<p><strong>ಬೆಂಗಳೂರು</strong>: ಶಿಕ್ಷಣ, ಉದ್ಯೋಗ, ವ್ಯಾಪಾರ, ಟೆಕ್ ಕ್ಷೇತ್ರ ಎಂದು ವಿದೇಶಗಳಲ್ಲಿ ಲಕ್ಷಾಂತರ ಕನ್ನಡಿಗರು ಬದುಕು ಕಟ್ಟಿಕೊಂಡು ಅಲ್ಲಿಯೇ ನೆಲೆ ನಿಂತು ಕರ್ನಾಟಕದ ತಾಕತ್ತನ್ನು ಜಗತ್ತಿನೆದರು ತೆರೆದಿಡುತ್ತಿದ್ದಾರೆ. ಆ ಮೂಲಕ ಕನ್ನಡತನದ ಕಾಯಕ, ದಾಸೋಹ, ಸಹಬಾಳ್ವೆ, ಶಾಂತಿಯ ಮಂತ್ರಗಳನ್ನು ಹೊರದೇಶಗಳಲ್ಲೂ ಪಠಿಸುತ್ತಿದ್ದಾರೆ.</p><p>ಯುರೋಪ್, ಅಮೆರಿಕ, ಮಧ್ಯಪ್ರಾಚ್ಯ, ಆಫ್ರಿಕಾ ಸೇರಿ ಜಗತ್ತಿನ ಅನೇಕ ದೇಶಗಳಲ್ಲಿ ಲಕ್ಷಾಂತರ ಕನ್ನಡಿಗರು ಸಕ್ರಿಯರಾಗಿದ್ದಾರೆ. ಕೇವಲ ತಮ್ಮ ಪಾಡಿಗೆ ತಾವಿಲ್ಲ. ಬದಲಿಗೆ ಕನ್ನಡ ಎಂಬ ಅದ್ಭುತ ಶಕ್ತಿಯಿಂದ ಒಬ್ಬರಿಗೊಬ್ಬರು ಬೆಸೆದುಕೊಂಡಿದ್ದಾರೆ. ಸಂಘ–ಸಂಸ್ಥೆಗಳನ್ನು ಕಟ್ಟಿಕೊಂಡು ‘ಸಂಘ ಜೀವನ’ದ ಮಹತ್ವವನ್ನು ಸಾರುತ್ತಿದ್ದಾರೆ.</p><p>ಮಧ್ಯಪ್ರಾಚ್ಯದಲ್ಲಂತೂ ‘ಕನ್ನಡಿಗರ ಹವಾ’ ಸ್ವಲ್ಪ ಜಾಸ್ತಿನೇ ಎನ್ನಬಹುದು. ಯುಎಇ, ಕತಾರ್, ಕುವೈತ್, ಒಮಾನ್, ಬಹರೈನ್, ಸೌದಿ ಅರೇಬಿಯಾ ಮುಂತಾದ ದೇಶಗಳಲ್ಲಿ ಹೊರನಾಡ ಕನ್ನಡಿಗರು ಕನ್ನಡ ಕರ್ನಾಟಕವನ್ನು, ತಮ್ಮವರನ್ನು ಮರೆತಿಲ್ಲ. ತಮ್ಮ ಕೆಲಸಗಳ ಒತ್ತಡದ ನಡುವೆಯೂ ಕನ್ನಡಿಗ, ಕರ್ನಾಟಕಕ್ಕೆ ಕೆಲಸ ಮಾಡುತ್ತಿದ್ದಾರೆ.</p><p>ಹೀಗೆ, ಒಮಾನ್ ದೇಶದಲ್ಲಿಯೂ ಸುಮಾರು 5 ಸಾವಿರ ಕನ್ನಡಿಗರು ಸಕ್ರಿಯರಾಗಿದ್ದಾರೆ. ಉದ್ಯೋಗ–ವ್ಯಾಪಾರ, ಶಿಕ್ಷಣಕ್ಕಾಗಿ ಸುಂದರ ದೇಶ ಒಮಾನ್ಗೆ ವಲಸೆ ಹೋಗಿರುವ ಅವರು ನಾವು ಕನ್ನಡಿಗರು ಎಂಬ ಆಲದ ಮರದ ಅಡಿ ಸಂಘಟಿತರಾಗಿದ್ದಾರೆ. ‘ಮಸ್ಕತ್ ಚಾಲುಕ್ಯ ಕೂಟ’ ಎಂಬ ಹೆಸರಿನಲ್ಲಿ ಒಮಾನ್ ಕನ್ನಡಿಗರು ಒಂದಾಗಿ ಹೊರನಾಡ ಕನ್ನಡಿಗರಿಗೆ ಮಾದರಿಯಾಗಿದ್ದಾರೆ.</p>.<p><strong>ಮಸ್ಕತ್ ಚಾಲುಕ್ಯ ಕೂಟ</strong></p><p>ಒಮಾನ್ನ ದೇಶದ ರಾಜಧಾನಿ ಮಸ್ಕತ್ನಲ್ಲಿ ಚಾಲುಕ್ಯ ಕೂಟ ಸಕ್ರಿಯವಾಗಿದೆ. ಇದರ ವಿಶೇಷ ಎಂದರೆ ಮರೆಯಾಗುತ್ತಿರುವ ಉತ್ತರ ಕರ್ನಾಟಕದ ಸಂಸ್ಕೃತಿ, ಆಹಾರ, ಆಚಾರ–ವಿಚಾರಗಳನ್ನು ಹೊರನಾಡ ಕನ್ನಡಿಗರಿಗೆ, ಹೊರದೇಶದವರಿಗೆ ದಾಟಿಸಲು ಶ್ರಮಿಸುತ್ತಿದ್ದೆ.</p><p>ಹುಬ್ಬಳ್ಳಿ ಮೂಲದವರಾದ 50 ವರ್ಷದ ಮಹೇಶ್ ಪುರೋಹಿತ್ ಹಾಗೂ ಅವರ ಸ್ನೇಹಿತರು ಚಾಲುಕ್ಯ ಕೂಟ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಸದ್ಯ ಮಹೇಶ್ ಪುರೋಹಿತ್ ಅವರು ಎಂಎನ್ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ತಮ್ಮ ಕುಟುಂಬದ ಜೊತೆ ಎರಡು ದಶಕಗಳಿಂದ ಅಲ್ಲಿಯೇ ನೆಲೆ ನಿಂತಿದ್ದಾರೆ. ಅಷ್ಟೇ ಅಲ್ಲದೇ ಮಧ್ಯಪ್ರಾಚ್ಯ ದೇಶಗಳಲ್ಲಿ ಕನ್ನಡಿಗರ ಸಂಘಟನೆಗೆ ಶ್ರಮಿಸುತ್ತಿದ್ದಾರೆ.</p><p>2020 ರ ಸಮಯದಲ್ಲಿ ಚಾಲುಕ್ಯ ಕೂಟವನ್ನು ವಿಶೇಷವಾಗಿ ಒಮಾನ್ನ ಉತ್ತರ ಕರ್ನಾಟಕ ಭಾಗದ ಕನ್ನಡಿಗರು ಹುಟ್ಟಿಹಾಕಿದರು. ಆರಂಭದಲ್ಲಿ ಕೆಲವು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಿದರು. ಕೋವಿಡ್ ಕಾರಣದಿಂದ ಶುರುವಾತಿನಲ್ಲಿ ಹೆಚ್ಚು ಕಾರ್ಯಕ್ರಮಗಳು ನಡೆಯಲಿಲ್ಲ.</p><p>2023 ರಿಂದ ಚಾಲುಕ್ಯ ಕೂಟ ಬಹಳಷ್ಟು ಸಕ್ರಿಯವಾಯಿತು. ಪ್ರತಿ ವರ್ಷ ಸಂಕ್ರಾಂತಿ ಸಂದರ್ಭದಲ್ಲಿ ಜನಪದ ಹಬ್ಬ ಅಥವಾ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ.</p><p>ಈ ಜನಪದ ಹಬ್ಬದ ಕಾರ್ಯಕ್ರಮವೇ ಸಮಗ್ರ ಉತ್ತರ ಕರ್ನಾಟಕದ ಸಾಂಸ್ಕೃತಿಕ ವೈಭವ, ಉಡುಗೆ, ತೊಡುಗೆ ಆಹಾರ, ಆಚಾರ ವಿಚಾರಗಳನ್ನು ಒಮಾನ್ನಲ್ಲಿರುವ ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕದವರ ಎದುರು ತೆರೆದಿಡುತ್ತದೆ. ಚಾಲುಕ್ಯ ಕೂಟದ ವಿಶೇಷವೇ ಇದು.</p>.<p><strong>ಸಂಕ್ರಾಂತಿ ಜನಪದ ಹಬ್ಬ 'ಜನಪದ ಜಾತ್ರೆ -2026'</strong></p><p>ಸಂಕ್ರಾಂತಿ ಜನಪದ ಹಬ್ಬಕ್ಕೆ ಚಾಲುಕ್ಯ ಕೂಟದವರು ಸುಮಾರು ಒಂದೆರಡು ತಿಂಗಳು ಮೊದಲೇ ಶ್ರಮಿಸುತ್ತಾರೆ. ಕನ್ನಡಿಗ ಕುಟುಂಬಗಳನ್ನು ಸಂಪರ್ಕಿಸಿ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಿ ಸಿದ್ಧಪಡಿಸುತ್ತಾರೆ. ಕಾರ್ಯಕ್ರಮವು ಸಂಪೂರ್ಣ ಉತ್ತರ ಕರ್ನಾಟಕಮಯವಾಗಿರುತ್ತದೆ. ಹಾಗಂತ ಉತ್ತರ ಕರ್ನಾಟಕದವರಷ್ಟೇ ಭಾಗವಹಿಸುವುದಿಲ್ಲ. ಕಾರ್ಯಕ್ರಮದ ಥೀಮ್ ಮಾತ್ರ ಉಕ!