<p><strong>ಕೈರೊ</strong>: ಗಾಜಾ ಪಟ್ಟಿಯಲ್ಲಿ ತೀವ್ರವಾದ ದಾಳಿ ನಡೆಸುವ ಮೂಲಕ ಹಮಾಸ್ ಎದುರಿನ ಯುದ್ಧದಲ್ಲಿ ಇಸ್ರೇಲ್ ನರಮೇಧ ಮಾಡುತ್ತಿದೆ. ಪ್ಯಾಲೆಸ್ಟೇನಿಯನ್ನರನ್ನು ಬೇಕೆಂದೇ ನಾಶಗೊಳಿಸಲು ಪ್ರಮುಖ ಮೌಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು, ಅಹಾರ ಹಾಗೂ ಔಷಧದಂತಹ ವಸ್ತುಗಳೂ ದೊರೆಯದಂತೆ ತಡೆಹಿಡಿಯುತ್ತಿದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಆರೋಪಿಸಿದೆ.</p>.<p>2023ರ ಅಕ್ಟೋಬರ್ 7ರಂದು ಹಮಾಸ್ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಸಮರ್ಥನೆಯೇ ಇಲ್ಲ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಮಾನವ ಹಕ್ಕುಗಳ ಸಂಸ್ಥೆಯು ಗುರುವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ನಾಗರಿಕರ ವಾಸಸ್ಥಳಗಳಲ್ಲಿ ಉಗ್ರರ ಹಾಜರಿ ಇರುವಂತೆ ಮಾಡುವುದಾಗಲೀ, ಆ ರೀತಿಯ ಯುದ್ಧಕ್ಕೆ ಇಂಬುಗೊಟ್ಟಿದ್ದಾಗಲೀ ಸರಿಯಲ್ಲ ಎಂದಿದೆ. ಇಸ್ರೇಲ್ ಮಾಡುತ್ತಿರುವ ನರಮೇಧಕ್ಕೆ ಅಮೆರಿಕ ಮತ್ತಿತರ ರಾಷ್ಟ್ರಗಳು ಬೆಂಬಲ ನೀಡುತ್ತಿರುವುದೂ ಸರಿಯಲ್ಲ ಎಂದಿರುವ ಸಂಸ್ಥೆ, ಅಂತಹ ದೇಶಗಳು ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಬೇಕು ಎಂದೂ ಆಗ್ರಹಿಸಿದೆ.</p>.<p>‘ನಮಗೆ ದೊರೆತಿರುವ ಮಾಹಿತಿಯ ಪ್ರಕಾರ ಇಸ್ರೇಲ್ ನಡೆಸಿರುವುದು ನರಮೇಧ. ಇದು ಅಂತರರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆಯ ಘಂಟೆಯಾಗಬೇಕು. ತಕ್ಷಣವೇ ಈ ಕೃತ್ಯಗಳನ್ನೆಲ್ಲ ನಿಲ್ಲಿಸಬೇಕು’ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ನ ಪ್ರಧಾನ ಕಾರ್ಯದರ್ಶಿ ಆಗ್ನಸ್ ಕಲಮಾರ್ಡ್ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೈರೊ</strong>: ಗಾಜಾ ಪಟ್ಟಿಯಲ್ಲಿ ತೀವ್ರವಾದ ದಾಳಿ ನಡೆಸುವ ಮೂಲಕ ಹಮಾಸ್ ಎದುರಿನ ಯುದ್ಧದಲ್ಲಿ ಇಸ್ರೇಲ್ ನರಮೇಧ ಮಾಡುತ್ತಿದೆ. ಪ್ಯಾಲೆಸ್ಟೇನಿಯನ್ನರನ್ನು ಬೇಕೆಂದೇ ನಾಶಗೊಳಿಸಲು ಪ್ರಮುಖ ಮೌಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು, ಅಹಾರ ಹಾಗೂ ಔಷಧದಂತಹ ವಸ್ತುಗಳೂ ದೊರೆಯದಂತೆ ತಡೆಹಿಡಿಯುತ್ತಿದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಆರೋಪಿಸಿದೆ.</p>.<p>2023ರ ಅಕ್ಟೋಬರ್ 7ರಂದು ಹಮಾಸ್ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಸಮರ್ಥನೆಯೇ ಇಲ್ಲ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಮಾನವ ಹಕ್ಕುಗಳ ಸಂಸ್ಥೆಯು ಗುರುವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ನಾಗರಿಕರ ವಾಸಸ್ಥಳಗಳಲ್ಲಿ ಉಗ್ರರ ಹಾಜರಿ ಇರುವಂತೆ ಮಾಡುವುದಾಗಲೀ, ಆ ರೀತಿಯ ಯುದ್ಧಕ್ಕೆ ಇಂಬುಗೊಟ್ಟಿದ್ದಾಗಲೀ ಸರಿಯಲ್ಲ ಎಂದಿದೆ. ಇಸ್ರೇಲ್ ಮಾಡುತ್ತಿರುವ ನರಮೇಧಕ್ಕೆ ಅಮೆರಿಕ ಮತ್ತಿತರ ರಾಷ್ಟ್ರಗಳು ಬೆಂಬಲ ನೀಡುತ್ತಿರುವುದೂ ಸರಿಯಲ್ಲ ಎಂದಿರುವ ಸಂಸ್ಥೆ, ಅಂತಹ ದೇಶಗಳು ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಬೇಕು ಎಂದೂ ಆಗ್ರಹಿಸಿದೆ.</p>.<p>‘ನಮಗೆ ದೊರೆತಿರುವ ಮಾಹಿತಿಯ ಪ್ರಕಾರ ಇಸ್ರೇಲ್ ನಡೆಸಿರುವುದು ನರಮೇಧ. ಇದು ಅಂತರರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆಯ ಘಂಟೆಯಾಗಬೇಕು. ತಕ್ಷಣವೇ ಈ ಕೃತ್ಯಗಳನ್ನೆಲ್ಲ ನಿಲ್ಲಿಸಬೇಕು’ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ನ ಪ್ರಧಾನ ಕಾರ್ಯದರ್ಶಿ ಆಗ್ನಸ್ ಕಲಮಾರ್ಡ್ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>