<p><strong>ಬೆಂಗಳೂರು:</strong> ಇದೇ 2ರಂದು ನಗರ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ವಕೀಲರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು, ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ದಾಖಲು ಮಾಡಬೇಕು ಎಂಬ ವಕೀಲರ ಮನವಿಗೆ ಸೋಮವಾರ ಮುಖ್ಯ ನ್ಯಾಯಮೂರ್ತಿಗಳು `ಗರಂ~ ಆದರು.</p>.<p>ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರು, ಚೆನ್ನೈ ವಕೀಲರ ಸಂಘದ ಅಧ್ಯಕ್ಷರನ್ನು ಕರೆದುಕೊಂಡು ಬಂದು ಬೆಳಿಗ್ಗೆ 10.30ಕ್ಕೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಕಲಾಪ ನಡೆಸುವ ಕೋರ್ಟ್ ಸಭಾಂಗಣಕ್ಕೆ ಹಾಜರಾದರು.</p>.<p>ಚೆನ್ನೈನಲ್ಲಿ ಕಳೆದ ವರ್ಷ ಇದೇ ರೀತಿ ಘಟನೆ ನಡೆದಾಗ, (ಪೊಲೀಸರ ವಿರುದ್ಧ) ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳಲಾಗಿತ್ತು ಎಂದು ಚೆನ್ನೈ ವಕೀಲರ ಸಂಘದ ಅಧ್ಯಕ್ಷರು ಪೀಠಕ್ಕೆ ಮನವರಿಕೆ ಮಾಡಿಕೊಡಲು ಹೋದರು.</p>.<p>ಆಗ ಕೋಪಗೊಂಡ ನ್ಯಾ.ಸೇನ್, `ಇಲ್ಲಿಯ ಪರಿಸ್ಥಿತಿ ಬೇರೆ ರೀತಿ ಇದೆ. ಈ ರೀತಿ ಮನವಿ ನಮಗೆ ಬೇಕಿಲ್ಲ. ಮೊದಲು ಮುಷ್ಕರ ಹಿಂದಕ್ಕೆ ಪಡೆದು ಕೋರ್ಟ್ ಕಲಾಪಕ್ಕೆ ವಕೀಲರು ಹಾಜರಾಗಲಿ. ಆಮೇಲೆ ಮನವಿ ಸಲ್ಲಿಸಿ, ಆ ಬಗ್ಗೆ ವಿಚಾರಿಸೋಣ~ ಎಂದರು.</p>.<p>ಅದಕ್ಕೆ ವಕೀಲರು ಇನ್ನೇನೋ ಸಮಜಾಷಿ ಕೊಡಲು ಮುಂದಾದರು. ಆಗ ನ್ಯಾ.ಸೇನ್, `ನಿಮಗೆ ಏನು ಬೇಕೋ ಅದನ್ನು ಮಾಡಿ. ನಾವು ಏನು ಮಾಡಬೇಕೊ ಹಾಗೆ ಮಾಡುತ್ತೇವೆ~ ಎಂದು ಹೇಳಿದರು. ನಂತರ ವಕೀಲರು ಸಭಾಂಗಣ ಬಿಟ್ಟು ಹೊರನಡೆದರು.</p>.<p>ಘಟನೆ ನಡೆದ ದಿನ ಪೊಲೀಸರು ತಮ್ಮ ಅಧಿಕಾರ ಮೀರಿ ನ್ಯಾಯಾಲಯದ ಒಳಕ್ಕೆ ಪ್ರವೇಶ ಮಾಡಿದ್ದಾರೆ ಎನ್ನುವುದು ವಕೀಲರ ಆರೋಪ. ಈ ಮಧ್ಯೆ, ಸೋಮವಾರವೂ ಕೋರ್ಟ್ ಕಲಾಪವನ್ನು ವಕೀಲರು ಬಹಿಷ್ಕರಿಸಿದರು. ಇದರಿಂದ ಸಿವಿಲ್ ಕೋರ್ಟ್ ಕಾರ್ಯ ನಿರ್ವಹಿಸಲಿಲ್ಲ.</p>.<p>ಕೆಲವು ವಕೀಲರು ಕೋರ್ಟ್ ಕಲಾಪಕ್ಕೆ ಹಾಜರಾಗಲು ಹೋದರೂ ಅದಕ್ಕೆ ಇನ್ನು ಕೆಲವರು ಅಡ್ಡಿ ಮಾಡಿದರು ಎಂದು ಮೂಲಗಳು ತಿಳಿಸಿವೆ.</p>.<p><strong>ಹೊಸ ಗೋಳು:</strong> ಭದ್ರತೆ ದೃಷ್ಟಿಯಿಂದ ಲೋಕಾಯುಕ್ತ ವಿಶೇಷ ಕೋರ್ಟನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ಹೈಕೋರ್ಟನ್ನು ಕೆಲವು ವಕೀಲರು ಈ ಹಿಂದೆ ಕೋರಿದ್ದರು.</p>.