</p><p>ಕಾರ್ಯಕ್ರಮಕ್ಕೆ ಊಟೋಪಚಾರಕ್ಕೆ ಬೇಕಾದ ಉತ್ತರ ಕರ್ನಾಟಕದ ಅಡುಗೆ ತಿನಿಸುಗಳನ್ನು ಕನ್ನಡತಿಯರೇ ತಯಾರು ಮಾಡುತ್ತಾರೆ. ಇದಕ್ಕಾಗಿ ‘ಚಿಗವ್ವ, ದೊಡ್ಡವ್ವ’ಗಳು ಒಂದು ವಾರ ‘ಕಮ್ಯುನಿಟಿ ಕಿಚನ್’ ಪರಿಕಲ್ಪನೆ ಅಡಿ ಆಹಾರ ಸಿದ್ದಪಡಿಸುತ್ತಾರೆ. ಉತ್ತರ ಕರ್ನಾಟಕದ ಪ್ರತಿಯೊಂದು ತಿಂಡಿ ತಿನಿಸುಗಳನ್ನು ತಯಾರಿಸಿ ಉಣಬಡಿಸುತ್ತಾರೆ.</p><p>ಊಟ ಅಷ್ಟೇ ಅಲ್ಲದೇ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದ ಕಲಾವಿದರನ್ನು ಕರೆಸಲಾಗುತ್ತದೆ. ಕಲಾವಿದರಿಂದ ಒಮಾನ್ ಕನ್ನಡಿಗರು ತಾವು ತಮ್ಮೂರಲ್ಲಿದ್ದೇವೆನೋ ಎಂಬಂತೆ ಸಂಭ್ರಮಿಸುತ್ತಾರೆ.</p><p>ಚಾಲುಕ್ಯ ಕೂಟದ ಈ ಕಾರ್ಯಕ್ರಮದಲ್ಲಿ ವಿಶೇಷ ಎಂದರೆ ಸಿನಿಮಾ ಹಾಡು ನೃತ್ಯಗಳ ಬದಲಿಗೆ ಸಂಪೂರ್ಣವಾಗಿ ಉತ್ತರ ಕರ್ನಾಟಕದ ಜಾನಪದ ಹಾಡು, ನೃತ್ಯಗಳಿಗೇ ಆದ್ಯತೆ ನೀಡಲಾಗುತ್ತದೆ. ಕೇವಲ ಇದು ಕಲಾವಿದರ ಕಾರ್ಯಕ್ರಮವಾಗಿರುವುದಿಲ್ಲ. ಉತ್ತರ ಕರ್ನಾಟಕದ ವೇಷಭೂಷಣಗಳು, ಹಾಡು, ಹರಟೆ–ತಮಾಷೆಯನ್ನು ಪ್ರತಿಯೊಬ್ಬರು ಸಂಭ್ರಮಿಸುತ್ತಾರೆ. ವಿಶೇಷ ಎಂದರೆ ಈ ವರ್ಷದ ಹಬ್ಬದಲ್ಲಿ ಮಹಿಳಾಮಣಿಗಳೇ ತಾವೇ 40 ಕೆ.ಜೆಯಷ್ಟು ಉತ್ತರ ಕರ್ನಾಟಕದ ಪುರಾತನ ಸಿಹಿ ಪದಾರ್ಥ ‘ಮಾದ್ಲಿ’ ತಯಾರಿಸಿದ್ದನ್ನು ನೆನಪಿಸಿಕೊಂಡು ನಗುತ್ತಾರೆ ಕೂಟದ ಸದಸ್ಯರು.</p><p>ಅಷ್ಟೇ ಅಲ್ಲದೇ ಮರೆತು ಹೋಗುತ್ತಿರುವ ಉತ್ತರ ಕರ್ನಾಟಕದ ಮನೆ ಬಳಕೆಯ ಸಾಮನು, ಪರಿಕರಗಳನ್ನು ಕಾರ್ಯಕ್ರಮಕ್ಕೆ ತರಿಸಿ ಅವುಗಳನ್ನು ತಮ್ಮ ಸದಸ್ಯರಿಗೆ ತೋರಿಸಿ ನೀಡಲಾಗುತ್ತದೆ. ಇದರಿಂದ ಕಾರ್ಯಕ್ರಮಕ್ಕೆ ಬಂದವರು ಫುಲ್ ಖುಷ್.</p>.<p><strong>ಸಹಾಯ ಸಹಕಾರ</strong></p><p>ಚಾಲುಕ್ಯ ಕೂಟದಲ್ಲಿ ಸುಮಾರು 300 ಸದಸ್ಯರು ಸಕ್ರಿಯರಾಗಿದ್ದಾರೆ. ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಷ್ಟು ದೊಡ್ಡ ಕಾರ್ಯಕ್ರಮ ಮಾಡದಿದ್ದರೂ ಕಾಲಕಾಲಕ್ಕೆ ಸಂಘಟಿತರಾಗುತ್ತಾರೆ.</p><p>ಬೇರೆ ಬೇರೆ ಕಾರಣಗಳಿಗಾಗಿ ಒಮಾನ್ಗೆ ಬರುವ ಕರ್ನಾಟಕದ ಗಣ್ಯರು, ಸಾಧಕರನ್ನು ಗುರುತಿಸಿ ಅವರನ್ನು ಚಾಲುಕ್ಯ ಕೂಟಕ್ಕೆ ಕರೆಯಿಸಿ ಸನ್ಮಾನಿಸಲಾಗುತ್ತಿದೆ.</p><p>ಒಮಾನ್ಗೆ ಬಂದಾಗ ಆಕಸ್ಮಿಕವಾಗಿ ತೊಂದರೆ ಅನುಭವಿಸುವ ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕ ಕನ್ನಡಿಗರಿಗೆ ಸಹಾಯ ಹಸ್ತ ಚಾಚಲು ಯಾವಾಗಲು ಸಿದ್ಧವಾಗಿರುತ್ತದೆ.