<p><strong>ಢಾಕಾ:</strong> ಬಾಂಗ್ಲಾದೇಶದಲ್ಲಿ ಧರ್ಮಾಧಾರಿತ ಹಿಂಸಾಚಾರದ ಘಟನೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಧರ್ಮ ನಿಂದನೆ ಮಾಡಿದ ಆರೋಪದಲ್ಲಿ ಬೆಂಕಿ ಹಚ್ಚಿ ಹಿಂದೂ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾದ ಘಟನೆಯು ಬೆಳಕಿಗೆ ಬಂದಿದೆ. </p><p>ಮೃತನನ್ನು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ದೀಪು ಚಂದ್ರ ದಾಸ್ ಎಂದು ಗುರುತಿಸಲಾಗಿದೆ ಎಂದು ಬಾಂಗ್ಲಾ ಟ್ರಿಬೂನ್ ವರದಿ ಮಾಡಿದೆ. </p><p>ಧರ್ಮ ನಿಂದನೆ ಮಾಡಿದ ಆರೋಪದ ಮೇಲೆ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಕಾರ್ಖಾನೆಯ ಆವರಣದಲ್ಲಿ ಮರಕ್ಕೆ ಕಟ್ಟಿ ಗುರುವಾರ ರಾತ್ರಿ ಥಳಿಸಿದೆ. ನಂತರ ಹೆದ್ದಾರಿಯ ಬಳಿ ಅವರಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. </p><p>ಘಟನೆಯನ್ನು ಖಂಡಿಸಿರುವ ಬಾಂಗ್ಲಾ ಸರ್ಕಾರ ‘ಧರ್ಮದ ಹೆಸರಿನಲ್ಲಿ ಅಮಾಯಕ ನಾಗರಿಕನನ್ನು ಕೊಂದಿರುವ ಘಟನೆಯು ಅಮಾನವೀಯ. ಹೊಸ ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ. ಈ ರೀತಿಯ ಕೆಲಸವನ್ನು ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.</p><p>ಘಟನೆಯ ವಿಡಿಯೊವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. </p>.ನಮ್ಮನ್ನು ಕೊಲ್ತಾ ಇದೀರಿ: ಕಚೇರಿಗೆ ಬೆಂಕಿ ಇಟ್ಟವರಿಗೆ ಬಾಂಗ್ಲಾ ಪತ್ರಕರ್ತೆ ಸಂದೇಶ.ಬಾಂಗ್ಲಾ ದಂಗೆ ನಾಯಕನ ಹತ್ಯೆ: ಯಾರು ಈ ಷರೀಷ್ ಒಸ್ಮಾನ್ ಹಾದಿ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ:</strong> ಬಾಂಗ್ಲಾದೇಶದಲ್ಲಿ ಧರ್ಮಾಧಾರಿತ ಹಿಂಸಾಚಾರದ ಘಟನೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಧರ್ಮ ನಿಂದನೆ ಮಾಡಿದ ಆರೋಪದಲ್ಲಿ ಬೆಂಕಿ ಹಚ್ಚಿ ಹಿಂದೂ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾದ ಘಟನೆಯು ಬೆಳಕಿಗೆ ಬಂದಿದೆ. </p><p>ಮೃತನನ್ನು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ದೀಪು ಚಂದ್ರ ದಾಸ್ ಎಂದು ಗುರುತಿಸಲಾಗಿದೆ ಎಂದು ಬಾಂಗ್ಲಾ ಟ್ರಿಬೂನ್ ವರದಿ ಮಾಡಿದೆ. </p><p>ಧರ್ಮ ನಿಂದನೆ ಮಾಡಿದ ಆರೋಪದ ಮೇಲೆ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಕಾರ್ಖಾನೆಯ ಆವರಣದಲ್ಲಿ ಮರಕ್ಕೆ ಕಟ್ಟಿ ಗುರುವಾರ ರಾತ್ರಿ ಥಳಿಸಿದೆ. ನಂತರ ಹೆದ್ದಾರಿಯ ಬಳಿ ಅವರಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. </p><p>ಘಟನೆಯನ್ನು ಖಂಡಿಸಿರುವ ಬಾಂಗ್ಲಾ ಸರ್ಕಾರ ‘ಧರ್ಮದ ಹೆಸರಿನಲ್ಲಿ ಅಮಾಯಕ ನಾಗರಿಕನನ್ನು ಕೊಂದಿರುವ ಘಟನೆಯು ಅಮಾನವೀಯ. ಹೊಸ ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ. ಈ ರೀತಿಯ ಕೆಲಸವನ್ನು ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.</p><p>ಘಟನೆಯ ವಿಡಿಯೊವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. </p>.ನಮ್ಮನ್ನು ಕೊಲ್ತಾ ಇದೀರಿ: ಕಚೇರಿಗೆ ಬೆಂಕಿ ಇಟ್ಟವರಿಗೆ ಬಾಂಗ್ಲಾ ಪತ್ರಕರ್ತೆ ಸಂದೇಶ.ಬಾಂಗ್ಲಾ ದಂಗೆ ನಾಯಕನ ಹತ್ಯೆ: ಯಾರು ಈ ಷರೀಷ್ ಒಸ್ಮಾನ್ ಹಾದಿ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>