<p><strong>ಕಾಬೂಲ್: </strong>ವಿರೋಧಿಗಳ ತಂಟೆಗೆ ಹೋಗುವುದಿಲ್ಲ ಎಂಬ ಘೋಷಣೆಯ ಹೊರತಾಗಿಯೂ ತಾಲಿಬಾನ್ಗಳು ಮನೆ ಮನೆಗೆ ತೆರಳಿ ವಿರೋಧಿಗಳು ಮತ್ತು ಅವರ ಕುಟುಂಬಗಳನ್ನು ಹುಡುಕುತ್ತಿದ್ದಾರೆ ಎಂಬುದು ವಿಶ್ವಸಂಸ್ಥೆಯ ಗುಪ್ತಚರ ದಾಖಲೆಯ ಮೂಲಕ ತಿಳಿದುಬಂದಿದೆ.</p>.<p>ಭಾನುವಾರ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಉಗ್ರರು, ತಮ್ಮ ವಿರುದ್ಧ ಕೆಲಸ ಮಾಡಿದವರಿಗೆ ಸಂಪೂರ್ಣ ಕ್ಷಮಾದಾನದ ಪ್ರತಿಜ್ಞೆ ಮಾಡಿದ್ದರು. ಮಹಿಳೆಯರ ಹಕ್ಕುಗಳನ್ನು ಗೌರವಿಸಲಾಗುವುದು ಮತ್ತು ತಾಲಿಬಾನ್ 2.0ದಲ್ಲಿ ಕ್ರೂರ 1996-2001ರ ನಿಯಮಕ್ಕಿಂತ ವಿಭಿನ್ನವಾಗಿ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಮಾತು ತಪ್ಪಿದ ಉಗ್ರರು, ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ. ತಾಲಿಬಾನಿಗಳ ಈ ವರ್ತನೆಯ ಬಗ್ಗೆ ಅರಿವಿದ್ದ ಅಫ್ಗಾನಿಸ್ತಾನದ ಹಲವರು ಈಗಾಗಲೇ ದೇಶ ತೊರೆದಿದ್ದಾರೆ.</p>.<p>ಇದನ್ನೂ ಓದಿ.. <a href="https://www.prajavani.net/world-news/taliban-search-closed-indian-consulates-in-afghanistans-kandahar-herat-859408.html"><strong>ಕಂದಹಾರ್, ಹೆರಾತ್ನ ಭಾರತೀಯ ದೂತಾವಾಸ ಕಚೇರಿಗಳಿಂದ ದಾಖಲೆ ಹೊತ್ತೊಯ್ದ ತಾಲಿಬಾನ್</strong></a></p>.<p>ಈ ಮಧ್ಯೆ, ಕೆಲವರು ಮಾತ್ರ ಅಲ್ಲಿಯೇ ಉಳಿದು ತಾಲಿಬಾನ್ ಪಡೆಗಳನ್ನು ವಿರೋಧಿಸುವ ಮೂಲಕ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವ ಪ್ರತಿಜ್ಞೆ ಮಾಡಿದ್ದಾರೆ.</p>.<p>ಅಂತಹವರಲ್ಲಿ ಆಫ್ಗಾನ್ ಸಂಸದೆ ಫರ್ಜಾನಾ ಕೊಚೈ ಸಹ ಸೇರಿದ್ದಾರೆ. ತಾಲಿಬಾನ್ ಉಗ್ರರು ತಮ್ಮ ಮಾತನ್ನು ಮೀರಿ ವಿರೋಧಿಗಳ ಮನೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅವರು ಸ್ಕೈ ನ್ಯೂಸ್ಗೆ ತಿಳಿಸಿದ್ದಾರೆ.</p>.<p>ರಾಷ್ಟ್ರೀಯ ಚಾನಲ್ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಒಬ್ಬ ಮಹಿಳಾ ಸ್ನೇಹಿತೆಗೆ ಕೆಲಸಕ್ಕೆ ಹೋಗಲು ಅವಕಾಶ ನಿರಾಕರಿಸುವ ಮೂಲಕ ತಾಲಿಬಾನ್ ದಂಗೆಕೋರರು ಈಗಾಗಲೇ ತಮ್ಮ ಮಾತನ್ನು ಮೀರಿ ನಡೆದಿದ್ದಾರೆ ಎಂದು ಸಂಸದೆ ಕಿಡಿಕಾರಿದ್ದಾರೆ.</p>.<p>‘ನಮ್ಮ ದೇಶದ ಅಧ್ಯಕ್ಷರು ದೇಶವನ್ನು ತೊರೆದಾಗ ನಮ್ಮ ಹೃದಯ ಛಿದ್ರವಾಯಿತು..’ ಎಂದು ನೋವನ್ನು ಹೊರಹಾಕಿದ್ದಾರೆ.</p>.