</p>.<p><strong>ಹಲವು ಕಾರ್ಯಕ್ರಮಗಳ ಯೋಜನೆಗೆ ಸಿದ್ಧತೆ</strong></p><p>ಒಮಾನ್ ಮಸ್ಕತ್ನಲ್ಲಿ ಸದ್ಯ ವರ್ಷಕ್ಕೆ ಒಂದು ದೊಡ್ಡ ಕಾರ್ಯಕ್ರಮ ಮಾಡಲಾಗುತ್ತಿದೆ. ಬರುವ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡಲು ಶ್ರಮಿಸಲಾಗುತ್ತದೆ. ಹೊರದೇಶಗಳಲ್ಲಿ ಸಂಘಟನೆ ಅಷ್ಟೊಂದು ಸುಲಭ ಅಲ್ಲ ಎನ್ನುತ್ತಾರೆ ಚಾಲುಕ್ಯ ಕೂಟದ ನೇತೃತ್ವ ವಹಿಸಿರುವ ಮಹೇಶ್ ಪುರೋಹಿತ್ ಅವರು.</p><p>ನಮ್ಮದಲ್ಲದ ಊರು, ದೇಶದಲ್ಲಿ ಹೋಗಿ ಬದುಕುವುದು ಯಾರಿಗಾದರೂ ಕಷ್ಟ. ಈ ಕಷ್ಟಗಳು ಕಡಿಮೆ ಆಗಬೇಕಾದರೆ ಸಾಂಘಿಕ ಜೀವನ, ಒಗ್ಗಟ್ಟು ಮುಖ್ಯವಾಗುತ್ತದೆ. ಇದನ್ನು ನಾವು ಒಮಾನ್ನಲ್ಲಿ ಸಾಧಿಸುತ್ತಿದ್ದೇವೆ. ಬರುವ ದಿನಗಳಲ್ಲಿ ಇದನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿದ್ದೇವೆ. ನಮ್ಮೆಲ್ಲ ಸ್ನೇಹಿತರು ಇದಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದಾರೆ ಎನ್ನುವುದು ಮಹೇಶ್ ಅವರ ಮನದಾಳದ ಮಾತುಗಳು.</p><p><a href="https://www.youtube.com/@chalukyakootamuscat">Chalukya Koota Muscat</a> ಎಂಬ ಯೂಟ್ಯೂಬ್ ಚಾನಲ್ ಒಂದನ್ನು ಶುರು ಮಾಡಲಾಗಿದ್ದು, ಅದರಲ್ಲಿ ಅಪ್ಟೇಟ್ಗಳನ್ನು ನೀಡುತ್ತಿರುತ್ತೇವೆ ಎಂದು ಅವರು ಹೇಳುತ್ತಾರೆ.</p><p>‘ಜಗತ್ತೇ ಒಂದು ಹಳ್ಳಿ’ ಎನ್ನುವ ಇಂದಿನ ದಿನಗಳಲ್ಲಿ ವಲಸೆ ವ್ಯಾಪಕವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕನ್ನಡತನ ಮರೆಯದಿರಲು ಮುಂದಿನ ನಮ್ಮ ಪೀಳಿಗೆಗೆ ಅದನ್ನು ದಾಟಿಸಲು ಯಾವುದೇ ದೇಶಕ್ಕೇ ಹೋದರೂ ಕನ್ನಡಿಗರೆಲ್ಲ ಸಂಘಟಿತರಾಗಲು, ಸಾಂಸ್ಕೃತಿಕ ವಿನಿಮಯಗಳಾಗಲು ‘ಚಾಲುಕ್ಯ ಕೂಟ’ ಮಾದರಿಯಾಗಿದೆ.