ಭಾರತವೂ ಸೇರಿ ಎಲ್ಲ ದೇಶಗಳೊಂದಿಗೆ ಸಮಾನತೆಯಿಂದ ಕೂಡಿದ ಸಂಬಂಧವನ್ನು ಬಯಸುತ್ತೇವೆ. ವಿಚಾರಣೆ ಎದುರಿಸಲು ಹಸೀನಾ ಅವರನ್ನು ವಾಪಸು ಕಳುಹಿಸಿಕೊಡಿ ಎಂದು ಭಾರತ ಸರ್ಕಾರವನ್ನು ಕೋರಿದ್ದೇವೆ
ಸಲಾಹುದ್ದೀನ್ ಅಹಮ್ಮದ್, ಬಿಎನ್ಪಿ ನಾಯಕ
ತಾರಿಕ್ ಅವರೊಂದಿಗೆ ಮಾತನಾಡಲು ತುಂಬಾ ಸಂತಸವಾಯಿತು. ಬಾಂಗ್ಲಾದೇಶದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ನಾನು ಅವರನ್ನು ಅಭಿನಂದಿಸಿದೆ. ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಪೂರೈಸುವ ಅವರ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದೇನೆ. ನೆರೆಹೊರೆಯವರಾಗಿದ್ದುಕೊಂಡು ಎರಡೂ ದೇಶಗಳ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ನಿರಂತರ ಬದ್ಧತೆಯನ್ನು ನಾನು ಪುನರುಚ್ಚರಿಸಿದ್ದೇನೆ