋಮಕುಂಡದಲ್ಲಿ ಅಗ್ನಿ ಪ್ರಜ್ವಲಿಸಲೇ ಇಲ್ಲ. ಅಂತೂ ಇಂತೂ 11 ಗಂಟೆಗೆ ಕರ್ಪೂರಗಳು ಉರಿಯತೊಡಗಿದವು. ತಕ್ಷಣ ಮಾಲಾಧಾರಿಗಳು ಹೋಮಕುಂಡ ಸುತ್ತ ತಡೆಗೋಡೆಯಂತೆ ನಿಂತು ದತ್ತಹೋಮ ನಡೆಯಲು ನೆರವಾದರು.<br /> <br /> ವಿಎಚ್ಪಿ ಮುಖಂಡ ಶಿವಶಂಕರ್ ಮತ್ತು ಬಜರಂಗದಳದ ಪ್ರಾಂತ ಸಂಚಾಲಕ ಸೂರ್ಯನಾರಾಯಣ್ ಪೂರ್ಣಾಹುತಿ ನೆರವೇರಿಸಿದರು.<br /> ಅಧಿಕಾರಿಗಳಿಗೆ ಪೇಚಾಟ: ಬೆಂಗಳೂರಿನ ಶ್ರೀಧರಾಶ್ರಮದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಪಾದುಕೆಗಳ ದರ್ಶನ ಪಡೆದು ಒಳಗೆ ಕುಳಿತವರು ಗಂಟೆಗಳು ಕಳೆದರೂ ಮೇಲೆ ಏಳದಿದ್ದುದು ಕಂದಾಯ ಅಧಿಕಾರಿಗಳಲ್ಲಿ ಆತಂಕದ ಗೆರೆ ಮೂಡಿಸಿದ್ದವು.<br /> <br /> ಹಲವು ಬಾರಿ ಅಧಿಕಾರಿಗಳು ಮತ್ತು ಪೊಲೀಸರು ‘ಮೇಲೇಳಿ ಸ್ವಾಮೀಜಿ’ ಎಂದು ಸೂಚಿಸಿದರೂ ಅಧಿಕಾರಿಗಳ ವಿನಂತಿಗೆ ಮೌನವ್ರತ ಹಿಡಿದಿದ್ದ ಸ್ವಾಮೀಜಿ ಸೊಪ್ಪು ಹಾಕಲಿಲ್ಲ. ಅಂತೂ ಇಂತೂ ಸ್ವಾಮೀಜಿ ಮಧ್ಯಾಹ್ನ 12 ಗಂಟೆಗೆ ಗುಹೆಯಿಂದ ಹೊರ ಬಂದರು.<br /> <br /> <strong>40 ವರ್ಷದೊಳಗಿನ ಪೊಲೀಸರು:</strong><br /> ದತ್ತ ಜಯಂತಿ ನಿಭಾಯಿಸಲು ಸಾವಿರಾರು ಪೊಲೀಸರು ಕರ್ತವ್ಯದ ಮೇಲೆ ಗಿರಿಗೆ ಬಂದಿದ್ದರು. ಇದೇ ಮೊದಲ ಬಾರಿಗೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪೊಲೀಸರನ್ನು ಮಾತ್ರ ಇಲಾಖೆ ಗಿರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದು ವಿಶೇಷವಾಗಿತ್ತು. <br /> <br /> ಭಾರೀ ಚಳಿಯಿಂದಾಗಿ ಪೊಲೀಸರು ಅನಾರೋಗ್ಯ ಪೀಡಿತರಾಗುತ್ತಿದ್ದುದು ಕೆಲವೊಮ್ಮೆ ಅಸುನೀಗುತ್ತಿದ್ದುದನ್ನು ಗಮನಿಸಿ ಜಿಲ್ಲಾ ಪೊಲೀಸರು ಈ ನಿಯಮ ಜಾರಿ ಮಾಡಿದ್ದರು.<br /> <br /> ಪಶ್ಚಿಮ ವಲಯ ಐಜಿಪಿ ಅಲೋಕ್ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಿತ್ರ ಹೆರಾಜೆ ಬಂದೋಬಸ್ತ್ನ ಉಸ್ತುವಾರಿ ಹೊತ್ತಿದ್ದರು.<br /> <br /> ಶಾಸಕರಾದ ಸಿ.ಟಿ.ರವಿ, ಡಿ.ಎನ್.ಜೀವರಾಜ್, ಎಂ.ಪಿ.ಕುಮಾರಸ್ವಾಮಿ, ಸಂಸದ ಡಿ.ವಿ.ಸದಾನಂದಗೌಡ, ಸಂಘ ಪರಿವಾರದ ಮುಖಂಡರಾದ ಪ್ರದೀಪ್, ರಘು, ಖಾಂಡ್ಯ ಪ್ರವೀಣ್, ಶಿವಶಂಕರ್, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ಪ್ರಕಾಶ್ಶರ್ಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>