ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯನ್ನು ಶೌಚಾಲಯವೆಂದು ಪರಿಗಣಿಸಿದ್ದು ಸಾಕು: ಆಂಟೋನಿಯೊ ಗುಟೆರೆಸ್

Last Updated 1 ನವೆಂಬರ್ 2021, 16:19 IST
ಅಕ್ಷರ ಗಾತ್ರ

ಗ್ಲಾಸ್ಗೋ: 'ಪ್ರಕೃತಿಯನ್ನು ಶೌಚಾಲಯವೆಂದು ಪರಿಗಣಿಸುವುದನ್ನು ನಿಲ್ಲಿಸೋಣ,‘ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸೋಮವಾರ ವಿಶ್ವ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಗ್ಲಾಸ್ಗೋದಲ್ಲಿ ನಡೆಯುತ್ತಿರುವ ‘ವಿಶ್ವಸಂಸ್ಥೆಯ 26 ನೇ ಹವಾಮಾನ ಬದಲಾವಣೆ ಸಮ್ಮೇಳನ–(ಸಿಒಪಿ–26)’ದಲ್ಲಿ ಅವರು ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಿದರು.

‘ಜೀವ ವೈವಿಧ್ಯದ ಮೇಲೆ ಕ್ರೌರ್ಯ ಮರೆಯುವುದು ಸಾಕು, ಇಂಗಾಲದಿಂದ ನಮ್ಮನ್ನು ಕೊಂದುಕೊಂಡಿದ್ದು ಸಾಕು, ಪ್ರಕೃತಿಯನ್ನು ಶೌಚಾಲಯದಂತೆ ಪರಿಗಣಿಸಿದ್ದು ಸಾಕು, ನಮ್ಮ ದಾರಿಯನ್ನು ನಾವೇ ಸುಡುವುದು, ಅಗೆಯುವುದು ಮತ್ತು ಗಣಿಗಾರಿಕೆ ಮಾಡುವುದು ಸಾಕು. ನಾವು ನಮ್ಮ ಸಮಾಧಿಯನ್ನು ನಾವೇ ಅಗೆಯುತ್ತಿದ್ದೇವೆ,’ ಎಂದು ಅವರು ತಮ್ಮ ಭಾಷಣದಲ್ಲಿ ಬೇಸರ ವ್ಯಕ್ತಪಡಿಸಿದರು.

ಇದೇ ಸಮ್ಮೇಳನದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೂ ಭಾಗವಹಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT