<p><strong>ತುಮಕೂರು:</strong> ರಾಜ್ಯ ವಿಧಾನ ಮಂಡಲದ ಅಧಿವೇಶನ ಇದೇ 20 ರಂದು ಪ್ರಾರಂಭವಾಗಲಿದೆ. ಮರುದಿನ 21ರಂದು ಬಜೆಟ್ ಮಂಡನೆಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.<br /> <br /> ಸದಾನಂದ ಗೌಡರು ತಮ್ಮ 59ನೇ ಹುಟ್ಟುಹಬ್ಬದ ಪ್ರಯುಕ್ತ ಸಿದ್ದಗಂಗಾ ಮಠದ ಅಧ್ಯಕ್ಷ ಡಾ.ಶಿವಕುಮಾರಸ್ವಾಮೀಜಿ ಅವರನ್ನು ಭಾನುವಾರ ಭೇಟಿ ಮಾಡಿ ಆಶೀರ್ವಾದ ಪಡೆದರು.<br /> <br /> `ಅಧಿಕಾರ ಶಾಶ್ವತ ಅಲ್ಲ. ಜನಪರ ಕಾರ್ಯಕ್ರಮಗಳೇ ಶಾಶ್ವತ. ಅಧಿಕಾರದಲ್ಲಿದ್ದಾಗ ನಾವು ಹೇಗೆ ನಡೆದುಕೊಳ್ಳುತ್ತೇವೆ, ಎಂಥ ಕಾರ್ಯಕ್ರಮಗಳನ್ನು ರೂಪಿಸಿಕೊಡುತ್ತೇವೆ ಎಂಬುದನ್ನು ಮಾತ್ರ ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ~ ಎಂದು ಸ್ವಾಮೀಜಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಭಾವುಕರಾಗಿ ನುಡಿದರು.<br /> <br /> ಮುಖ್ಯಮಂತ್ರಿಯ ಯಾವ ಮಾತಿಗೂ ಸ್ವಾಮೀಜಿ ಮೌನ ಮುರಿಯಲಿಲ್ಲ. ಹೊರಡಲು ಎದ್ದು ನಿಂತ ಸಂದರ್ಭದಲ್ಲಿ `ಪ್ರಸಾದ ತಗೊಳ್ಳಿ~ ಎಂದಷ್ಟೇ ಹೇಳಿ ಮತ್ತೆ ಮೌನಕ್ಕೆ ಶರಣಾದರು.<br /> <br /> ಮಠದ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಿವಿಎಸ್, ಬಜೆಟ್ ಸಿದ್ಧತೆ ಮುಗಿದಿದೆ. ಪ್ರತಿಗಳು ಮುದ್ರಣಕ್ಕೆ ಹೋಗಿವೆ. ಉತ್ತಮ ಬಜೆಟ್ ಮಂಡಿಸಲು ಶಕ್ತಿ ನೀಡುವಂತೆ ದೇವರನ್ನು ಮತ್ತು ಗುರುಗಳನ್ನು ಬೇಡಲು ಮಠಕ್ಕೆ ಬಂದಿದ್ದೆ ಎಂದು ನುಡಿದರು.<br /> <br /> ಯಡಿಯೂರಪ್ಪ ಅವರ ಈಚಿನ ವರ್ತನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಡಿವಿಎಸ್ ನಿರಾಕರಿಸಿದರು. ಬೆಂಬಲಿಗರು ತಮ್ಮ ನಾಯಕನನ್ನು ಕರೆದು ಸನ್ಮಾನಿಸುವುದು ರಾಜಕೀಯದಲ್ಲಿ ಸಾಮಾನ್ಯ ಸಂಗತಿ. ಇದನ್ನು ಇನ್ಯಾವುದಕ್ಕೋ ಹೋಲಿಸಿ ದೊಡ್ಡ ವಿಷಯ ಮಾಡುವುದು ಬೇಡ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ರಾಜ್ಯ ವಿಧಾನ ಮಂಡಲದ ಅಧಿವೇಶನ ಇದೇ 20 ರಂದು ಪ್ರಾರಂಭವಾಗಲಿದೆ. ಮರುದಿನ 21ರಂದು ಬಜೆಟ್ ಮಂಡನೆಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.<br /> <br /> ಸದಾನಂದ ಗೌಡರು ತಮ್ಮ 59ನೇ ಹುಟ್ಟುಹಬ್ಬದ ಪ್ರಯುಕ್ತ ಸಿದ್ದಗಂಗಾ ಮಠದ ಅಧ್ಯಕ್ಷ ಡಾ.ಶಿವಕುಮಾರಸ್ವಾಮೀಜಿ ಅವರನ್ನು ಭಾನುವಾರ ಭೇಟಿ ಮಾಡಿ ಆಶೀರ್ವಾದ ಪಡೆದರು.<br /> <br /> `ಅಧಿಕಾರ ಶಾಶ್ವತ ಅಲ್ಲ. ಜನಪರ ಕಾರ್ಯಕ್ರಮಗಳೇ ಶಾಶ್ವತ. ಅಧಿಕಾರದಲ್ಲಿದ್ದಾಗ ನಾವು ಹೇಗೆ ನಡೆದುಕೊಳ್ಳುತ್ತೇವೆ, ಎಂಥ ಕಾರ್ಯಕ್ರಮಗಳನ್ನು ರೂಪಿಸಿಕೊಡುತ್ತೇವೆ ಎಂಬುದನ್ನು ಮಾತ್ರ ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ~ ಎಂದು ಸ್ವಾಮೀಜಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಭಾವುಕರಾಗಿ ನುಡಿದರು.<br /> <br /> ಮುಖ್ಯಮಂತ್ರಿಯ ಯಾವ ಮಾತಿಗೂ ಸ್ವಾಮೀಜಿ ಮೌನ ಮುರಿಯಲಿಲ್ಲ. ಹೊರಡಲು ಎದ್ದು ನಿಂತ ಸಂದರ್ಭದಲ್ಲಿ `ಪ್ರಸಾದ ತಗೊಳ್ಳಿ~ ಎಂದಷ್ಟೇ ಹೇಳಿ ಮತ್ತೆ ಮೌನಕ್ಕೆ ಶರಣಾದರು.<br /> <br /> ಮಠದ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಿವಿಎಸ್, ಬಜೆಟ್ ಸಿದ್ಧತೆ ಮುಗಿದಿದೆ. ಪ್ರತಿಗಳು ಮುದ್ರಣಕ್ಕೆ ಹೋಗಿವೆ. ಉತ್ತಮ ಬಜೆಟ್ ಮಂಡಿಸಲು ಶಕ್ತಿ ನೀಡುವಂತೆ ದೇವರನ್ನು ಮತ್ತು ಗುರುಗಳನ್ನು ಬೇಡಲು ಮಠಕ್ಕೆ ಬಂದಿದ್ದೆ ಎಂದು ನುಡಿದರು.<br /> <br /> ಯಡಿಯೂರಪ್ಪ ಅವರ ಈಚಿನ ವರ್ತನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಡಿವಿಎಸ್ ನಿರಾಕರಿಸಿದರು. ಬೆಂಬಲಿಗರು ತಮ್ಮ ನಾಯಕನನ್ನು ಕರೆದು ಸನ್ಮಾನಿಸುವುದು ರಾಜಕೀಯದಲ್ಲಿ ಸಾಮಾನ್ಯ ಸಂಗತಿ. ಇದನ್ನು ಇನ್ಯಾವುದಕ್ಕೋ ಹೋಲಿಸಿ ದೊಡ್ಡ ವಿಷಯ ಮಾಡುವುದು ಬೇಡ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>