ಪಿಟಿಐ ನಾಯಕರ ಸಾಮೂಹಿಕ ನಿರ್ಗಮನದ ಬಗ್ಗೆ ವ್ಯಂಗ್ಯವಾಡಿರುವ ಮರಿಯಂ ಅವರು, ‘ಪಕ್ಷವನ್ನು ತೊರೆಯುವವರ ಬಗ್ಗೆ ಕೆಲವು ಪ್ರಶ್ನೆಗಳಿವೆ. ಪಕ್ಷದ ನಾಯಕರೇ ಅನೈತಿಕ ಕೆಲಸದಲ್ಲಿ ತೊಡಗಿಕೊಂಡಿದ್ದರೆ ಜನರು ಹೇಗೆ ಅವರ ಜತೆಗೆ ನಿಲ್ಲುವರು. ಮೇ 9ರ ಹಿಂಸಾತ್ಮಕ ಘಟನೆಗಳಿಗೆ ಪ್ರಚೋದನೆ ನೀಡಿದ್ದು ಇಮ್ರಾನ್ ಖಾನ್. ಇದರ ಹಿಂದಿರುವ ಸಂಚುಕೋರ ಅವರೇ ಎಂದು ಅವರ ಬೆಂಬಲಿಗರೇ ಹೇಳುತ್ತಿದ್ದಾರೆ’ ಎಂದೂ ಆರೋಪಿಸಿದ್ದಾರೆ.