<p><strong>ಲಿಂಗಸುಗೂರ (ಮಸ್ಕಿ): </strong>ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಸೂಪರಿಂಟೆಂಡೆಂಟ್ ಎಂಜಿನಿಯರ್ ಕಚೇರಿಯ ವ್ಯವಸ್ಥಾಪಕರಾಗಿ ನಿವೃತ್ತಿಯಾಗಿದ್ದ ಷಡಕ್ಷರಯ್ಯಸ್ವಾಮಿ ಸಂಗಯ್ಯಸ್ವಾಮಿ ಹಿರೇಮಠ ನಂದಾಪೂರ ಅವರು ಭಾನುವಾರ ಮಸ್ಕಿ ಪಟ್ಟಣದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ.<br /> <br /> ಷಡಕ್ಷರಯ್ಯ ಅವರು ತಮ್ಮ ಜೀವಿತಾವಧಿಯಲ್ಲಿ ಸದಾಕಾಲ ಅಂಗಿ ಜೇಬಿನಲ್ಲಿ ಪೇಪರ್ಮಿಂಟ್ ತುಂಬಿಕೊಂಡು ಹಾದಿಯುದ್ದಕ್ಕೂ ಸಂಚರಿಸುವ ಮಕ್ಕಳಿಗೆ ಹಂಚುತ್ತಿದ್ದರು. ಹೀಗಾಗಿ ಅವರನ್ನು ಪೇಪರ್ಮಿಂಟ್ ತಾತಾ ಎಂದೇ ಕರೆಯಲಾಗುತ್ತಿತ್ತು.<br /> <br /> 1992ರಲ್ಲಿ ನಿವೃತ್ತಿ ಹೊಂದಿದ್ದ ಷಡಕ್ಷರಯ್ಯ ಹಿರೇಮಠ ತಮ್ಮ ಸಾವಿನ ನಂತರ ದೇಹವನ್ನು ಯಾವುದಾದರೂ ಮೆಡಿಕಲ್ ಕಾಲೇಜಿಗೆ ದಾನ ಮಾಡುವಂತೆ ಕುಟುಂಬದವರನ್ನು ಕೇಳಿಕೊಂಡಿದ್ದರು. ಅವರ ಅಭಿಲಾಷೆಯಂತೆ ರಾಯಚೂರಿನ ರಿಮ್ಸ ಮೆಡಿಕಲ್ ಕಾಲೇಜಿಗೆ ಭಾನುವಾರ ಮೃತದೇಹವನ್ನು ದಾನವಾಗಿ ನೀಡಲಾಯಿತು.<br /> <br /> ಮೃತರ ಮಗ ಗವಿಸಿದ್ದೇಶ್ವರಸ್ವಾಮಿ ಮತ್ತು ಮಗಳು ಸುವರ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ತಮ್ಮ ತಂದೆ ಅಂತ್ಯಕಾಲದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ನೋವು ತಂದಿದೆ. ಆದರೆ ಅವರು ಮೆಡಿಕಲ್ ವಿದ್ಯಾರ್ಥಿ ಸಮೂಹಕ್ಕೆ ಅನುಕೂಲ ಆಗುವ ಉದ್ದೇಶದಿಂದ ತೆಗೆದುಕೊಂಡಿರುವ ನಿರ್ಣಯಕ್ಕೆ ಕುಟುಂಬ ಸಂಪೂರ್ಣ ಬೆಂಬಲ ನೀಡಿದ್ದು ಆಸ್ಪತ್ರೆಗೆ ಖುಷಿಯಿಂದಲೆ ದೇಹವನ್ನು ಒಪ್ಪಿಸುತ್ತಿರುವುದಾಗಿ ತಿಳಿಸಿದರು.<br /> <br /> ಈ ಸಂದರ್ಭದಲ್ಲಿ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಡಾ. ಶಿವಶರಣಪ್ಪ ಇತ್ಲಿ, ತ್ರಿಯಂಬಕೇಶ್ವರಯ್ಯ, ಲಾಲ ಅಹ್ಮದ ಸಾಬ ಅವರು, ಷಡಕ್ಷರಯ್ಯ ಹಿರೇಮಠ ತೆಗೆದುಕೊಂಡಿರುವ ನಿಲುವು ತಾಲ್ಲೂಕಿನ ಪ್ರತಿಯೋರ್ವ ವ್ಯಕ್ತಿಗೆ ಮಾರ್ಗದರ್ಶಕವಾಗಿದೆ. ತಾಲ್ಲೂಕಿನಲ್ಲಿಯೆ ಮೊಟ್ಟ ಮೊದಲ ಬಾರಿಗೆ ದೇಹದಾನ ಮಾಡಿದ ಕೀರ್ತಿ ಷಡಕ್ಷರಯ್ಯ ಕುಟುಂಬಕ್ಕೆ ಸಲ್ಲುತ್ತದೆ ಎಂದು ಬಣ್ಣಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರ (ಮಸ್ಕಿ): </strong>ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಸೂಪರಿಂಟೆಂಡೆಂಟ್ ಎಂಜಿನಿಯರ್ ಕಚೇರಿಯ ವ್ಯವಸ್ಥಾಪಕರಾಗಿ ನಿವೃತ್ತಿಯಾಗಿದ್ದ ಷಡಕ್ಷರಯ್ಯಸ್ವಾಮಿ ಸಂಗಯ್ಯಸ್ವಾಮಿ ಹಿರೇಮಠ ನಂದಾಪೂರ ಅವರು ಭಾನುವಾರ ಮಸ್ಕಿ ಪಟ್ಟಣದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ.<br /> <br /> ಷಡಕ್ಷರಯ್ಯ ಅವರು ತಮ್ಮ ಜೀವಿತಾವಧಿಯಲ್ಲಿ ಸದಾಕಾಲ ಅಂಗಿ ಜೇಬಿನಲ್ಲಿ ಪೇಪರ್ಮಿಂಟ್ ತುಂಬಿಕೊಂಡು ಹಾದಿಯುದ್ದಕ್ಕೂ ಸಂಚರಿಸುವ ಮಕ್ಕಳಿಗೆ ಹಂಚುತ್ತಿದ್ದರು. ಹೀಗಾಗಿ ಅವರನ್ನು ಪೇಪರ್ಮಿಂಟ್ ತಾತಾ ಎಂದೇ ಕರೆಯಲಾಗುತ್ತಿತ್ತು.<br /> <br /> 1992ರಲ್ಲಿ ನಿವೃತ್ತಿ ಹೊಂದಿದ್ದ ಷಡಕ್ಷರಯ್ಯ ಹಿರೇಮಠ ತಮ್ಮ ಸಾವಿನ ನಂತರ ದೇಹವನ್ನು ಯಾವುದಾದರೂ ಮೆಡಿಕಲ್ ಕಾಲೇಜಿಗೆ ದಾನ ಮಾಡುವಂತೆ ಕುಟುಂಬದವರನ್ನು ಕೇಳಿಕೊಂಡಿದ್ದರು. ಅವರ ಅಭಿಲಾಷೆಯಂತೆ ರಾಯಚೂರಿನ ರಿಮ್ಸ ಮೆಡಿಕಲ್ ಕಾಲೇಜಿಗೆ ಭಾನುವಾರ ಮೃತದೇಹವನ್ನು ದಾನವಾಗಿ ನೀಡಲಾಯಿತು.<br /> <br /> ಮೃತರ ಮಗ ಗವಿಸಿದ್ದೇಶ್ವರಸ್ವಾಮಿ ಮತ್ತು ಮಗಳು ಸುವರ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ತಮ್ಮ ತಂದೆ ಅಂತ್ಯಕಾಲದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ನೋವು ತಂದಿದೆ. ಆದರೆ ಅವರು ಮೆಡಿಕಲ್ ವಿದ್ಯಾರ್ಥಿ ಸಮೂಹಕ್ಕೆ ಅನುಕೂಲ ಆಗುವ ಉದ್ದೇಶದಿಂದ ತೆಗೆದುಕೊಂಡಿರುವ ನಿರ್ಣಯಕ್ಕೆ ಕುಟುಂಬ ಸಂಪೂರ್ಣ ಬೆಂಬಲ ನೀಡಿದ್ದು ಆಸ್ಪತ್ರೆಗೆ ಖುಷಿಯಿಂದಲೆ ದೇಹವನ್ನು ಒಪ್ಪಿಸುತ್ತಿರುವುದಾಗಿ ತಿಳಿಸಿದರು.<br /> <br /> ಈ ಸಂದರ್ಭದಲ್ಲಿ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಡಾ. ಶಿವಶರಣಪ್ಪ ಇತ್ಲಿ, ತ್ರಿಯಂಬಕೇಶ್ವರಯ್ಯ, ಲಾಲ ಅಹ್ಮದ ಸಾಬ ಅವರು, ಷಡಕ್ಷರಯ್ಯ ಹಿರೇಮಠ ತೆಗೆದುಕೊಂಡಿರುವ ನಿಲುವು ತಾಲ್ಲೂಕಿನ ಪ್ರತಿಯೋರ್ವ ವ್ಯಕ್ತಿಗೆ ಮಾರ್ಗದರ್ಶಕವಾಗಿದೆ. ತಾಲ್ಲೂಕಿನಲ್ಲಿಯೆ ಮೊಟ್ಟ ಮೊದಲ ಬಾರಿಗೆ ದೇಹದಾನ ಮಾಡಿದ ಕೀರ್ತಿ ಷಡಕ್ಷರಯ್ಯ ಕುಟುಂಬಕ್ಕೆ ಸಲ್ಲುತ್ತದೆ ಎಂದು ಬಣ್ಣಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>