<p><strong>ನೆಲಮಂಗಲ</strong>: ಮಹಿಳೆಯ ನೋವು, ನಲಿವು, ತಲ್ಲಣಗಳು ಜನಪದ ಸಾಹಿತ್ಯದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದು ಕವಯತ್ರಿ ಎಚ್.ಎಲ್.ಪುಷ್ಪಾ ಹೇಳಿದರು.<br /> ಸ್ಥಳೀಯ ಜಾಗೃತಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯು ಲೋಹಿತ್ ನಗರದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಮಹಿಳಾ ಜಾನಪದೋತ್ಸವ-2011 ಸಮಾರಂಭದಲ್ಲಿ ‘ಮಹಿಳಾ ಜ್ಯೋತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. <br /> <br /> ಬದುಕಿನ ಅನುಭವದಿಂದ ಹುಟ್ಟಿದ ಜನಪದ ಸಾಹಿತ್ಯದಲ್ಲಿ ಮಹಿಳೆಯರ ಆಶಯಗಳು ಸಹ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ ಎಂದು ಅವರು ಹೇಳಿದರು.<br /> ಶಾಸಕ ಎಸ್.ಮುನಿರಾಜು, ಮಾದರ ಚನ್ನಯ ಗುರುಪೀಠದ ಮಾದರ ಚನ್ನಯ್ಯ ಸ್ವಾಮೀಜಿ, ಶಿವಗಂಗೆಯ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಇದ್ದರು.<br /> ಸಂಘಟನೆ ಮತ್ತು ಮಹಿಳೆಯರ ಮಹತ್ವ ಕುರಿತಾಗಿ ಜಿ.ಪಂ.ಸದಸ್ಯ ಎಚ್.ಪಿ.ಚೆಲುವರಾಜು, ಪ್ರೇರಣಾ ವಿವಿದೋದ್ದೇಶ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿದರು.<br /> ಡಿವೈಎಸ್ಪಿ ಚಿನ್ನಸ್ವಾಮಿ, ತಾ.ಪಂ. ಉಪಾಧ್ಯಕ್ಷೆ ಅಶ್ವತ್ಥಮ್ಮ, ತಾ.ಪಂ. ಸದಸ್ಯ ವೀರಯ್ಯ, ಗ್ರಾ.ಪಂ.ಸದಸ್ಯರಾದ ಎಚ್.ಬೈಲಪ್ಪ, ವಸಂತಲಕ್ಷ್ಮಿ ರಂಗನಾಥ್, ಔಟ್ರೀಚ್ ಸಂಸ್ಥೆಯ ಎನ್.ಎಸ್.ಜಯಣ್ಣ, ‘ಸಾಕ್ಷರ ಭಾರತ್’ದ ಸುದರ್ಶನ್ ವೇದಿಕೆಯಲ್ಲಿ ಇದ್ದರು. <br /> <br /> ವಿವಿಧ ಸ್ಪರ್ಧೆಗಳ ವಿಜೇತರಿಗೆ ಜಾಗೃತಿ ಸಂಸ್ಥೆಯ ಅಧ್ಯಕ್ಷ ಬಿ.ಆರ್. ಭಾಸ್ಕರ್ಪ್ರಸಾದ್ ಬಹುಮಾನವನ್ನು ವಿತರಿಸಿದರು.<br /> ತಾಲ್ಲೂಕಿನ ಎಲ್ಲ ಗ್ರಾ.ಪಂ. ಮಹಿಳಾ ಅಧ್ಯಕ್ಷರನ್ನು ಮತ್ತು ಪ್ರಮುಖ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಎಂ.ನಾಗರಾಜು ಅವರು ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ</strong>: ಮಹಿಳೆಯ ನೋವು, ನಲಿವು, ತಲ್ಲಣಗಳು ಜನಪದ ಸಾಹಿತ್ಯದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದು ಕವಯತ್ರಿ ಎಚ್.ಎಲ್.ಪುಷ್ಪಾ ಹೇಳಿದರು.<br /> ಸ್ಥಳೀಯ ಜಾಗೃತಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯು ಲೋಹಿತ್ ನಗರದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಮಹಿಳಾ ಜಾನಪದೋತ್ಸವ-2011 ಸಮಾರಂಭದಲ್ಲಿ ‘ಮಹಿಳಾ ಜ್ಯೋತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. <br /> <br /> ಬದುಕಿನ ಅನುಭವದಿಂದ ಹುಟ್ಟಿದ ಜನಪದ ಸಾಹಿತ್ಯದಲ್ಲಿ ಮಹಿಳೆಯರ ಆಶಯಗಳು ಸಹ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ ಎಂದು ಅವರು ಹೇಳಿದರು.<br /> ಶಾಸಕ ಎಸ್.ಮುನಿರಾಜು, ಮಾದರ ಚನ್ನಯ ಗುರುಪೀಠದ ಮಾದರ ಚನ್ನಯ್ಯ ಸ್ವಾಮೀಜಿ, ಶಿವಗಂಗೆಯ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಇದ್ದರು.<br /> ಸಂಘಟನೆ ಮತ್ತು ಮಹಿಳೆಯರ ಮಹತ್ವ ಕುರಿತಾಗಿ ಜಿ.ಪಂ.ಸದಸ್ಯ ಎಚ್.ಪಿ.ಚೆಲುವರಾಜು, ಪ್ರೇರಣಾ ವಿವಿದೋದ್ದೇಶ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿದರು.<br /> ಡಿವೈಎಸ್ಪಿ ಚಿನ್ನಸ್ವಾಮಿ, ತಾ.ಪಂ. ಉಪಾಧ್ಯಕ್ಷೆ ಅಶ್ವತ್ಥಮ್ಮ, ತಾ.ಪಂ. ಸದಸ್ಯ ವೀರಯ್ಯ, ಗ್ರಾ.ಪಂ.ಸದಸ್ಯರಾದ ಎಚ್.ಬೈಲಪ್ಪ, ವಸಂತಲಕ್ಷ್ಮಿ ರಂಗನಾಥ್, ಔಟ್ರೀಚ್ ಸಂಸ್ಥೆಯ ಎನ್.ಎಸ್.ಜಯಣ್ಣ, ‘ಸಾಕ್ಷರ ಭಾರತ್’ದ ಸುದರ್ಶನ್ ವೇದಿಕೆಯಲ್ಲಿ ಇದ್ದರು. <br /> <br /> ವಿವಿಧ ಸ್ಪರ್ಧೆಗಳ ವಿಜೇತರಿಗೆ ಜಾಗೃತಿ ಸಂಸ್ಥೆಯ ಅಧ್ಯಕ್ಷ ಬಿ.ಆರ್. ಭಾಸ್ಕರ್ಪ್ರಸಾದ್ ಬಹುಮಾನವನ್ನು ವಿತರಿಸಿದರು.<br /> ತಾಲ್ಲೂಕಿನ ಎಲ್ಲ ಗ್ರಾ.ಪಂ. ಮಹಿಳಾ ಅಧ್ಯಕ್ಷರನ್ನು ಮತ್ತು ಪ್ರಮುಖ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಎಂ.ನಾಗರಾಜು ಅವರು ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>