</p>.PV Web Exclusive: ಕುಡಿಯುವ ನೀರಿನಲ್ಲೂ ರಾಜಕಾರಣ- ನಿಲ್ಲದ ಆರೋಪ–ಪ್ರತ್ಯಾರೋಪ.PV Web Exclusive: ಧ್ವನಿ ವಿಜ್ಞಾನಕ್ಕೆ ಸಾಕ್ಷಿ ಹದಿನಾರು ಕಂಬಗಳ ಈ ಮಸೀದಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಶಿಕ್ಷಣ, ಉದ್ಯೋಗ, ವ್ಯಾಪಾರ, ಟೆಕ್ ಕ್ಷೇತ್ರ ಎಂದು ವಿದೇಶಗಳಲ್ಲಿ ಲಕ್ಷಾಂತರ ಕನ್ನಡಿಗರು ಬದುಕು ಕಟ್ಟಿಕೊಂಡು ಅಲ್ಲಿಯೇ ನೆಲೆ ನಿಂತು ಕರ್ನಾಟಕದ ತಾಕತ್ತನ್ನು ಜಗತ್ತಿನೆದರು ತೆರೆದಿಡುತ್ತಿದ್ದಾರೆ. ಆ ಮೂಲಕ ಕನ್ನಡತನದ ಕಾಯಕ, ದಾಸೋಹ, ಸಹಬಾಳ್ವೆ, ಶಾಂತಿಯ ಮಂತ್ರಗಳನ್ನು ಹೊರದೇಶಗಳಲ್ಲೂ ಪಠಿಸುತ್ತಿದ್ದಾರೆ.</p><p>ಯುರೋಪ್, ಅಮೆರಿಕ, ಮಧ್ಯಪ್ರಾಚ್ಯ, ಆಫ್ರಿಕಾ ಸೇರಿ ಜಗತ್ತಿನ ಅನೇಕ ದೇಶಗಳಲ್ಲಿ ಲಕ್ಷಾಂತರ ಕನ್ನಡಿಗರು ಸಕ್ರಿಯರಾಗಿದ್ದಾರೆ. ಕೇವಲ ತಮ್ಮ ಪಾಡಿಗೆ ತಾವಿಲ್ಲ. ಬದಲಿಗೆ ಕನ್ನಡ ಎಂಬ ಅದ್ಭುತ ಶಕ್ತಿಯಿಂದ ಒಬ್ಬರಿಗೊಬ್ಬರು ಬೆಸೆದುಕೊಂಡಿದ್ದಾರೆ. ಸಂಘ–ಸಂಸ್ಥೆಗಳನ್ನು ಕಟ್ಟಿಕೊಂಡು ‘ಸಂಘ ಜೀವನ’ದ ಮಹತ್ವವನ್ನು ಸಾರುತ್ತಿದ್ದಾರೆ.</p><p>ಮಧ್ಯಪ್ರಾಚ್ಯದಲ್ಲಂತೂ ‘ಕನ್ನಡಿಗರ ಹವಾ’ ಸ್ವಲ್ಪ ಜಾಸ್ತಿನೇ ಎನ್ನಬಹುದು. ಯುಎಇ, ಕತಾರ್, ಕುವೈತ್, ಒಮಾನ್, ಬಹರೈನ್, ಸೌದಿ ಅರೇಬಿಯಾ ಮುಂತಾದ ದೇಶಗಳಲ್ಲಿ ಹೊರನಾಡ ಕನ್ನಡಿಗರು ಕನ್ನಡ ಕರ್ನಾಟಕವನ್ನು, ತಮ್ಮವರನ್ನು ಮರೆತಿಲ್ಲ. ತಮ್ಮ ಕೆಲಸಗಳ ಒತ್ತಡದ ನಡುವೆಯೂ ಕನ್ನಡಿಗ, ಕರ್ನಾಟಕಕ್ಕೆ ಕೆಲಸ ಮಾಡುತ್ತಿದ್ದಾರೆ.</p><p>ಹೀಗೆ, ಒಮಾನ್ ದೇಶದಲ್ಲಿಯೂ ಸುಮಾರು 5 ಸಾವಿರ ಕನ್ನಡಿಗರು ಸಕ್ರಿಯರಾಗಿದ್ದಾರೆ. ಉದ್ಯೋಗ–ವ್ಯಾಪಾರ, ಶಿಕ್ಷಣಕ್ಕಾಗಿ ಸುಂದರ ದೇಶ ಒಮಾನ್ಗೆ ವಲಸೆ ಹೋಗಿರುವ ಅವರು ನಾವು ಕನ್ನಡಿಗರು ಎಂಬ ಆಲದ ಮರದ ಅಡಿ ಸಂಘಟಿತರಾಗಿದ್ದಾರೆ. ‘ಮಸ್ಕತ್ ಚಾಲುಕ್ಯ ಕೂಟ’ ಎಂಬ ಹೆಸರಿನಲ್ಲಿ ಒಮಾನ್ ಕನ್ನಡಿಗರು ಒಂದಾಗಿ ಹೊರನಾಡ ಕನ್ನಡಿಗರಿಗೆ ಮಾದರಿಯಾಗಿದ್ದಾರೆ.</p>.<p><strong>ಮಸ್ಕತ್ ಚಾಲುಕ್ಯ ಕೂಟ</strong></p><p>ಒಮಾನ್ನ ದೇಶದ ರಾಜಧಾನಿ ಮಸ್ಕತ್ನಲ್ಲಿ ಚಾಲುಕ್ಯ ಕೂಟ ಸಕ್ರಿಯವಾಗಿದೆ. ಇದರ ವಿಶೇಷ ಎಂದರೆ ಮರೆಯಾಗುತ್ತಿರುವ ಉತ್ತರ ಕರ್ನಾಟಕದ ಸಂಸ್ಕೃತಿ, ಆಹಾರ, ಆಚಾರ–ವಿಚಾರಗಳನ್ನು ಹೊರನಾಡ ಕನ್ನಡಿಗರಿಗೆ, ಹೊರದೇಶದವರಿಗೆ ದಾಟಿಸಲು ಶ್ರಮಿಸುತ್ತಿದ್ದೆ.