<p><strong>ಲಂಡನ್</strong>: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಇಷ್ಟು ದಿನದ ರಾಜಕೀಯ ಒತ್ತಡಗಳನ್ನು ಸ್ವಲ್ಪ ಬದಿಗೆ ಸರಿಸಿ ಇನ್ಮುಂದೆ ಪತ್ರಿಕೆಗಾಗಿ ಕೆಲಸ ಮಾಡಲಿದ್ದಾರೆ.</p><p>ಹೌದು, ರಿಷಿ ಸುನಕ್ ಅವರು ಅಂಕಣಕಾರರಾಗಿ ಬದಲಾಗಿದ್ದಾರೆ. ಬ್ರಿಟನ್ನ ಪ್ರತಿಷ್ಟಿತ ;ದಿ ಸಂಡೇ ಟೈಮ್ಸ್‘ ಪತ್ರಿಕೆಗೆ ಅವರು ಅಂಕಣಗಳನ್ನು ಬರೆಯಲಿದ್ದಾರೆ.</p><p>ಆಡಳಿತಾರೂಡ ಲೇಬರ್ ಪಕ್ಷದ ಪ್ರಧಾನಿ ಕಿರ್ ಸ್ಟಾರ್ಮರ್ ಸಂಪುಟದ ಹಣಕಾಸು ಸಚಿವರು ಶೀಘ್ರ ಬಜೆಟ್ ಮಂಡಿಸಲಿದ್ದು, ಈ ನಿಟ್ಟಿನಲ್ಲಿ ರಿಷಿ ಅವರ ಅಂಕಣಗಳು ಪ್ರಾಮುಖ್ಯತೆ ಪಡೆದುಕೊಳ್ಳಲಿವೆ ಎನ್ನಲಾಗಿದೆ.</p><p>ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಸುಧಾರಣೆಗಳನ್ನು ಜನ ಎದುರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಣಕಾಸು ಸಚಿವರು ತೆರಿಗೆ ಸುಧಾರಣೆ ಹೆಸರಿನಲ್ಲಿ ಹೆಚ್ಚಿನ ತೆರಿಗೆಯನ್ನು ಜನರ ಮೇಲೆ ಹೇರಬಾರದು ಎಂದು ರಿಷಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.</p><p>ಸದ್ಯ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿರುವ ರಿಷಿ ಅವರು ಅಂಕಣಗಳಿಂದ ಬರುವ ಸಂಭಾವನೆಯನ್ನು ದೇಶದಲ್ಲಿ ಸಂಖ್ಯಾಶಾಸ್ತ್ರ ಸಂಶೋಧನೆಗೆ ತೆರದಿರುವ ಸಂಸ್ಥೆಗೆ ದೇಣಿಗೆ ನೀಡುತ್ತೇನೆ ಎಂದಿದ್ದಾರೆ.</p><p>ತಾವು ದೇಶದ ರಾಜಕೀಯದಲ್ಲಿ ಮತ್ತೆ ಮುನ್ನೆಲೆಗೆ ಬರುತ್ತೇನೆ. ಹೋರಾಟ ನಿರಂತರ, ನಾನು ಇನ್ನೂ ಬದುಕಿದ್ದೇನೆ, ನನ್ನ ಪಕ್ಷವೂ ಸಹ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.</p><p>ಈ ಹಿಂದೆ ಐದು ವರ್ಷ ನಿರಂತರವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರಿಂದ ಕುಟುಂಬಕ್ಕೆ ಸಮಯ ಕೊಡಲು ಆಗಿರಲಿಲ್ಲ. ಸದ್ಯ ಹೆಂಡತಿ ಮಕ್ಕಳ ಜೊತೆ ಒಳ್ಳೆಯ ಸಮಯ ಕಳೆಯುತ್ತಿದ್ದೇನೆ. ಈಗ ಅಂಕಣ ಬರೆಯಲು ಪ್ರಾರಂಭಿಸಿದ್ದೇನೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್</strong>: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಇಷ್ಟು ದಿನದ ರಾಜಕೀಯ ಒತ್ತಡಗಳನ್ನು ಸ್ವಲ್ಪ ಬದಿಗೆ ಸರಿಸಿ ಇನ್ಮುಂದೆ ಪತ್ರಿಕೆಗಾಗಿ ಕೆಲಸ ಮಾಡಲಿದ್ದಾರೆ.