<p>ಇದನ್ನೂ ಓದಿ.. <a href="https://www.prajavani.net/karnataka-news/nato-crew-member-from-karnataka-recalls-afghanistan-stint-859413.html"><strong>ಹೇಗಿರುತ್ತೆ ತಾಲಿಬಾನ್ಗಳ ಕ್ರೌರ್ಯ?: ಭಯಾನಕ ಸತ್ಯ ಬಿಚ್ಚಿಟ್ಟ ಕನ್ನಡಿಗ</strong></a><br /><br />‘ಮಹಿಳೆಯರು ಮತ್ತು ಯುವ ಪೀಳಿಗೆಯ ನಾಯಕಿಯಾಗಿ, ಜನರು ನಂಬಿದ ವ್ಯಕ್ತಿಯಾಗಿ, ನನ್ನ ಮೇಲೆ ಕೆಲವು ಬಾದ್ಯತೆಗಳಿವೆ. ವಿಶೇಷವಾಗಿ ಮಹಿಳೆಯರು, ಯುವತಿಯರ ಕುರಿತಾಗಿ ನಮಗೆ ಕೆಲವು ಜವಾಬ್ದಾರಿಗಳಿವೆ. ಹಾಗಾಗಿ, ನಾನು ಟಾರ್ಗೆಟ್ ಆಗುವುದು ಗೊತ್ತಿದ್ದರೂ ಅಫ್ಗಾನಿಸ್ತಾನದಿಂದ ಪಲಾಯನ ಮಾಡಲಿಲ್ಲ’ ಎಂದು ಅವರು ಹೇಳಿದರು.</p>.<p>‘ಮಹಿಳೆಯರ ರಕ್ಷಣೆ ಕುರಿತಾದ ಆ ಒಂದು ಪ್ರಶ್ನೆ ಯಾವಾಗಲೂ ನನ್ನನ್ನು ಭಾವುಕಳನ್ನಾಗಿಸುತ್ತದೆ. ಆ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ’ ಎಂದು ಕೊಚೈ ಹೇಳಿದರು.</p>.<p>ಹಲವು ಭಾರತೀಯರು ದೇಶ ಬಿಡುತ್ತಿರುವವರ ಬಗ್ಗೆ ಕೇಳಲಾದ ಪ್ರೆಶ್ನೆಗೆ ಉತ್ತರಿಸಿದ ಅವರು, ‘ನೀವು ಹೋಗುತ್ತಿದ್ದೀರಿ. ನಾವು ಎಲ್ಲಿಗೆ ಹೋಗುವುದು? ಇದು ನಮ್ಮ ತಾಯ್ನಾಡು’ ಎಂದು ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಬೂಲ್: </strong>ವಿರೋಧಿಗಳ ತಂಟೆಗೆ ಹೋಗುವುದಿಲ್ಲ ಎಂಬ ಘೋಷಣೆಯ ಹೊರತಾಗಿಯೂ ತಾಲಿಬಾನ್ಗಳು ಮನೆ ಮನೆಗೆ ತೆರಳಿ ವಿರೋಧಿಗಳು ಮತ್ತು ಅವರ ಕುಟುಂಬಗಳನ್ನು ಹುಡುಕುತ್ತಿದ್ದಾರೆ ಎಂಬುದು ವಿಶ್ವಸಂಸ್ಥೆಯ ಗುಪ್ತಚರ ದಾಖಲೆಯ ಮೂಲಕ ತಿಳಿದುಬಂದಿದೆ.</p>.<p>ಭಾನುವಾರ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಉಗ್ರರು, ತಮ್ಮ ವಿರುದ್ಧ ಕೆಲಸ ಮಾಡಿದವರಿಗೆ ಸಂಪೂರ್ಣ ಕ್ಷಮಾದಾನದ ಪ್ರತಿಜ್ಞೆ ಮಾಡಿದ್ದರು. ಮಹಿಳೆಯರ ಹಕ್ಕುಗಳನ್ನು ಗೌರವಿಸಲಾಗುವುದು ಮತ್ತು ತಾಲಿಬಾನ್ 2.0ದಲ್ಲಿ ಕ್ರೂರ 1996-2001ರ ನಿಯಮಕ್ಕಿಂತ ವಿಭಿನ್ನವಾಗಿ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಮಾತು ತಪ್ಪಿದ ಉಗ್ರರು, ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ. ತಾಲಿಬಾನಿಗಳ ಈ ವರ್ತನೆಯ ಬಗ್ಗೆ ಅರಿವಿದ್ದ ಅಫ್ಗಾನಿಸ್ತಾನದ ಹಲವರು ಈಗಾಗಲೇ ದೇಶ ತೊರೆದಿದ್ದಾರೆ.</p>.<p>ಇದನ್ನೂ ಓದಿ.. <a href="https://www.prajavani.net/world-news/taliban-search-closed-indian-consulates-in-afghanistans-kandahar-herat-859408.html"><strong>ಕಂದಹಾರ್, ಹೆರಾತ್ನ ಭಾರತೀಯ ದೂತಾವಾಸ ಕಚೇರಿಗಳಿಂದ ದಾಖಲೆ ಹೊತ್ತೊಯ್ದ ತಾಲಿಬಾನ್</strong></a></p>.<p>ಈ ಮಧ್ಯೆ, ಕೆಲವರು ಮಾತ್ರ ಅಲ್ಲಿಯೇ ಉಳಿದು ತಾಲಿಬಾನ್ ಪಡೆಗಳನ್ನು ವಿರೋಧಿಸುವ ಮೂಲಕ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವ ಪ್ರತಿಜ್ಞೆ ಮಾಡಿದ್ದಾರೆ.</p>.<p>ಅಂತಹವರಲ್ಲಿ ಆಫ್ಗಾನ್ ಸಂಸದೆ ಫರ್ಜಾನಾ ಕೊಚೈ ಸಹ ಸೇರಿದ್ದಾರೆ. ತಾಲಿಬಾನ್ ಉಗ್ರರು ತಮ್ಮ ಮಾತನ್ನು ಮೀರಿ ವಿರೋಧಿಗಳ ಮನೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅವರು ಸ್ಕೈ ನ್ಯೂಸ್ಗೆ ತಿಳಿಸಿದ್ದಾರೆ.</p>.<p>ರಾಷ್ಟ್ರೀಯ ಚಾನಲ್ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಒಬ್ಬ ಮಹಿಳಾ ಸ್ನೇಹಿತೆಗೆ ಕೆಲಸಕ್ಕೆ ಹೋಗಲು ಅವಕಾಶ ನಿರಾಕರಿಸುವ ಮೂಲಕ ತಾಲಿಬಾನ್ ದಂಗೆಕೋರರು ಈಗಾಗಲೇ ತಮ್ಮ ಮಾತನ್ನು ಮೀರಿ ನಡೆದಿದ್ದಾರೆ ಎಂದು ಸಂಸದೆ ಕಿಡಿಕಾರಿದ್ದಾರೆ.</p>.<p>‘ನಮ್ಮ ದೇಶದ ಅಧ್ಯಕ್ಷರು ದೇಶವನ್ನು ತೊರೆದಾಗ ನಮ್ಮ ಹೃದಯ ಛಿದ್ರವಾಯಿತು..’ ಎಂದು ನೋವನ್ನು ಹೊರಹಾಕಿದ್ದಾರೆ.</p>.<p>ಇದನ್ನೂ ಓದಿ.. <a href="https://www.prajavani.net/karnataka-news/nato-crew-member-from-karnataka-recalls-afghanistan-stint-859413.html"><strong>ಹೇಗಿರುತ್ತೆ ತಾಲಿಬಾನ್ಗಳ ಕ್ರೌರ್ಯ?: ಭಯಾನಕ ಸತ್ಯ ಬಿಚ್ಚಿಟ್ಟ ಕನ್ನಡಿಗ</strong></a><br /><br />‘ಮಹಿಳೆಯರು ಮತ್ತು ಯುವ ಪೀಳಿಗೆಯ ನಾಯಕಿಯಾಗಿ, ಜನರು ನಂಬಿದ ವ್ಯಕ್ತಿಯಾಗಿ, ನನ್ನ ಮೇಲೆ ಕೆಲವು ಬಾದ್ಯತೆಗಳಿವೆ. ವಿಶೇಷವಾಗಿ ಮಹಿಳೆಯರು, ಯುವತಿಯರ ಕುರಿತಾಗಿ ನಮಗೆ ಕೆಲವು ಜವಾಬ್ದಾರಿಗಳಿವೆ. ಹಾಗಾಗಿ, ನಾನು ಟಾರ್ಗೆಟ್ ಆಗುವುದು ಗೊತ್ತಿದ್ದರೂ ಅಫ್ಗಾನಿಸ್ತಾನದಿಂದ ಪಲಾಯನ ಮಾಡಲಿಲ್ಲ’ ಎಂದು ಅವರು ಹೇಳಿದರು.</p>.<p>‘ಮಹಿಳೆಯರ ರಕ್ಷಣೆ ಕುರಿತಾದ ಆ ಒಂದು ಪ್ರಶ್ನೆ ಯಾವಾಗಲೂ ನನ್ನನ್ನು ಭಾವುಕಳನ್ನಾಗಿಸುತ್ತದೆ. ಆ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ’ ಎಂದು ಕೊಚೈ ಹೇಳಿದರು.</p>.<p>ಹಲವು ಭಾರತೀಯರು ದೇಶ ಬಿಡುತ್ತಿರುವವರ ಬಗ್ಗೆ ಕೇಳಲಾದ ಪ್ರೆಶ್ನೆಗೆ ಉತ್ತರಿಸಿದ ಅವರು, ‘ನೀವು ಹೋಗುತ್ತಿದ್ದೀರಿ. ನಾವು ಎಲ್ಲಿಗೆ ಹೋಗುವುದು? ಇದು ನಮ್ಮ ತಾಯ್ನಾಡು’ ಎಂದು ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>