</p><p>ಹುಬ್ಬಳ್ಳಿ ಮೂಲದವರಾದ 50 ವರ್ಷದ ಮಹೇಶ್ ಪುರೋಹಿತ್ ಹಾಗೂ ಅವರ ಸ್ನೇಹಿತರು ಚಾಲುಕ್ಯ ಕೂಟ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಸದ್ಯ ಮಹೇಶ್ ಪುರೋಹಿತ್ ಅವರು ಎಂಎನ್ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ತಮ್ಮ ಕುಟುಂಬದ ಜೊತೆ ಎರಡು ದಶಕಗಳಿಂದ ಅಲ್ಲಿಯೇ ನೆಲೆ ನಿಂತಿದ್ದಾರೆ. ಅಷ್ಟೇ ಅಲ್ಲದೇ ಮಧ್ಯಪ್ರಾಚ್ಯ ದೇಶಗಳಲ್ಲಿ ಕನ್ನಡಿಗರ ಸಂಘಟನೆಗೆ ಶ್ರಮಿಸುತ್ತಿದ್ದಾರೆ.</p><p>2020 ರ ಸಮಯದಲ್ಲಿ ಚಾಲುಕ್ಯ ಕೂಟವನ್ನು ವಿಶೇಷವಾಗಿ ಒಮಾನ್ನ ಉತ್ತರ ಕರ್ನಾಟಕ ಭಾಗದ ಕನ್ನಡಿಗರು ಹುಟ್ಟಿಹಾಕಿದರು. ಆರಂಭದಲ್ಲಿ ಕೆಲವು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಿದರು. ಕೋವಿಡ್ ಕಾರಣದಿಂದ ಶುರುವಾತಿನಲ್ಲಿ ಹೆಚ್ಚು ಕಾರ್ಯಕ್ರಮಗಳು ನಡೆಯಲಿಲ್ಲ.</p><p>2023 ರಿಂದ ಚಾಲುಕ್ಯ ಕೂಟ ಬಹಳಷ್ಟು ಸಕ್ರಿಯವಾಯಿತು. ಪ್ರತಿ ವರ್ಷ ಸಂಕ್ರಾಂತಿ ಸಂದರ್ಭದಲ್ಲಿ ಜನಪದ ಹಬ್ಬ ಅಥವಾ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ.</p><p>ಈ ಜನಪದ ಹಬ್ಬದ ಕಾರ್ಯಕ್ರಮವೇ ಸಮಗ್ರ ಉತ್ತರ ಕರ್ನಾಟಕದ ಸಾಂಸ್ಕೃತಿಕ ವೈಭವ, ಉಡುಗೆ, ತೊಡುಗೆ ಆಹಾರ, ಆಚಾರ ವಿಚಾರಗಳನ್ನು ಒಮಾನ್ನಲ್ಲಿರುವ ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕದವರ ಎದುರು ತೆರೆದಿಡುತ್ತದೆ. ಚಾಲುಕ್ಯ ಕೂಟದ ವಿಶೇಷವೇ ಇದು.</p>.<p><strong>ಸಂಕ್ರಾಂತಿ ಜನಪದ ಹಬ್ಬ 'ಜನಪದ ಜಾತ್ರೆ -2026'</strong></p><p>ಸಂಕ್ರಾಂತಿ ಜನಪದ ಹಬ್ಬಕ್ಕೆ ಚಾಲುಕ್ಯ ಕೂಟದವರು ಸುಮಾರು ಒಂದೆರಡು ತಿಂಗಳು ಮೊದಲೇ ಶ್ರಮಿಸುತ್ತಾರೆ. ಕನ್ನಡಿಗ ಕುಟುಂಬಗಳನ್ನು ಸಂಪರ್ಕಿಸಿ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಿ ಸಿದ್ಧಪಡಿಸುತ್ತಾರೆ. ಕಾರ್ಯಕ್ರಮವು ಸಂಪೂರ್ಣ ಉತ್ತರ ಕರ್ನಾಟಕಮಯವಾಗಿರುತ್ತದೆ. ಹಾಗಂತ ಉತ್ತರ ಕರ್ನಾಟಕದವರಷ್ಟೇ ಭಾಗವಹಿಸುವುದಿಲ್ಲ. ಕಾರ್ಯಕ್ರಮದ ಥೀಮ್ ಮಾತ್ರ ಉಕ!