ಗುರುವಾರ ಅಪಹರಣ ಯತ್ನ ವರದಿಯಾಗಿದ್ದು, ಭಾರತೀಯ ನೌಕಾಪಡೆಯು ಶುಕ್ರವಾರ ಮುಂಜಾನೆ ಘಟನೆ ನಡೆದ ಪ್ರದೇಶಕ್ಕೆ ತನ್ನ ಯುದ್ಧ ನೌಕೆಯ ಗಸ್ತು ವಿಮಾನವನ್ನು ಕಳುಹಿಸಿತು. ವಿಮಾನವು, ಅಪಹರಣಕ್ಕೊಳಗಾದ ಹಡಗಿನ ಮೇಲೆ ಹಾರಾಟ ನಡೆಸಿ, ಹಡಗಿನ ಚಲನೆಯನ್ನು ನಿರಂತರ ಮೇಲ್ವಿಚಾರಣೆ ಮಾಡುತ್ತಿದೆ. ಆ ಹಡಗು ಈಗ ಸೊಮಾಲಿಯಾದ ಕರಾವಳಿಯತ್ತ ಸಾಗುತ್ತಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.