<p>ಸಿಂಗಪುರ: ಮೂಲತಃ ಚನ್ನಪಟ್ಟಣದ ಹಿರಿಯ ಪತ್ರಕರ್ತ, ಲೇಖಕ ಟಿ.ಎಸ್. ಸಂಜೀವರಾವ್ (92) ಇದೇ 17ರಂದು ಇಲ್ಲಿ ನಿಧನ ಹೊಂದಿದರು. <br /> <br /> ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಆನರ್ಸ್ ಪದವೀಧರರಾಗಿದ್ದ ಅವರು, 1947ರಲ್ಲಿ ಮುಂಬೈಗೆ ಆಗಮಿಸಿ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಹಲವು ಪತ್ರಿಕೆಗಳಲ್ಲಿ ದುಡಿದ ಅವರು 1968ರಲ್ಲಿ ಕರ್ನಾಟಕಕ್ಕೆ ಹಿಂದಿರುಗಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಅನೇಕ ಪತ್ರಿಕೆಗಳಿಗೆ ವರದಿಗಾರರಾಗಿದ್ದ ಅವರು, ಪಾ.ವೆಂ. ಆಚಾರ್ಯ ನೇತೃತ್ವದ `ಕಸ್ತೂರಿ~ ಮಾಸ ಪತ್ರಿಕೆಯಲ್ಲೂ ಕೆಲಸ ಮಾಡಿದರು.<br /> <br /> ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ `ಮೂಕಜ್ಜಿಯ ಕನಸುಗಳು~ ಕೃತಿಇಂಗ್ಲಿಷ್ಗೆ ಭಾಷಾಂತರಿಸಿದ್ದರು. `ನಮ್ಮೂರು-ನಮ್ಮವರು~, `ತ್ರಿವೇಣಿ ಸಂಗಮ~, `ಹೆಣ್ಣು ಹೃದಯ ಮತ್ತು ಇತರ ಕಥೆಗಳು~, `ಚಿನ್ನದ ಇಲಿ~, ಈ ಭಾರತ ಸೇರಿದಂತೆ ಹಲವು ಕೃತಿಗಳನ್ನು ಅವರು ರಚಿಸಿದ್ದಾರೆ.<br /> ಇಂಗ್ಲಿಷ್ನಲ್ಲೂ ಪ್ರಭುತ್ವ ಹೊಂದಿದ್ದ ಅವರು ಕೆಲವು ಕೃತಿಗಳನ್ನು ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿಂಗಪುರ: ಮೂಲತಃ ಚನ್ನಪಟ್ಟಣದ ಹಿರಿಯ ಪತ್ರಕರ್ತ, ಲೇಖಕ ಟಿ.ಎಸ್. ಸಂಜೀವರಾವ್ (92) ಇದೇ 17ರಂದು ಇಲ್ಲಿ ನಿಧನ ಹೊಂದಿದರು. <br /> <br /> ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಆನರ್ಸ್ ಪದವೀಧರರಾಗಿದ್ದ ಅವರು, 1947ರಲ್ಲಿ ಮುಂಬೈಗೆ ಆಗಮಿಸಿ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಹಲವು ಪತ್ರಿಕೆಗಳಲ್ಲಿ ದುಡಿದ ಅವರು 1968ರಲ್ಲಿ ಕರ್ನಾಟಕಕ್ಕೆ ಹಿಂದಿರುಗಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಅನೇಕ ಪತ್ರಿಕೆಗಳಿಗೆ ವರದಿಗಾರರಾಗಿದ್ದ ಅವರು, ಪಾ.ವೆಂ. ಆಚಾರ್ಯ ನೇತೃತ್ವದ `ಕಸ್ತೂರಿ~ ಮಾಸ ಪತ್ರಿಕೆಯಲ್ಲೂ ಕೆಲಸ ಮಾಡಿದರು.<br /> <br /> ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ `ಮೂಕಜ್ಜಿಯ ಕನಸುಗಳು~ ಕೃತಿಇಂಗ್ಲಿಷ್ಗೆ ಭಾಷಾಂತರಿಸಿದ್ದರು. `ನಮ್ಮೂರು-ನಮ್ಮವರು~, `ತ್ರಿವೇಣಿ ಸಂಗಮ~, `ಹೆಣ್ಣು ಹೃದಯ ಮತ್ತು ಇತರ ಕಥೆಗಳು~, `ಚಿನ್ನದ ಇಲಿ~, ಈ ಭಾರತ ಸೇರಿದಂತೆ ಹಲವು ಕೃತಿಗಳನ್ನು ಅವರು ರಚಿಸಿದ್ದಾರೆ.<br /> ಇಂಗ್ಲಿಷ್ನಲ್ಲೂ ಪ್ರಭುತ್ವ ಹೊಂದಿದ್ದ ಅವರು ಕೆಲವು ಕೃತಿಗಳನ್ನು ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>