<p>ಉಡುಪಿ: ಮಣಿಪಾಲ ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆಯ ಬಾಳಿಗ ಆಸ್ಪತ್ರೆ ಸಮೀಪದ ಮನೆಯೊಂದಕ್ಕೆ ಭಾನುವಾರ ರಾತ್ರಿ ಮೂವರು ಯುವಕರು ಮನೆಗೆ ನುಗ್ಗಿ ಸಿನಿಮೀಯ ಮಾದರಿಯಲ್ಲಿ ರೂ. 14.50 ಲಕ್ಷ ಮೌಲ್ಯದ ಸ್ವತ್ತು ಲೂಟಿ ಮಾಡಿದ್ದಾರೆ. <br /> <br /> ಮಾಬುಕಳ ಸೇತುವೆ ಬಳಿ, ಕುಮ್ರಗೋಡು ಗ್ರಾಮದ ನಿವಾಸಿ ವಾಸುದೇವ ಪೂಜಾರಿ (58) ಎಂಬುವವರ ಹಿರಿಯ ಸಹೋದರಿ ಕನಕಾ ಆರ್.ಅಮೀನ್ ಅವರ `ನಮನ~ ಮನೆಯಲ್ಲಿ ಈ ಘಟನೆ ನಡೆದಿದೆ. <br /> <br /> `ಆರೋಪಿಗಳಿಗಾಗಿ ಶೋಧ ನಡೆದಿದೆ~ ಎಂದು ದೂರು ದಾಖಲಿಸಿಕೊಂಡಿರುವ ಮಣಿಪಾಲ ಠಾಣೆ ಪೊಲೀಸರು ಸೋಮವಾರ ತಿಳಿಸಿದ್ದಾರೆ.<br /> <br /> ಘಟನೆ ವಿವರ: ಮಕ್ಕಳಿಬ್ಬರು ದುಬೈ, ಮುಂಬೈನಲ್ಲಿ ಇರುವುದರಿಂದ ಕನಕಾ ಅವರೊಬ್ಬರೇ ಮನೆಯಲ್ಲಿದ್ದು, ಸಂಬಂಧಿ ವಾಸುದೇವ ಪೂಜಾರಿ ಮತ್ತಿತರರು ಆಗ್ಗಾಗ್ಗೆ ಹೋಗಿ ರಕ್ಷಣೆಗೆಂದು ಉಳಿಯುತ್ತಿದ್ದರು.<br /> <br /> ವಾಸುದೇವ ಪೂಜಾರಿ, ಪ್ರಕಾಶ ಮತ್ತು ಗುರುದಾಸ ಮನೆಯ ಹಜಾರದಲ್ಲಿ ಭಾನುವಾರ ರಾತ್ರಿ 10.30ರ ವೇಳೆ ಟಿವಿ ನೋಡುತ್ತಿದ್ದಾಗ ಮೂವರು ಯುವಕರು, `ಪೇಂಟರ್ ಸಂತೋಷ್ ಇದ್ದಾರೆಯೇ?~ ಎಂದು ಕೇಳುತ್ತಲೇ ಒಳಕ್ಕೆ ನುಗ್ಗಿದರು. ಬಳಿಕ ಚಾಕುವಿನಿಂದ ಪೂಜಾರಿ ಮತ್ತು ಸಂಬಂಧಿಕರಿಗೆ ತಿವಿದು, ಬಾಯಿಗೆ ಪ್ಲಾಸ್ಟಿಕ್ ತುರುಕಿ ಕೊಠಡಿಯಲ್ಲಿ ಕೂಡಿ ಹಾಕಿದರು.<br /> <br /> ನಂತರ ಕನಕಾ ಅವರನ್ನು ಹೆದರಿಸಿ ಬೀರು ತೆಗೆಸಿ ವಜ್ರದೋಲೆ, ವಜ್ರದ ಉಂಗುರ, ತಲಾ 10 ಗ್ರಾಂ ತೂಕದ 6 ಚಿನ್ನದ ಬಳೆಗಳು, 25 ಗ್ರಾಂ ತೂಕದ ಇನ್ನೊಂದು ಬಳೆ, ತಲಾ 35 ಗ್ರಾಂನ 2 ಚಿನ್ನದಸರ, 1.75 ಲಕ್ಷ ನಗದು ಲೂಟಿ ಮಾಡಿದ್ದಾರೆ. ಅಲ್ಲದೆ, ಮನೆಯಂಗಳದಲ್ಲಿದ್ದ ಇನ್ನೋವಾ ಕಾರನ್ನೂ ಕದ್ದೊಯ್ದಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಡುಪಿ: ಮಣಿಪಾಲ ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆಯ ಬಾಳಿಗ ಆಸ್ಪತ್ರೆ ಸಮೀಪದ ಮನೆಯೊಂದಕ್ಕೆ ಭಾನುವಾರ ರಾತ್ರಿ ಮೂವರು ಯುವಕರು ಮನೆಗೆ ನುಗ್ಗಿ ಸಿನಿಮೀಯ ಮಾದರಿಯಲ್ಲಿ ರೂ. 