<p><strong>ಜಕಾರ್ತಾ: ‘</strong>ಇಂಡೊನೇಷ್ಯಾದ ಜಾವಾ ದ್ವೀಪದಲ್ಲಿ ಸರಕು ಸಾಗಣೆ ಹಡಗು ಮತ್ತು ಮೀನುಗಾರಿಕೆ ದೋಣಿಯ ನಡುವೆ ಡಿಕ್ಕಿ ಸಂಭವಿಸಿದ್ದು,17 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.</p>.<p>‘ಇಂದ್ರಮಾಯು ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಇಂಡೊನೇಷ್ಯಾದ ಎಂವಿ ಹ್ಯಾಬ್ಕೊ ಪಯೋನೀರ್ ಸರಕು ಸಾಗಣೆ ಹಡಗಿಗೆ ಮೀನುಗಾರಿಕೆ ದೋಣಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ದೋಣಿಯು ನೀರಿನಲ್ಲಿ ಮುಳುಗಿದೆ. ಈ ದೋಣಿಯಲ್ಲಿ 32 ಮಂದಿ ಇದ್ದರು’ ಎಂದುಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡೆಡೇನ್ ರಿದ್ವಾನ್ಶು ತಿಳಿಸಿದರು.</p>.<p>‘ದೋಣಿಯಲ್ಲಿ ಸಿಲುಕಿದ್ದ 15 ಜನರನ್ನುರಕ್ಷಿಸುವಲ್ಲಿ ಸ್ದಳೀಯ ಮೀನುಗಾರರು ಮತ್ತು ನೌಕಾಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇತರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಸಮುದ್ರ ಸಾರಿಗೆ ನಿರ್ದೇಶನಾಲಯದ ವಕ್ತಾರ ವಿಷ್ಣುವರ್ಧನ ಅವರು ಮಾಹಿತಿ ನೀಡಿದರು.</p>.<p>‘ಬೊರ್ನಿಯೊ ದ್ವೀಪದಿಂದ ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ಸರಕು ಸಾಗಣೆ ಹಡಗು, ಮೀನುಗಾರರ ಬಲೆಗೆ ಸಿಲುಕಿತ್ತು. ಇದರಿಂದ ಹೊರ ಬರಲು ಪ್ರಯತ್ನಿಸುವಾಗ ಈ ಅಪಘಾತ ಸಂಭವಿಸಿದೆ’ ಎಂದು ರಿದ್ವಾನ್ಶು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಕಾರ್ತಾ: ‘</strong>ಇಂಡೊನೇಷ್ಯಾದ ಜಾವಾ ದ್ವೀಪದಲ್ಲಿ ಸರಕು ಸಾಗಣೆ ಹಡಗು ಮತ್ತು ಮೀನುಗಾರಿಕೆ ದೋಣಿಯ ನಡುವೆ ಡಿಕ್ಕಿ ಸಂಭವಿಸಿದ್ದು,17 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.</p>.<p>‘ಇಂದ್ರಮಾಯು ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಇಂಡೊನೇಷ್ಯಾದ ಎಂವಿ ಹ್ಯಾಬ್ಕೊ ಪಯೋನೀರ್ ಸರಕು ಸಾಗಣೆ ಹಡಗಿಗೆ ಮೀನುಗಾರಿಕೆ ದೋಣಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ದೋಣಿಯು ನೀರಿನಲ್ಲಿ ಮುಳುಗಿದೆ. ಈ ದೋಣಿಯಲ್ಲಿ 32 ಮಂದಿ ಇದ್ದರು’ ಎಂದುಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡೆಡೇನ್ ರಿದ್ವಾನ್ಶು ತಿಳಿಸಿದರು.</p>.<p>‘ದೋಣಿಯಲ್ಲಿ ಸಿಲುಕಿದ್ದ 15 ಜನರನ್ನುರಕ್ಷಿಸುವಲ್ಲಿ ಸ್ದಳೀಯ ಮೀನುಗಾರರು ಮತ್ತು ನೌಕಾಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇತರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಸಮುದ್ರ ಸಾರಿಗೆ ನಿರ್ದೇಶನಾಲಯದ ವಕ್ತಾರ ವಿಷ್ಣುವರ್ಧನ ಅವರು ಮಾಹಿತಿ ನೀಡಿದರು.</p>.<p>‘ಬೊರ್ನಿಯೊ ದ್ವೀಪದಿಂದ ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ಸರಕು ಸಾಗಣೆ ಹಡಗು, ಮೀನುಗಾರರ ಬಲೆಗೆ ಸಿಲುಕಿತ್ತು. ಇದರಿಂದ ಹೊರ ಬರಲು ಪ್ರಯತ್ನಿಸುವಾಗ ಈ ಅಪಘಾತ ಸಂಭವಿಸಿದೆ’ ಎಂದು ರಿದ್ವಾನ್ಶು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>