<p><strong>ಟೋಕಿಯೊ:</strong> ಜಪಾನ್ ರಾಜಧಾನಿ ಟೋಕಿಯೋದಲ್ಲಿರುವ ಕನ್ನಡಿಗರೆಲ್ಲರೂ ಒಟ್ಟಾಗಿ ಸೇರಿ ಪೊಟ್ಲಕ್ ಶೈಲಿ (ಸಾಂಪ್ರದಾಯಿಕ ಆಹಾರ)ಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. </p><p>ಜಪಾನ್ ಕನ್ನಡ ಸಂಘದ(ಜೆಕೆಎಸ್) ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಳ್ಳು–ಬೆಲ್ಲ ಹಂಚುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ. </p><p>ಜೆಕೆಎಸ್ ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿದ ಸಾಂಪ್ರದಾಯಿಕ ತಿನಿಸುಗಳೊಂದಿಗೆ ಭಾಗವಹಿಸಿದ್ದರು. </p><p>ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಪಾನ್ನ ಟೋಕುತಾರೋ ಯನಾಯಿರು ಮಾತನಾಡಿ ‘ಈ ಕಾರ್ಯಕ್ರಮವು ಭಾರತೀಯ ಹಾಗೂ ಕರ್ನಾಟಕದ ಸಂಸ್ಕೃತಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p><p>ವಿದೇಶದಲ್ಲಿದ್ದರೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜೀವಂತವಾಗಿಟ್ಟುಕೊಳ್ಳುವ ಉದ್ದೇಶದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು ಎಂದು ಆಯೋಜಕರು ಹೇಳಿದ್ದಾರೆ. </p><p>ಕನ್ನಡಿಗರ ಜೊತೆಗೆ ಅವರ ಜಪಾನೀಸ್ ಸ್ನೇಹಿತರು ಕೂಡ ಆಚರಣೆಯಲ್ಲಿ ಭಾಗಿಯಾಗಿದ್ದರು. ಪೂಜಾ ಕಾರ್ಯಕ್ರಮದ ಜೊತೆಗೆ ಮನರಂಜನಾ ಕಾರ್ಯಕ್ರಮ ಹಾಗೂ ಮಕ್ಕಳಿಗಾಗಿ ವಿವಿಧ ಆಟಗಳನ್ನು ಆಯೋಜಿಸಲಾಗಿತ್ತು. </p>.<p><strong>ಸಂಕ್ರಾತಿಗಾಗಿ ಬಂತು ಮೈಸೂರು ಪಾಕ್:</strong> ಜಪಾನ್ ಕನ್ನಡ ಸಂಘದ ಕಾರ್ಯಕ್ರಮಕ್ಕಾಗಿ ‘ವರ್ಡ್ ಆಫ್ ಮೈಸೂರು ಪಾಕ್’ ಸಂಸ್ಥೆಯವರು ಮೂರು ಕೆ.ಜಿ. ಮೈಸೂರ್ ಪಾಕ್ ಅನ್ನು ಮೈಸೂರಿನಿಂದ ಪ್ರಾಯೋಜಕತ್ವವಾಗಿ ಕಳುಹಿಸಿದ್ದರು. </p><p>ಕ್ರಿಯೇಟಿವ್ ಕಿಡ್ಸ್ ವರ್ಕ್ಶಾಪ್ ಹಾಗೂ ಬ್ರಾಡ್ ಬ್ರೈನ್ಸ್ ಇಂಕ್(ಜಪಾನ್) ಕಾರ್ಯಕ್ರಮದ ಸಹಪ್ರಾಯೋಜಕತ್ವ ವಹಿಸಿದ್ದರು. </p><p>ಕಾರ್ಯಕ್ರಮದಲ್ಲಿ ಇಂಡಿಯನ್ ಕರ್ರಿ ಎಕ್ಸ್ಪೋ ಸಂಸ್ಥಾಪಕ ಯುಕೋನ್, ಕ್ರಿಯೇಟಿವ್ ಕಿಡ್ಸ್ ವರ್ಕ್ಶಾಪ್ ಸಂಸ್ಥಾಪಕ ಸುಧೀಂದ್ರ ಸತ್ಯನಾರಾಯಣ ಹಾಗೂ ಜೆಕೆಎಸ್ ಸದಸ್ಯರು ಉಪಸ್ಥಿತರಿದ್ದರು. ಡಾ. ಅನುರಾಧಾ ರಾವ್ ಅವರು ನಿರೂಪಿಸಿದರು. </p>.