ಬೆಂಗಳೂರು: ಯಾವುದೇ ಕಾರಣಕ್ಕೂ ತಾವು ಬಿಜೆಪಿಗೆ ಮರಳಬಾರದು ಎಂದು ಕೆಜೆಪಿ ಮುಖಂಡರೂ ಆದ ಸಾಹಿತಿ ಪ್ರೊ ಚಂದ್ರಶೇಖರ ಪಾಟೀಲ ಅವರು ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಅವರಿಗೆ ಚಂಪಾ ಶನಿವಾರ ಪತ್ರ ಬರೆದಿದ್ದು, ಅದರ ಪ್ರತಿಯನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದಾರೆ.
ಡಿ.9ರಂದು ಕೆಜೆಪಿಯ ಕಾರ್ಯಕಾರಿಣಿಗೆ ಚಂಪಾ ಅವರನ್ನು ಯಡಿಯೂರಪ್ಪ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಚಂಪಾ ಅವರು ಪತ್ರ ಬರೆದಿದ್ದು, ಅದರಲ್ಲಿ ಈ ರೀತಿ ಇದೆ. ‘ಹಾವೇರಿಯ ಉದ್ಘಾಟನಾ ಸಮಾವೇಶದ ಮೂಲಕ ಅಸ್ತಿತ್ವಕ್ಕೆ ಬಂದ, ತಮ್ಮ ನಾಯಕತ್ವದ ಕರ್ನಾಟಕ ಜನತಾಪಕ್ಷ ಈಗ ಕವಲು ದಾರಿಯಲ್ಲಿದೆ.