<p><strong>ಬೆಂಗಳೂರು:</strong> ಕನಿಷ್ಠ ವೆಚ್ಚದಲ್ಲಿ ವ್ಯಾಪಕ ಪ್ರಚಾರ ಪಡೆಯುವ ಉದ್ದೇಶದಿಂದ ಹೊಸ ಜಾಹೀರಾತು ನೀತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಹೊಸ ನೀತಿ ಪ್ರಕಾರದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ತಮ್ಮ ಜಾಹೀರಾತುಗಳನ್ನು ಸರ್ಕಾರವು ನಿಗದಿಪಡಿಸುವ ರಿಯಾಯಿತಿ ದರದಲ್ಲಿ ವಾರ್ತಾ ಇಲಾಖೆಯ ಮುಖಾಂತರವೇ ಬಿಡುಗಡೆ ಮಾಡಬೇಕು.<br /> <br /> ವಾರ್ತಾ ಇಲಾಖೆಯ ಆಡಳಿತ ಮತ್ತು ಮಾಹಿತಿ ಪ್ರಸರಣವನ್ನು ಕರ್ನಾಟಕ ಮಾಹಿತಿ ಜಾಲದ ಅಡಿಯಲ್ಲಿ ಸಂಪೂರ್ಣ ಗಣಕೀಕರಿಸಲಾಗುವುದು. ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಆಧುನಿಕ ಮಾಧ್ಯಮದ ವೇಗದೊಂದಿಗೆ ಹೊಂದಿಕೊಳ್ಳಲು ಈ ಮಾಹಿತಿ ಜಾಲವು ನೆರವಾಗಲಿದೆ.<br /> <br /> *ಬೆಂಗಳೂರು ನಗರದ ಶ್ರಿ ಕಂಠೀರವ ಸ್ಟುಡಿಯೊ ಆವರಣದಲ್ಲಿ ನಿರ್ಮಿಸುತ್ತಿರುವ ದಿ. ಡಾ ರಾಜ್ಕುಮಾರ್ ಸ್ಮಾರಕದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಲೋಕಾರ್ಪಣೆ<br /> *ವಾರ್ಷಿಕ 75 ಗುಣಾತ್ಮಕ ಕನ್ನಡ ಚಲನಚಿತ್ರಗಳಿಗೆ ನೀಡುತ್ತಿರುವ ಸಹಾಯಧನ 100 ಚಲನಚಿತ್ರಗಳಿಗೆ ವಿಸ್ತರಣೆ<br /> *ದಿ. ಡಾ. ವಿಷ್ಣುವರ್ಧನ ಸ್ಮಾರಕ ನಿರ್ಮಾಣಕ್ಕೆ 2 ಎಕರೆ ಜಮೀನು ಮಂಜೂರು ಮಾಡಿದ್ದು, ಶೀಘ್ರ ಕಾಮಗಾರಿ ಆರಂಭ<br /> *ಕನ್ನಡ ವಾಕ್ಚಲನಚಿತ್ರವು 75 ವರ್ಷ ಪೂರೈಸಿರುವ ನೆನಪಿಗಾಗಿ ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ ಅಮೃತ ಮಹೋತ್ಸವ ಭವನದ ಬಾಕಿ ಕಾಮಗಾರಿಗಳಿಗೆ ರೂ 2.50 ಕೋಟಿ ಅನುದಾನ<br /> *ವಾರ್ತಾ ಇಲಾಖೆಗೆ ರೂ 88 ಕೋಟಿ ಅನುದಾನ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕನಿಷ್ಠ ವೆಚ್ಚದಲ್ಲಿ ವ್ಯಾಪಕ ಪ್ರಚಾರ ಪಡೆಯುವ ಉದ್ದೇಶದಿಂದ ಹೊಸ ಜಾಹೀರಾತು ನೀತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಹೊಸ ನೀತಿ ಪ್ರಕಾರದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ತಮ್ಮ ಜಾಹೀರಾತುಗಳನ್ನು ಸರ್ಕಾರವು ನಿಗದಿಪಡಿಸುವ ರಿಯಾಯಿತಿ ದರದಲ್ಲಿ ವಾರ್ತಾ ಇಲಾಖೆಯ ಮುಖಾಂತರವೇ ಬಿಡುಗಡೆ ಮಾಡಬೇಕು.<br /> <br /> ವಾರ್ತಾ ಇಲಾಖೆಯ ಆಡಳಿತ ಮತ್ತು ಮಾಹಿತಿ ಪ್ರಸರಣವನ್ನು ಕರ್ನಾಟಕ ಮಾಹಿತಿ ಜಾಲದ ಅಡಿಯಲ್ಲಿ ಸಂಪೂರ್ಣ ಗಣಕೀಕರಿಸಲಾಗುವುದು. ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಆಧುನಿಕ ಮಾಧ್ಯಮದ ವೇಗದೊಂದಿಗೆ ಹೊಂದಿಕೊಳ್ಳಲು ಈ ಮಾಹಿತಿ ಜಾಲವು ನೆರವಾಗಲಿದೆ.<br /> <br /> *ಬೆಂಗಳೂರು ನಗರದ ಶ್ರಿ ಕಂಠೀರವ ಸ್ಟುಡಿಯೊ ಆವರಣದಲ್ಲಿ ನಿರ್ಮಿಸುತ್ತಿರುವ ದಿ. ಡಾ ರಾಜ್ಕುಮಾರ್ ಸ್ಮಾರಕದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಲೋಕಾರ್ಪಣೆ<br /> *ವಾರ್ಷಿಕ 75 ಗುಣಾತ್ಮಕ ಕನ್ನಡ ಚಲನಚಿತ್ರಗಳಿಗೆ ನೀಡುತ್ತಿರುವ ಸಹಾಯಧನ 100 ಚಲನಚಿತ್ರಗಳಿಗೆ ವಿಸ್ತರಣೆ<br /> *ದಿ. ಡಾ. ವಿಷ್ಣುವರ್ಧನ ಸ್ಮಾರಕ ನಿರ್ಮಾಣಕ್ಕೆ 2 ಎಕರೆ ಜಮೀನು ಮಂಜೂರು ಮಾಡಿದ್ದು, ಶೀಘ್ರ ಕಾಮಗಾರಿ ಆರಂಭ<br /> *ಕನ್ನಡ ವಾಕ್ಚಲನಚಿತ್ರವು 75 ವರ್ಷ ಪೂರೈಸಿರುವ ನೆನಪಿಗಾಗಿ ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ ಅಮೃತ ಮಹೋತ್ಸವ ಭವನದ ಬಾಕಿ ಕಾಮಗಾರಿಗಳಿಗೆ ರೂ 2.50 ಕೋಟಿ ಅನುದಾನ<br /> *ವಾರ್ತಾ ಇಲಾಖೆಗೆ ರೂ 88 ಕೋಟಿ ಅನುದಾನ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>