<p><strong>ವರದಿ: ಕಿರಣ್ ರುದ್ರಮುನಿಸ್ವಾಮಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೋಕಿಯೊ:</strong> ಜಪಾನ್ ರಾಜಧಾನಿ ಟೋಕಿಯೋದಲ್ಲಿರುವ ಕನ್ನಡಿಗರೆಲ್ಲರೂ ಒಟ್ಟಾಗಿ ಸೇರಿ ಪೊಟ್ಲಕ್ ಶೈಲಿ (ಸಾಂಪ್ರದಾಯಿಕ ಆಹಾರ)ಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. </p><p>ಜಪಾನ್ ಕನ್ನಡ ಸಂಘದ(ಜೆಕೆಎಸ್) ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಳ್ಳು–ಬೆಲ್ಲ ಹಂಚುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ. </p><p>ಜೆಕೆಎಸ್ ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿದ ಸಾಂಪ್ರದಾಯಿಕ ತಿನಿಸುಗಳೊಂದಿಗೆ ಭಾಗವಹಿಸಿದ್ದರು. </p><p>ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಪಾನ್ನ ಟೋಕುತಾರೋ ಯನಾಯಿರು ಮಾತನಾಡಿ ‘ಈ ಕಾರ್ಯಕ್ರಮವು ಭಾರತೀಯ ಹಾಗೂ ಕರ್ನಾಟಕದ ಸಂಸ್ಕೃತಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.</p><p>ವಿದೇಶದಲ್ಲಿದ್ದರೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜೀವಂತವಾಗಿಟ್ಟುಕೊಳ್ಳುವ ಉದ್ದೇಶದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು ಎಂದು ಆಯೋಜಕರು ಹೇಳಿದ್ದಾರೆ. </p><p>ಕನ್ನಡಿಗರ ಜೊತೆಗೆ ಅವರ ಜಪಾನೀಸ್ ಸ್ನೇಹಿತರು ಕೂಡ ಆಚರಣೆಯಲ್ಲಿ ಭಾಗಿಯಾಗಿದ್ದರು. ಪೂಜಾ ಕಾರ್ಯಕ್ರಮದ ಜೊತೆಗೆ ಮನರಂಜನಾ ಕಾರ್ಯಕ್ರಮ ಹಾಗೂ ಮಕ್ಕಳಿಗಾಗಿ ವಿವಿಧ ಆಟಗಳನ್ನು ಆಯೋಜಿಸಲಾಗಿತ್ತು. </p>.<p><strong>ಸಂಕ್ರಾತಿಗಾಗಿ ಬಂತು ಮೈಸೂರು ಪಾಕ್:</strong> ಜಪಾನ್ ಕನ್ನಡ ಸಂಘದ ಕಾರ್ಯಕ್ರಮಕ್ಕಾಗಿ ‘ವರ್ಡ್ ಆಫ್ ಮೈಸೂರು ಪಾಕ್’ ಸಂಸ್ಥೆಯವರು ಮೂರು ಕೆ.ಜಿ. ಮೈಸೂರ್ ಪಾಕ್ ಅನ್ನು ಮೈಸೂರಿನಿಂದ ಪ್ರಾಯೋಜಕತ್ವವಾಗಿ ಕಳುಹಿಸಿದ್ದರು. </p><p>ಕ್ರಿಯೇಟಿವ್ ಕಿಡ್ಸ್ ವರ್ಕ್ಶಾಪ್ ಹಾಗೂ ಬ್ರಾಡ್ ಬ್ರೈನ್ಸ್ ಇಂಕ್(ಜಪಾನ್) ಕಾರ್ಯಕ್ರಮದ ಸಹಪ್ರಾಯೋಜಕತ್ವ ವಹಿಸಿದ್ದರು. </p><p>ಕಾರ್ಯಕ್ರಮದಲ್ಲಿ ಇಂಡಿಯನ್ ಕರ್ರಿ ಎಕ್ಸ್ಪೋ ಸಂಸ್ಥಾಪಕ ಯುಕೋನ್, ಕ್ರಿಯೇಟಿವ್ ಕಿಡ್ಸ್ ವರ್ಕ್ಶಾಪ್ ಸಂಸ್ಥಾಪಕ ಸುಧೀಂದ್ರ ಸತ್ಯನಾರಾಯಣ ಹಾಗೂ ಜೆಕೆಎಸ್ ಸದಸ್ಯರು ಉಪಸ್ಥಿತರಿದ್ದರು. ಡಾ. ಅನುರಾಧಾ ರಾವ್ ಅವರು ನಿರೂಪಿಸಿದರು. </p>.<p><strong>ವರದಿ: ಕಿರಣ್ ರುದ್ರಮುನಿಸ್ವಾಮಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>