</p><p>ಕಾರ್ಯಕ್ರಮಕ್ಕೆ ಊಟೋಪಚಾರಕ್ಕೆ ಬೇಕಾದ ಉತ್ತರ ಕರ್ನಾಟಕದ ಅಡುಗೆ ತಿನಿಸುಗಳನ್ನು ಕನ್ನಡತಿಯರೇ ತಯಾರು ಮಾಡುತ್ತಾರೆ. ಇದಕ್ಕಾಗಿ ‘ಚಿಗವ್ವ, ದೊಡ್ಡವ್ವ’ಗಳು ಒಂದು ವಾರ ‘ಕಮ್ಯುನಿಟಿ ಕಿಚನ್’ ಪರಿಕಲ್ಪನೆ ಅಡಿ ಆಹಾರ ಸಿದ್ದಪಡಿಸುತ್ತಾರೆ. ಉತ್ತರ ಕರ್ನಾಟಕದ ಪ್ರತಿಯೊಂದು ತಿಂಡಿ ತಿನಿಸುಗಳನ್ನು ತಯಾರಿಸಿ ಉಣಬಡಿಸುತ್ತಾರೆ.</p><p>ಊಟ ಅಷ್ಟೇ ಅಲ್ಲದೇ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕದ ಕಲಾವಿದರನ್ನು ಕರೆಸಲಾಗುತ್ತದೆ. ಕಲಾವಿದರಿಂದ ಒಮಾನ್ ಕನ್ನಡಿಗರು ತಾವು ತಮ್ಮೂರಲ್ಲಿದ್ದೇವೆನೋ ಎಂಬಂತೆ ಸಂಭ್ರಮಿಸುತ್ತಾರೆ.</p><p>ಚಾಲುಕ್ಯ ಕೂಟದ ಈ ಕಾರ್ಯಕ್ರಮದಲ್ಲಿ ವಿಶೇಷ ಎಂದರೆ ಸಿನಿಮಾ ಹಾಡು ನೃತ್ಯಗಳ ಬದಲಿಗೆ ಸಂಪೂರ್ಣವಾಗಿ ಉತ್ತರ ಕರ್ನಾಟಕದ ಜಾನಪದ ಹಾಡು, ನೃತ್ಯಗಳಿಗೇ ಆದ್ಯತೆ ನೀಡಲಾಗುತ್ತದೆ. ಕೇವಲ ಇದು ಕಲಾವಿದರ ಕಾರ್ಯಕ್ರಮವಾಗಿರುವುದಿಲ್ಲ. ಉತ್ತರ ಕರ್ನಾಟಕದ ವೇಷಭೂಷಣಗಳು, ಹಾಡು, ಹರಟೆ–ತಮಾಷೆಯನ್ನು ಪ್ರತಿಯೊಬ್ಬರು ಸಂಭ್ರಮಿಸುತ್ತಾರೆ. ವಿಶೇಷ ಎಂದರೆ ಈ ವರ್ಷದ ಹಬ್ಬದಲ್ಲಿ ಮಹಿಳಾಮಣಿಗಳೇ ತಾವೇ 40 ಕೆ.ಜೆಯಷ್ಟು ಉತ್ತರ ಕರ್ನಾಟಕದ ಪುರಾತನ ಸಿಹಿ ಪದಾರ್ಥ ‘ಮಾದ್ಲಿ’ ತಯಾರಿಸಿದ್ದನ್ನು ನೆನಪಿಸಿಕೊಂಡು ನಗುತ್ತಾರೆ ಕೂಟದ ಸದಸ್ಯರು.</p><p>ಅಷ್ಟೇ ಅಲ್ಲದೇ ಮರೆತು ಹೋಗುತ್ತಿರುವ ಉತ್ತರ ಕರ್ನಾಟಕದ ಮನೆ ಬಳಕೆಯ ಸಾಮನು, ಪರಿಕರಗಳನ್ನು ಕಾರ್ಯಕ್ರಮಕ್ಕೆ ತರಿಸಿ ಅವುಗಳನ್ನು ತಮ್ಮ ಸದಸ್ಯರಿಗೆ ತೋರಿಸಿ ನೀಡಲಾಗುತ್ತದೆ. ಇದರಿಂದ ಕಾರ್ಯಕ್ರಮಕ್ಕೆ ಬಂದವರು ಫುಲ್ ಖುಷ್.</p>.<p><strong>ಸಹಾಯ ಸಹಕಾರ</strong></p><p>ಚಾಲುಕ್ಯ ಕೂಟದಲ್ಲಿ ಸುಮಾರು 300 ಸದಸ್ಯರು ಸಕ್ರಿಯರಾಗಿದ್ದಾರೆ. ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಷ್ಟು ದೊಡ್ಡ ಕಾರ್ಯಕ್ರಮ ಮಾಡದಿದ್ದರೂ ಕಾಲಕಾಲಕ್ಕೆ ಸಂಘಟಿತರಾಗುತ್ತಾರೆ.</p><p>ಬೇರೆ ಬೇರೆ ಕಾರಣಗಳಿಗಾಗಿ ಒಮಾನ್ಗೆ ಬರುವ ಕರ್ನಾಟಕದ ಗಣ್ಯರು, ಸಾಧಕರನ್ನು ಗುರುತಿಸಿ ಅವರನ್ನು ಚಾಲುಕ್ಯ ಕೂಟಕ್ಕೆ ಕರೆಯಿಸಿ ಸನ್ಮಾನಿಸಲಾಗುತ್ತಿದೆ.</p><p>ಒಮಾನ್ಗೆ ಬಂದಾಗ ಆಕಸ್ಮಿಕವಾಗಿ ತೊಂದರೆ ಅನುಭವಿಸುವ ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕ ಕನ್ನಡಿಗರಿಗೆ ಸಹಾಯ ಹಸ್ತ ಚಾಚಲು ಯಾವಾಗಲು ಸಿದ್ಧವಾಗಿರುತ್ತದೆ.