<p><strong>ಮೈಸೂರು: </strong>ಸುತ್ತಲೂ ಹಸಿರು ನೆಲ ಹಾಸು..ಮನಸ್ಸಿಗೆ ಮುದ ನೀಡುವ ತಂಗಾಳಿ..ತುಂತುರು ಮಳೆ..ಮನಸ್ಸಿಗೆ ಇಂಪು ನೀಡುವ ಲಘು ಸಂಗೀತ..ಇವುಗಳಿಗೆ ಸಾಥ್ ನೀಡಲು ಝಗಮಗಿಸುವ ವಿದ್ಯುತ್ ದೀಪಗಳು..ಸಂಗೀತ ಕಾರಂಜಿಯ ಮನಮೋಹಕ ನೃತ್ಯ..<br /> <br /> -ಹೌದು. ಇವೆಲ್ಲವನ್ನೂ ಈಗ ನಜರ್ಬಾದ್ನಲ್ಲಿರುವ ಕುಪ್ಪಣ್ಣ ಉದ್ಯಾನದಲ್ಲೇ ಕಣ್ತುಂಬಿಕೊಳ್ಳಬಹುದು.<br /> ಕೃಷ್ಣರಾಜಸಾಗರ (ಕೆಆರ್ಎಸ್) ಉದ್ಯಾನದಲ್ಲಿರುವ ಸಂಗೀತ ಕಾರಂಜಿ (ಮ್ಯೂಸಿಕಲ್ ಫೌಂಟೇನ್) ಮಾದರಿಯಲ್ಲೇ ಕುಪ್ಪಣ್ಣ ಉದ್ಯಾನದಲ್ಲಿ ಸಂಗೀತ ಕಾರಂಜಿ ಅರಳಿ ನಿಂತಿದೆ.<br /> <br /> ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ದೇಶಭಕ್ತಿ ಗೀತೆಗಳ ಸಂಗೀತಕ್ಕೆ ತಕ್ಕಂತೆ ಕುಣಿದು-ಕುಪ್ಪಳಿಸುವ `ಸಂಗೀತ ಕಾರಂಜಿ~ ನೋಡುವುದೇ ಅಂದ. ಇದರಿಂದಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಈಗ ಮತ್ತೊಂದು ಕೋಡು ಮೂಡಿದಂತಾಗಿದೆ. <br /> <br /> ಮುಖ್ಯಮಂತ್ರಿಗಳ ರೂ 100 ಕೋಟಿ ಅನುದಾನದಲ್ಲಿ ರೂ 55 ಲಕ್ಷ ವೆಚ್ಚದಲ್ಲಿ `ಸಂಗೀತ ಕಾರಂಜಿ~ ನಿರ್ಮಿಸಲಾಗಿದೆ. ಇದರ ರೂವಾರಿ ಬೆಂಗಳೂರಿನ ಬಿಎನ್ಎ ಟೆಕ್ನಾಲಜಿ ಕನ್ಸಲ್ಟಂಟ್ಸ್ ಲಿಮಿಟೆಡ್ ಕಂಪೆನಿಯ ಯೋಜನಾ ನಿರ್ದೇಶಕ ಎಂ.ಜೆ.ಶ್ರೀಧರ್.<br /> <br /> ಕುಪ್ಪಣ್ಣ ಉದ್ಯಾನದಲ್ಲಿ ಹಸಿರು ನೆಲಹಾಸು (ಲಾನ್) ಅಳವಡಿಸಲಾಗಿದೆ. ಜತೆಗೆ ಮಂದ ಬೆಳಕು ನೀಡುವ ವಿದ್ಯುತ್ ದೀಪಗಳು. ಸಾರ್ವಜನಿಕರು ಹಾಗೂ ಪ್ರವಾಸಿಗರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ನಗರದ ಹೃದಯ ಭಾಗದಲ್ಲೇ ಉದ್ಯಾನ ಇರುವುದರಿಂದ ಸಂಗೀತ ಕಾರಂಜಿ ನೋಡಲು `ಕೆಆರ್ಎಸ್~ಗೆ ಹೋಗುವ ಪ್ರಮೇಯ ತಪ್ಪಿದಂತಾಗಿದೆ.