14.50 ಲಕ್ಷ ಮೌಲ್ಯದ ಸ್ವತ್ತು ಲೂಟಿ ಮಾಡಿದ್ದಾರೆ. <br /> <br /> ಮಾಬುಕಳ ಸೇತುವೆ ಬಳಿ, ಕುಮ್ರಗೋಡು ಗ್ರಾಮದ ನಿವಾಸಿ ವಾಸುದೇವ ಪೂಜಾರಿ (58) ಎಂಬುವವರ ಹಿರಿಯ ಸಹೋದರಿ ಕನಕಾ ಆರ್.ಅಮೀನ್ ಅವರ `ನಮನ~ ಮನೆಯಲ್ಲಿ ಈ ಘಟನೆ ನಡೆದಿದೆ. <br /> <br /> `ಆರೋಪಿಗಳಿಗಾಗಿ ಶೋಧ ನಡೆದಿದೆ~ ಎಂದು ದೂರು ದಾಖಲಿಸಿಕೊಂಡಿರುವ ಮಣಿಪಾಲ ಠಾಣೆ ಪೊಲೀಸರು ಸೋಮವಾರ ತಿಳಿಸಿದ್ದಾರೆ.<br /> <br /> ಘಟನೆ ವಿವರ: ಮಕ್ಕಳಿಬ್ಬರು ದುಬೈ, ಮುಂಬೈನಲ್ಲಿ ಇರುವುದರಿಂದ ಕನಕಾ ಅವರೊಬ್ಬರೇ ಮನೆಯಲ್ಲಿದ್ದು, ಸಂಬಂಧಿ ವಾಸುದೇವ ಪೂಜಾರಿ ಮತ್ತಿತರರು ಆಗ್ಗಾಗ್ಗೆ ಹೋಗಿ ರಕ್ಷಣೆಗೆಂದು ಉಳಿಯುತ್ತಿದ್ದರು.<br /> <br /> ವಾಸುದೇವ ಪೂಜಾರಿ, ಪ್ರಕಾಶ ಮತ್ತು ಗುರುದಾಸ ಮನೆಯ ಹಜಾರದಲ್ಲಿ ಭಾನುವಾರ ರಾತ್ರಿ 10.30ರ ವೇಳೆ ಟಿವಿ ನೋಡುತ್ತಿದ್ದಾಗ ಮೂವರು ಯುವಕರು, `ಪೇಂಟರ್ ಸಂತೋಷ್ ಇದ್ದಾರೆಯೇ?~ ಎಂದು ಕೇಳುತ್ತಲೇ ಒಳಕ್ಕೆ ನುಗ್ಗಿದರು. ಬಳಿಕ ಚಾಕುವಿನಿಂದ ಪೂಜಾರಿ ಮತ್ತು ಸಂಬಂಧಿಕರಿಗೆ ತಿವಿದು, ಬಾಯಿಗೆ ಪ್ಲಾಸ್ಟಿಕ್ ತುರುಕಿ ಕೊಠಡಿಯಲ್ಲಿ ಕೂಡಿ ಹಾಕಿದರು.<br /> <br /> ನಂತರ ಕನಕಾ ಅವರನ್ನು ಹೆದರಿಸಿ ಬೀರು ತೆಗೆಸಿ ವಜ್ರದೋಲೆ, ವಜ್ರದ ಉಂಗುರ, ತಲಾ 10 ಗ್ರಾಂ ತೂಕದ 6 ಚಿನ್ನದ ಬಳೆಗಳು, 25 ಗ್ರಾಂ ತೂಕದ ಇನ್ನೊಂದು ಬಳೆ, ತಲಾ 35 ಗ್ರಾಂನ 2 ಚಿನ್ನದಸರ, 1.75 ಲಕ್ಷ ನಗದು ಲೂಟಿ ಮಾಡಿದ್ದಾರೆ. ಅಲ್ಲದೆ, ಮನೆಯಂಗಳದಲ್ಲಿದ್ದ ಇನ್ನೋವಾ ಕಾರನ್ನೂ ಕದ್ದೊಯ್ದಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>