</p><p>ಹೌದು, ರಿಷಿ ಸುನಕ್ ಅವರು ಅಂಕಣಕಾರರಾಗಿ ಬದಲಾಗಿದ್ದಾರೆ. ಬ್ರಿಟನ್ನ ಪ್ರತಿಷ್ಟಿತ ;ದಿ ಸಂಡೇ ಟೈಮ್ಸ್‘ ಪತ್ರಿಕೆಗೆ ಅವರು ಅಂಕಣಗಳನ್ನು ಬರೆಯಲಿದ್ದಾರೆ.</p><p>ಆಡಳಿತಾರೂಡ ಲೇಬರ್ ಪಕ್ಷದ ಪ್ರಧಾನಿ ಕಿರ್ ಸ್ಟಾರ್ಮರ್ ಸಂಪುಟದ ಹಣಕಾಸು ಸಚಿವರು ಶೀಘ್ರ ಬಜೆಟ್ ಮಂಡಿಸಲಿದ್ದು, ಈ ನಿಟ್ಟಿನಲ್ಲಿ ರಿಷಿ ಅವರ ಅಂಕಣಗಳು ಪ್ರಾಮುಖ್ಯತೆ ಪಡೆದುಕೊಳ್ಳಲಿವೆ ಎನ್ನಲಾಗಿದೆ.</p><p>ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಸುಧಾರಣೆಗಳನ್ನು ಜನ ಎದುರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಣಕಾಸು ಸಚಿವರು ತೆರಿಗೆ ಸುಧಾರಣೆ ಹೆಸರಿನಲ್ಲಿ ಹೆಚ್ಚಿನ ತೆರಿಗೆಯನ್ನು ಜನರ ಮೇಲೆ ಹೇರಬಾರದು ಎಂದು ರಿಷಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.</p><p>ಸದ್ಯ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿರುವ ರಿಷಿ ಅವರು ಅಂಕಣಗಳಿಂದ ಬರುವ ಸಂಭಾವನೆಯನ್ನು ದೇಶದಲ್ಲಿ ಸಂಖ್ಯಾಶಾಸ್ತ್ರ ಸಂಶೋಧನೆಗೆ ತೆರದಿರುವ ಸಂಸ್ಥೆಗೆ ದೇಣಿಗೆ ನೀಡುತ್ತೇನೆ ಎಂದಿದ್ದಾರೆ.</p><p>ತಾವು ದೇಶದ ರಾಜಕೀಯದಲ್ಲಿ ಮತ್ತೆ ಮುನ್ನೆಲೆಗೆ ಬರುತ್ತೇನೆ. ಹೋರಾಟ ನಿರಂತರ, ನಾನು ಇನ್ನೂ ಬದುಕಿದ್ದೇನೆ, ನನ್ನ ಪಕ್ಷವೂ ಸಹ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.</p><p>ಈ ಹಿಂದೆ ಐದು ವರ್ಷ ನಿರಂತರವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರಿಂದ ಕುಟುಂಬಕ್ಕೆ ಸಮಯ ಕೊಡಲು ಆಗಿರಲಿಲ್ಲ. ಸದ್ಯ ಹೆಂಡತಿ ಮಕ್ಕಳ ಜೊತೆ ಒಳ್ಳೆಯ ಸಮಯ ಕಳೆಯುತ್ತಿದ್ದೇನೆ. ಈಗ ಅಂಕಣ ಬರೆಯಲು ಪ್ರಾರಂಭಿಸಿದ್ದೇನೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>