<br /> <br /> ಅ. 16 ರಂದು ಚಾಮುಂಡಿ ಬೆಟ್ಟದಲ್ಲಿ 402ನೇ ದಸರಾ ಉದ್ಘಾಟನೆಗೆ ಚಾಲನೆ ದೊರೆತರೆ, ಅದೇ ದಿನ ಸಂಜೆ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ `ಸಂಗೀತ ಕಾರಂಜಿ~ಗೆ ಚಾಲನೆ ನೀಡಿದ್ದಾರೆ.<br /> <br /> ದಸರಾ ಉತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಪ್ರತಿ ನಿತ್ಯ ಸಂಜೆ 6 ರಿಂದ 8ರ ವರೆಗೆ ಜಾನಪದ, ಭಾವಗೀತೆ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿಗೆ ಆಗಮಿಸುವ ಸಂಗೀತ ಪ್ರಿಯರು, ಸಂಜೆ 7 ಗಂಟೆ ಹಾಗೂ 7.30ಕ್ಕೆ ಕಾರಂಜಿಯ ಸಂಗೀತವನ್ನೂ ಆಸ್ವಾದಿಸಬಹುದಾಗಿದೆ.<br /> <br /> ಕೆಆರ್ಎಸ್ ಜಲಾಶಯದಲ್ಲಿ ಇರುವ ಬೃಂದಾವನ ಉದ್ಯಾನದ ಸಂಗೀತ ಕಾರಂಜಿಗಿಂತ ಮೂರು ಪಟ್ಟು ದೊಡ್ಡದಾಗಿರುವ ನೃತ್ಯ ಕಾರಂಜಿಯು 12್ಡ6 ಮೀಟರ್ ಅಳತೆಯಲ್ಲಿ ಅರಳಿ ನಿಂತಿದೆ. ಹೊರಭಾಗದಿಂದ 16್ಡ8 ಮೀಟರ್ ವಿಸ್ತೀರ್ಣ ಹೊಂದಿದೆ.<br /> <br /> ಕನ್ನಡ, ಹಿಂದಿ ಹಾಡುಗಳನ್ನು ಅಳವಡಿಸಲಾಗಿದೆ. ಸಂಗೀತ, ನೀರಿನ ಬಣ್ಣ, ಪುಟಿಯುವ ಎತ್ತರ ನಿಯಂತ್ರಿಸಲು `ಇನ್ಫೋಟೇನ್ಮೆಂಟ್~ ಎಂಬ ಸಾಫ್ಟ್ವೇರ್ ಬಳಸಲಾಗಿದೆ. 90 ಕಿಲೋವಾಟ್ ವಿದ್ಯುತ್ ಸಂಗ್ರಹಕ ಅಳವಡಿಸಲಾಗಿದ್ದು, 3 ಎಚ್.ಪಿಯ 2 ಹಾಗೂ 5 ಎಚ್.ಪಿಯ 1 ಪಂಪ್ಸೆಟ್ ಬಳಸಲಾಗಿದೆ.<br /> <br /> `ಜೈ ಭಾರತ ಜನನಿಯ ತನುಜಾತೆ~.. `ಉಳುವಾ ಯೋಗಿಯ ನೋಡಲ್ಲಿ~.. `ಕಾಡು ಕುದುರೆ ಓಡಿ ಬಂದಿತ್ತ~... `ವಿಶ್ವವಿನೂತನ ವಿದ್ಯಾಚೇತನ~..`ಮೈ ನೇಮ್ ಈಸ್ ಶೀಲಾ, ಶೀಲಾ ಕಿ ಜವಾನಿ~.. `ಸಾರೆ ಜಹಾಂಸೆ ಅಚ್ಚಾ ಹಿಂದೂಸ್ತಾನ ಹಮಾರಾ~.. `ಪ್ಯಾರ್ಗೆ ಆಗ್ಬುಟ್ಟೈತೆ~.. ಹೀಗೆ ಪ್ರವಾಸಿಗರಿಗೆ ಇಷ್ಟವಾಗುವ ದೇಶಭಕ್ತಿ, ಜಾನಪದ ಹಾಗೂ ಚಲನಚಿತ್ರ ಗೀತೆಗಳನ್ನು ಅಳವಡಿಸಲಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಸುತ್ತಲೂ ಹಸಿರು ನೆಲ ಹಾಸು..