<p>ಆ ಕೋರಿಕೆ ಮೇರೆಗೆ ಈಗ ನ್ಯಾಯಾಲಯವನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ವಕೀಲರು ಈಗ ಪುನಃ ತಮ್ಮ ಅಸಮಾಧಾನ ಹೊರಕ್ಕೆ ಹಾಕಿದ್ದಾರೆ. ಅದು ನಗರದಿಂದ ದೂರ ಇರುವ ಹಿನ್ನೆಲೆಯಲ್ಲಿ ಹೃದಯ ಭಾಗಕ್ಕೆ ಸ್ಥಳಾಂತರಿಸಬೇಕು ಎನ್ನುವುದು ಅವರ ಈಗಿನ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇದೇ 2ರಂದು ನಗರ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ವಕೀಲರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು, ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ದಾಖಲು ಮಾಡಬೇಕು ಎಂಬ ವಕೀಲರ ಮನವಿಗೆ ಸೋಮವಾರ ಮುಖ್ಯ ನ್ಯಾಯಮೂರ್ತಿಗಳು `ಗರಂ~ ಆದರು.</p>.<p>ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರು, ಚೆನ್ನೈ ವಕೀಲರ ಸಂಘದ ಅಧ್ಯಕ್ಷರನ್ನು ಕರೆದುಕೊಂಡು ಬಂದು ಬೆಳಿಗ್ಗೆ 10.30ಕ್ಕೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಕಲಾಪ ನಡೆಸುವ ಕೋರ್ಟ್ ಸಭಾಂಗಣಕ್ಕೆ ಹಾಜರಾದರು.</p>.<p>ಚೆನ್ನೈನಲ್ಲಿ ಕಳೆದ ವರ್ಷ ಇದೇ ರೀತಿ ಘಟನೆ ನಡೆದಾಗ, (ಪೊಲೀಸರ ವಿರುದ್ಧ) ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳಲಾಗಿತ್ತು ಎಂದು ಚೆನ್ನೈ ವಕೀಲರ ಸಂಘದ ಅಧ್ಯಕ್ಷರು ಪೀಠಕ್ಕೆ ಮನವರಿಕೆ ಮಾಡಿಕೊಡಲು ಹೋದರು.</p>.<p>ಆಗ ಕೋಪಗೊಂಡ ನ್ಯಾ.ಸೇನ್, `ಇಲ್ಲಿಯ ಪರಿಸ್ಥಿತಿ ಬೇರೆ ರೀತಿ ಇದೆ. ಈ ರೀತಿ ಮನವಿ ನಮಗೆ ಬೇಕಿಲ್ಲ. ಮೊದಲು ಮುಷ್ಕರ ಹಿಂದಕ್ಕೆ ಪಡೆದು ಕೋರ್ಟ್ ಕಲಾಪಕ್ಕೆ ವಕೀಲರು ಹಾಜರಾಗಲಿ. ಆಮೇಲೆ ಮನವಿ ಸಲ್ಲಿಸಿ, ಆ ಬಗ್ಗೆ ವಿಚಾರಿಸೋಣ~ ಎಂದರು.</p>.<p>ಅದಕ್ಕೆ ವಕೀಲರು ಇನ್ನೇನೋ ಸಮಜಾಷಿ ಕೊಡಲು ಮುಂದಾದರು. ಆಗ ನ್ಯಾ.ಸೇನ್, `ನಿಮಗೆ ಏನು ಬೇಕೋ ಅದನ್ನು ಮಾಡಿ. ನಾವು ಏನು ಮಾಡಬೇಕೊ ಹಾಗೆ ಮಾಡುತ್ತೇವೆ~ ಎಂದು ಹೇಳಿದರು. ನಂತರ ವಕೀಲರು ಸಭಾಂಗಣ ಬಿಟ್ಟು ಹೊರನಡೆದರು.</p>.<p>ಘಟನೆ ನಡೆದ ದಿನ ಪೊಲೀಸರು ತಮ್ಮ ಅಧಿಕಾರ ಮೀರಿ ನ್ಯಾಯಾಲಯದ ಒಳಕ್ಕೆ ಪ್ರವೇಶ ಮಾಡಿದ್ದಾರೆ ಎನ್ನುವುದು ವಕೀಲರ ಆರೋಪ. ಈ ಮಧ್ಯೆ, ಸೋಮವಾರವೂ ಕೋರ್ಟ್ ಕಲಾಪವನ್ನು ವಕೀಲರು ಬಹಿಷ್ಕರಿಸಿದರು. ಇದರಿಂದ ಸಿವಿಲ್ ಕೋರ್ಟ್ ಕಾರ್ಯ ನಿರ್ವಹಿಸಲಿಲ್ಲ.</p>.<p>ಕೆಲವು ವಕೀಲರು ಕೋರ್ಟ್ ಕಲಾಪಕ್ಕೆ ಹಾಜರಾಗಲು ಹೋದರೂ ಅದಕ್ಕೆ ಇನ್ನು ಕೆಲವರು ಅಡ್ಡಿ ಮಾಡಿದರು ಎಂದು ಮೂಲಗಳು ತಿಳಿಸಿವೆ.</p>.<p><strong>ಹೊಸ ಗೋಳು:</strong> ಭದ್ರತೆ ದೃಷ್ಟಿಯಿಂದ ಲೋಕಾಯುಕ್ತ ವಿಶೇಷ ಕೋರ್ಟನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ಹೈಕೋರ್ಟನ್ನು ಕೆಲವು ವಕೀಲರು ಈ ಹಿಂದೆ ಕೋರಿದ್ದರು.</p>.<p>ಆ ಕೋರಿಕೆ ಮೇರೆಗೆ ಈಗ ನ್ಯಾಯಾಲಯವನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ವಕೀಲರು ಈಗ ಪುನಃ ತಮ್ಮ ಅಸಮಾಧಾನ ಹೊರಕ್ಕೆ ಹಾಕಿದ್ದಾರೆ. ಅದು ನಗರದಿಂದ ದೂರ ಇರುವ ಹಿನ್ನೆಲೆಯಲ್ಲಿ ಹೃದಯ ಭಾಗಕ್ಕೆ ಸ್ಥಳಾಂತರಿಸಬೇಕು ಎನ್ನುವುದು ಅವರ ಈಗಿನ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>