<p><strong>ಬೆಂಗಳೂರು:</strong> ಜುಲೈ 27ಕ್ಕೆ ಕೊನೆಗೊಂಡಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ದುರ್ಬಲವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಕೊಪ್ಪಳ, ಧಾರವಾಡ ಮತ್ತು ಹಾವೇರಿ ಈ ಏಳು ಜಿಲ್ಲೆಗಳಲ್ಲಿ ಮಾಮೂಲು ಮಳೆಯಾಗಿದೆ.<br /> <br /> ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್, ಗುಲ್ಬರ್ಗ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಗದಗ ಮತ್ತು ಉತ್ತರ ಕನ್ನಡ ಈ ಹದಿಮೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಪ್ರಕಟಿಸಿದೆ.<br /> <br /> ಉಳಿದ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು, ಉಡುಪಿ, ರಾಯಚೂರು ಮತ್ತು ವಿಜಾಪುರ ಈ ಹತ್ತು ಜಿಲ್ಲೆಗಳಲ್ಲಿ ಅಲ್ಪ ಮಳೆಯಾಗಿದೆ. <br /> <br /> <strong>ತಾಲ್ಲೂಕುವಾರು ಮಳೆಯ ಹಂಚಿಕೆ:</strong> ರಾಜ್ಯದ 176 ತಾಲ್ಲೂಕುಗಳ ಪೈಕಿ 13 ತಾಲ್ಲೂಕುಗಳಲ್ಲಿ ಅಧಿಕ, 26 ತಾಲ್ಲೂಕುಗಳಲ್ಲಿ ಮಾಮೂಲು, 51 ತಾಲ್ಲೂಕುಗಳಲ್ಲಿ ಸಾಧಾರಣ ಮತ್ತು 65 ತಾಲ್ಲೂಕುಗಳಲ್ಲಿ ಅಲ್ಪ ಮಳೆಯಾಗಿದೆ. 21 ತಾಲ್ಲೂಕುಗಳಲ್ಲಿ ಮಳೆಯಾಗಿಲ್ಲ.</p>.<p>ರಾಜ್ಯದಲ್ಲಿ ಜೂನ್ನಿಂದ ಜುಲೈ ತಿಂಗಳಿನ ಮಳೆಯ ಪ್ರಮಾಣವನ್ನು ಪರಿಶೀಲಿಸಲಾಗಿ ಮಾಮೂಲು ಮಳೆಯು 446 ಮಿ.ಮೀ. ಆಗಬೇಕಾಗಿತ್ತು. ಆದರೆ, ವಾಸ್ತವವಾಗಿ 283 ಮಿ.ಮೀ. ಮಳೆಯಾಗಿದೆ. ಅಂದರೆ ಈ ತಿಂಗಳುಗಳಲ್ಲಿ ಸಾಧಾರಣ ಮಳೆಯಾಗಿದೆ.<br /> <br /> ಈ ಅವಧಿಯ ಮುಂಗಾರನ್ನು ಕಳೆದ ಸಾಲಿನ ಇದೇ ಅವಧಿಯ ಮುಂಗಾರಿಗೆ ಹೋಲಿಸಿದರೆ, ಕಳೆದ ಬಾರಿ ಮುಂಗಾರು ಉತ್ತಮವಾಗಿತ್ತು. ಏಕೆಂದರೆ, ಕಳೆದ ಸಾಲಿನಲ್ಲಿ 24 ತಾಲ್ಲೂಕುಗಳಲ್ಲಿ ಅಧಿಕ ಮಳೆಯಾಗಿದ್ದು, 88 ತಾಲ್ಲೂಕುಗಳಲ್ಲಿ ಮಾಮೂಲು, 58 ತಾಲ್ಲೂಕುಗಳಲ್ಲಿ ಸಾಧಾರಣ ಮತ್ತು 6 ತಾಲ್ಲೂಕುಗಳಲ್ಲಿ ಅಲ್ಪ ಮಳೆಯ ವರದಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜುಲೈ 27ಕ್ಕೆ ಕೊನೆಗೊಂಡಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ದುರ್ಬಲವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಕೊಪ್ಪಳ, ಧಾರವಾಡ ಮತ್ತು ಹಾವೇರಿ ಈ ಏಳು ಜಿಲ್ಲೆಗಳಲ್ಲಿ ಮಾಮೂಲು ಮಳೆಯಾಗಿದೆ.<br /> <br /> ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್, ಗುಲ್ಬರ್ಗ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಗದಗ ಮತ್ತು ಉತ್ತರ ಕನ್ನಡ ಈ ಹದಿಮೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಪ್ರಕಟಿಸಿದೆ.<br /> <br /> ಉಳಿದ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು, ಉಡುಪಿ, ರಾಯಚೂರು ಮತ್ತು ವಿಜಾಪುರ ಈ ಹತ್ತು ಜಿಲ್ಲೆಗಳಲ್ಲಿ ಅಲ್ಪ ಮಳೆಯಾಗಿದೆ. <br /> <br /> <strong>ತಾಲ್ಲೂಕುವಾರು ಮಳೆಯ ಹಂಚಿಕೆ:</strong> ರಾಜ್ಯದ 176 ತಾಲ್ಲೂಕುಗಳ ಪೈಕಿ 13 ತಾಲ್ಲೂಕುಗಳಲ್ಲಿ ಅಧಿಕ, 26 ತಾಲ್ಲೂಕುಗಳಲ್ಲಿ ಮಾಮೂಲು, 51 ತಾಲ್ಲೂಕುಗಳಲ್ಲಿ ಸಾಧಾರಣ ಮತ್ತು 65 ತಾಲ್ಲೂಕುಗಳಲ್ಲಿ ಅಲ್ಪ ಮಳೆಯಾಗಿದೆ. 21 ತಾಲ್ಲೂಕುಗಳಲ್ಲಿ ಮಳೆಯಾಗಿಲ್ಲ.</p>.<p>ರಾಜ್ಯದಲ್ಲಿ ಜೂನ್ನಿಂದ ಜುಲೈ ತಿಂಗಳಿನ ಮಳೆಯ ಪ್ರಮಾಣವನ್ನು ಪರಿಶೀಲಿಸಲಾಗಿ ಮಾಮೂಲು ಮಳೆಯು 446 ಮಿ.ಮೀ. ಆಗಬೇಕಾಗಿತ್ತು. ಆದರೆ, ವಾಸ್ತವವಾಗಿ 283 ಮಿ.ಮೀ. ಮಳೆಯಾಗಿದೆ. ಅಂದರೆ ಈ ತಿಂಗಳುಗಳಲ್ಲಿ ಸಾಧಾರಣ ಮಳೆಯಾಗಿದೆ.<br /> <br /> ಈ ಅವಧಿಯ ಮುಂಗಾರನ್ನು ಕಳೆದ ಸಾಲಿನ ಇದೇ ಅವಧಿಯ ಮುಂಗಾರಿಗೆ ಹೋಲಿಸಿದರೆ, ಕಳೆದ ಬಾರಿ ಮುಂಗಾರು ಉತ್ತಮವಾಗಿತ್ತು. ಏಕೆಂದರೆ, ಕಳೆದ ಸಾಲಿನಲ್ಲಿ 24 ತಾಲ್ಲೂಕುಗಳಲ್ಲಿ ಅಧಿಕ ಮಳೆಯಾಗಿದ್ದು, 88 ತಾಲ್ಲೂಕುಗಳಲ್ಲಿ ಮಾಮೂಲು, 58 ತಾಲ್ಲೂಕುಗಳಲ್ಲಿ ಸಾಧಾರಣ ಮತ್ತು 6 ತಾಲ್ಲೂಕುಗಳಲ್ಲಿ ಅಲ್ಪ ಮಳೆಯ ವರದಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>