ಮನಸ್ಸಿಗೆ ಮುದ ನೀಡುವ ತಂಗಾಳಿ..ತುಂತುರು ಮಳೆ..ಮನಸ್ಸಿಗೆ ಇಂಪು ನೀಡುವ ಲಘು ಸಂಗೀತ..ಇವುಗಳಿಗೆ ಸಾಥ್ ನೀಡಲು ಝಗಮಗಿಸುವ ವಿದ್ಯುತ್ ದೀಪಗಳು..ಸಂಗೀತ ಕಾರಂಜಿಯ ಮನಮೋಹಕ ನೃತ್ಯ..<br /> <br /> -ಹೌದು. ಇವೆಲ್ಲವನ್ನೂ ಈಗ ನಜರ್ಬಾದ್ನಲ್ಲಿರುವ ಕುಪ್ಪಣ್ಣ ಉದ್ಯಾನದಲ್ಲೇ ಕಣ್ತುಂಬಿಕೊಳ್ಳಬಹುದು.<br /> ಕೃಷ್ಣರಾಜಸಾಗರ (ಕೆಆರ್ಎಸ್) ಉದ್ಯಾನದಲ್ಲಿರುವ ಸಂಗೀತ ಕಾರಂಜಿ (ಮ್ಯೂಸಿಕಲ್ ಫೌಂಟೇನ್) ಮಾದರಿಯಲ್ಲೇ ಕುಪ್ಪಣ್ಣ ಉದ್ಯಾನದಲ್ಲಿ ಸಂಗೀತ ಕಾರಂಜಿ ಅರಳಿ ನಿಂತಿದೆ.<br /> <br /> ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ದೇಶಭಕ್ತಿ ಗೀತೆಗಳ ಸಂಗೀತಕ್ಕೆ ತಕ್ಕಂತೆ ಕುಣಿದು-ಕುಪ್ಪಳಿಸುವ `ಸಂಗೀತ ಕಾರಂಜಿ~ ನೋಡುವುದೇ ಅಂದ. ಇದರಿಂದಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಈಗ ಮತ್ತೊಂದು ಕೋಡು ಮೂಡಿದಂತಾಗಿದೆ. <br /> <br /> ಮುಖ್ಯಮಂತ್ರಿಗಳ ರೂ 100 ಕೋಟಿ ಅನುದಾನದಲ್ಲಿ ರೂ 55 ಲಕ್ಷ ವೆಚ್ಚದಲ್ಲಿ `ಸಂಗೀತ ಕಾರಂಜಿ~ ನಿರ್ಮಿಸಲಾಗಿದೆ. ಇದರ ರೂವಾರಿ ಬೆಂಗಳೂರಿನ ಬಿಎನ್ಎ ಟೆಕ್ನಾಲಜಿ ಕನ್ಸಲ್ಟಂಟ್ಸ್ ಲಿಮಿಟೆಡ್ ಕಂಪೆನಿಯ ಯೋಜನಾ ನಿರ್ದೇಶಕ ಎಂ.ಜೆ.ಶ್ರೀಧರ್.<br /> <br /> ಕುಪ್ಪಣ್ಣ ಉದ್ಯಾನದಲ್ಲಿ ಹಸಿರು ನೆಲಹಾಸು (ಲಾನ್) ಅಳವಡಿಸಲಾಗಿದೆ. ಜತೆಗೆ ಮಂದ ಬೆಳಕು ನೀಡುವ ವಿದ್ಯುತ್ ದೀಪಗಳು. ಸಾರ್ವಜನಿಕರು ಹಾಗೂ ಪ್ರವಾಸಿಗರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ನಗರದ ಹೃದಯ ಭಾಗದಲ್ಲೇ ಉದ್ಯಾನ ಇರುವುದರಿಂದ ಸಂಗೀತ ಕಾರಂಜಿ ನೋಡಲು `ಕೆಆರ್ಎಸ್~ಗೆ ಹೋಗುವ ಪ್ರಮೇಯ ತಪ್ಪಿದಂತಾಗಿದೆ.