</p>.<p><strong>ಹಲವು ಕಾರ್ಯಕ್ರಮಗಳ ಯೋಜನೆಗೆ ಸಿದ್ಧತೆ</strong></p><p>ಒಮಾನ್ ಮಸ್ಕತ್ನಲ್ಲಿ ಸದ್ಯ ವರ್ಷಕ್ಕೆ ಒಂದು ದೊಡ್ಡ ಕಾರ್ಯಕ್ರಮ ಮಾಡಲಾಗುತ್ತಿದೆ. ಬರುವ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡಲು ಶ್ರಮಿಸಲಾಗುತ್ತದೆ. ಹೊರದೇಶಗಳಲ್ಲಿ ಸಂಘಟನೆ ಅಷ್ಟೊಂದು ಸುಲಭ ಅಲ್ಲ ಎನ್ನುತ್ತಾರೆ ಚಾಲುಕ್ಯ ಕೂಟದ ನೇತೃತ್ವ ವಹಿಸಿರುವ ಮಹೇಶ್ ಪುರೋಹಿತ್ ಅವರು.</p><p>ನಮ್ಮದಲ್ಲದ ಊರು, ದೇಶದಲ್ಲಿ ಹೋಗಿ ಬದುಕುವುದು ಯಾರಿಗಾದರೂ ಕಷ್ಟ. ಈ ಕಷ್ಟಗಳು ಕಡಿಮೆ ಆಗಬೇಕಾದರೆ ಸಾಂಘಿಕ ಜೀವನ, ಒಗ್ಗಟ್ಟು ಮುಖ್ಯವಾಗುತ್ತದೆ. ಇದನ್ನು ನಾವು ಒಮಾನ್ನಲ್ಲಿ ಸಾಧಿಸುತ್ತಿದ್ದೇವೆ. ಬರುವ ದಿನಗಳಲ್ಲಿ ಇದನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿದ್ದೇವೆ. ನಮ್ಮೆಲ್ಲ ಸ್ನೇಹಿತರು ಇದಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದಾರೆ ಎನ್ನುವುದು ಮಹೇಶ್ ಅವರ ಮನದಾಳದ ಮಾತುಗಳು.</p><p><a href="https://www.youtube.com/@chalukyakootamuscat">Chalukya Koota Muscat</a> ಎಂಬ ಯೂಟ್ಯೂಬ್ ಚಾನಲ್ ಒಂದನ್ನು ಶುರು ಮಾಡಲಾಗಿದ್ದು, ಅದರಲ್ಲಿ ಅಪ್ಟೇಟ್ಗಳನ್ನು ನೀಡುತ್ತಿರುತ್ತೇವೆ ಎಂದು ಅವರು ಹೇಳುತ್ತಾರೆ.</p><p>‘ಜಗತ್ತೇ ಒಂದು ಹಳ್ಳಿ’ ಎನ್ನುವ ಇಂದಿನ ದಿನಗಳಲ್ಲಿ ವಲಸೆ ವ್ಯಾಪಕವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕನ್ನಡತನ ಮರೆಯದಿರಲು ಮುಂದಿನ ನಮ್ಮ ಪೀಳಿಗೆಗೆ ಅದನ್ನು ದಾಟಿಸಲು ಯಾವುದೇ ದೇಶಕ್ಕೇ ಹೋದರೂ ಕನ್ನಡಿಗರೆಲ್ಲ ಸಂಘಟಿತರಾಗಲು, ಸಾಂಸ್ಕೃತಿಕ ವಿನಿಮಯಗಳಾಗಲು ‘ಚಾಲುಕ್ಯ ಕೂಟ’ ಮಾದರಿಯಾಗಿದೆ.</p>.PV Web Exclusive: ಕುಡಿಯುವ ನೀರಿನಲ್ಲೂ ರಾಜಕಾರಣ- ನಿಲ್ಲದ ಆರೋಪ–ಪ್ರತ್ಯಾರೋಪ.PV Web Exclusive: ಧ್ವನಿ ವಿಜ್ಞಾನಕ್ಕೆ ಸಾಕ್ಷಿ ಹದಿನಾರು ಕಂಬಗಳ ಈ ಮಸೀದಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>