<br /> <br /> ಅ. 16 ರಂದು ಚಾಮುಂಡಿ ಬೆಟ್ಟದಲ್ಲಿ 402ನೇ ದಸರಾ ಉದ್ಘಾಟನೆಗೆ ಚಾಲನೆ ದೊರೆತರೆ, ಅದೇ ದಿನ ಸಂಜೆ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ `ಸಂಗೀತ ಕಾರಂಜಿ~ಗೆ ಚಾಲನೆ ನೀಡಿದ್ದಾರೆ.<br /> <br /> ದಸರಾ ಉತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಪ್ರತಿ ನಿತ್ಯ ಸಂಜೆ 6 ರಿಂದ 8ರ ವರೆಗೆ ಜಾನಪದ, ಭಾವಗೀತೆ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿಗೆ ಆಗಮಿಸುವ ಸಂಗೀತ ಪ್ರಿಯರು, ಸಂಜೆ 7 ಗಂಟೆ ಹಾಗೂ 7.30ಕ್ಕೆ ಕಾರಂಜಿಯ ಸಂಗೀತವನ್ನೂ ಆಸ್ವಾದಿಸಬಹುದಾಗಿದೆ.<br /> <br /> ಕೆಆರ್ಎಸ್ ಜಲಾಶಯದಲ್ಲಿ ಇರುವ ಬೃಂದಾವನ ಉದ್ಯಾನದ ಸಂಗೀತ ಕಾರಂಜಿಗಿಂತ ಮೂರು ಪಟ್ಟು ದೊಡ್ಡದಾಗಿರುವ ನೃತ್ಯ ಕಾರಂಜಿಯು 12್ಡ6 ಮೀಟರ್ ಅಳತೆಯಲ್ಲಿ ಅರಳಿ ನಿಂತಿದೆ. ಹೊರಭಾಗದಿಂದ 16್ಡ8 ಮೀಟರ್ ವಿಸ್ತೀರ್ಣ ಹೊಂದಿದೆ.<br /> <br /> ಕನ್ನಡ, ಹಿಂದಿ ಹಾಡುಗಳನ್ನು ಅಳವಡಿಸಲಾಗಿದೆ. ಸಂಗೀತ, ನೀರಿನ ಬಣ್ಣ, ಪುಟಿಯುವ ಎತ್ತರ ನಿಯಂತ್ರಿಸಲು `ಇನ್ಫೋಟೇನ್ಮೆಂಟ್~ ಎಂಬ ಸಾಫ್ಟ್ವೇರ್ ಬಳಸಲಾಗಿದೆ. 90 ಕಿಲೋವಾಟ್ ವಿದ್ಯುತ್ ಸಂಗ್ರಹಕ ಅಳವಡಿಸಲಾಗಿದ್ದು, 3 ಎಚ್.ಪಿಯ 2 ಹಾಗೂ 5 ಎಚ್.ಪಿಯ 1 ಪಂಪ್ಸೆಟ್ ಬಳಸಲಾಗಿದೆ.<br /> <br /> `ಜೈ ಭಾರತ ಜನನಿಯ ತನುಜಾತೆ~.. `ಉಳುವಾ ಯೋಗಿಯ ನೋಡಲ್ಲಿ~.. `ಕಾಡು ಕುದುರೆ ಓಡಿ ಬಂದಿತ್ತ~... `ವಿಶ್ವವಿನೂತನ ವಿದ್ಯಾಚೇತನ~..`ಮೈ ನೇಮ್ ಈಸ್ ಶೀಲಾ, ಶೀಲಾ ಕಿ ಜವಾನಿ~.. `ಸಾರೆ ಜಹಾಂಸೆ ಅಚ್ಚಾ ಹಿಂದೂಸ್ತಾನ ಹಮಾರಾ~.. `ಪ್ಯಾರ್ಗೆ ಆಗ್ಬುಟ್ಟೈತೆ~.. ಹೀಗೆ ಪ್ರವಾಸಿಗರಿಗೆ ಇಷ್ಟವಾಗುವ ದೇಶಭಕ್ತಿ, ಜಾನಪದ ಹಾಗೂ ಚಲನಚಿತ್ರ ಗೀತೆಗಳನ್ನು ಅಳವಡಿಸಲಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>