<p><strong>ಟೆಹರಾನ್</strong>: ಉಕ್ರೇನ್ನ ನಾಗರಿಕ ವಿಮಾನ ಪತನದ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ. 176 ಮಂದಿ ಸಾವಿಗೆ ಕಾರಣವಾಗಿರುವ ಈ ಪ್ರಮಾದ ಕ್ಷಮಾರ್ಹವಲ್ಲ ಎಂದಿರುವ ಇರಾನ್, ಉದ್ದೇಶಪೂರ್ವಕವಾಗಿ ಹೊಡೆದುರುಳಿಸಿದ್ದಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದೆ.</p>.<p>ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾಯಿಸಲಾಗಿದ್ದು,ಅದು ವಿಮಾನವನ್ನು ಹೊಡೆದುರುಳಿಸಿದೆ. ಅಮಾಯಕರ ಸಾವಿಗೆ ಕಾರಣವಾಗಿದೆ ಎಂಬುದು ಸೇನೆಯು ನಡೆಸಿದ ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಮಾದಕ್ಕೆ ಇರಾನ್ ಕ್ಷಮೆ ಕೋರುತ್ತದೆ.ದುರಂತಕ್ಕೆ ಕಾರಣರಾದವರ ಪತ್ತೆಗೆತನಿಖೆಯನ್ನು ಮುಂದುವರಿಸಲಾಗಿದೆ ಎಂದು ಅಧ್ಯಕ್ಷ ಹಸನ್ ರೌಹಾನಿ ಟ್ವೀಟ್ ಮಾಡಿದ್ದಾರೆ.</p>.<p>ಇರಾಕ್ನಲ್ಲಿ ಅಮೆರಿಕದ ಡ್ರೋನ್ ದಾಳಿಗೆ ಬಲಿಯಾದ ಖಾಸಿಂ ಸುಲೇಮಾನಿ ಹತ್ಯೆಗೆ ಪ್ರತೀಕಾರವಾಗಿ ಬುಧವಾರಕ್ಷಿಪಣಿ ಪ್ರಯೋಗಿಸಲಾಗಿತ್ತು ಎಂದು ಸೇನೆಯ ಅಧಿಕಾರಿ ಹೇಳಿದ್ದರು. ಈ ಹೇಳಿಕೆಯ ಹಿಂದೆಯೇ ರೌಹಾನಿ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ.</p>.<p><strong>ತನಿಖೆಗೆ ಆಹ್ವಾನ:</strong> ಅಮೆರಿಕದ ಪ್ರಚೋದನಾತ್ಮಕತೆಯು ಮಾನವ ಸಹಜ ತಪ್ಪಿಗೆ ಎಡೆಮಾಡಿಕೊಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜಾವೇದ್ ಜಾರೀಫ್ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ತನಿಖೆ ನಡೆಸುವಂತೆ ಅಮೆರಿಕ, ಉಕ್ರೇನ್, ಕೆನಡಾ ದೇಶಗಳಿಗೆ ಇರಾನ್ ಆಹ್ವಾನ ನೀಡಿದೆ.</p>.<p>ಶತ್ರುರಾಷ್ಟ್ರಗಳ ಬೆದರಿಕೆಗಳು ತೀವ್ರವಾಗಿದ್ದಾಗ ಬೋಯಿಂಗ್ 737 ವಿಮಾನವನ್ನು ‘ಶತ್ರು ಪಡೆ’ಯ ವಿಮಾನ ಎಂದು ಇರಾನ್ ಗ್ರಹಿಸಿದ್ದಾಗಿ ಸೇನೆಯ ಹೇಳಿಕೆಯನ್ನು ಇರಾನ್ನ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಐಆರ್ಎನ್ಎಈ ಮೊದಲು ವರದಿಮಾಡಿತ್ತು. ಅಂತರರಾಷ್ಟ್ರೀಯ ಒತ್ತಡಗಳು ಹೆಚ್ಚಾದಾಗ ಇರಾನ್ ತನಿಖೆಗೆ ಮುಂದಾಗಿತ್ತು.</p>.<p>ಟೆಹರಾನ್ನಿಂದ ಹೊರಟಿದ್ದ ಯುಐಎ ಪಿಎಸ್ 752 ವಿಮಾನದಲ್ಲಿ ಇರಾನ್– ಕೆನಡಾದ ದ್ವಿ ಪೌರತ್ವ ಪಡೆದ ನಾಗರಿಕರು, ಉಕ್ರೇನ್, ಅಫ್ಗಾನಿಸ್ತಾನ್, ಸ್ವೀಡನ್, ಬ್ರಿಟನ್ ಪ್ರಜೆಗಳು ಇದ್ದರು. ದುರಂತದ ನಂತರ ಹಲವು ವಿಮಾನಯಾನ ಸಂಸ್ಥೆಗಳು ಇರಾನ್ನ ವಾಯು ಪ್ರದೇಶದ ಮೇಲೆ ಹಾರಾಟ ನಡೆಸುವುದನ್ನು ಮೊಟಕುಗೊಳಿಸಿವೆ. </p>.<p><strong>ಶಿಕ್ಷೆಗೆ ಉಕ್ರೇನ್ ಅಧ್ಯಕ್ಷರ ಆಗ್ರಹ</strong><br />ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಜಿಲೆನ್ಸ್ಕಿ ಅವರು ವಿಮಾನ ಪತನಕ್ಕೆ ಕಾರಣರಾದವರಿಗೆ ಶಿಕ್ಷೆ ನೀಡುವಂತೆ ಇರಾನ್ಗೆ ಆಗ್ರಹಿಸಿದ್ದಾರೆ. ಅಲ್ಲದೆ, ಪರಿಹಾರ ಮೊತ್ತವನ್ನು ಪಾವತಿಸುವಂತೆ ಫೇಸ್ಬುಕ್ನಲ್ಲಿ ಆಗ್ರಹಿಸಿದ್ದಾರೆ.</p>.<p>ತಪ್ಪಿತಸ್ಥರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕು ಎಂಬುದನ್ನು ಇರಾನ್ನಿಂದ ಬಯಸುತ್ತೇವೆ. ಅಂತೆಯೇ ಪರಿಹಾರವನ್ನು ಪಾವತಿಸಬೇಕು ಎಂದು ಟೆಹರಾನ್ಗೆ ಹೇಳಿದ್ದಾರೆ.</p>.<p><strong>ನ್ಯೂನತೆ ಪತ್ತೆ: ಖೊಮೇನಿ ಸೂಚನೆ</strong><br />ವಿಮಾನ ಪತನಕ್ಕೆ ಕಾರಣವಾದ ನ್ಯೂನತೆಗಳ ಪತ್ತೆಗೆ ಇರಾನ್ನ ಸರ್ವೋಚ್ಚ ನಾಯಕ ಅಯಾತ್ಉಲ್ಲಾ ಅಲಿ ಖೊಮೇನಿ ಸೇನಾಪಡೆಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.</p>.<p>ಈ ರೀತಿಯ ಪ್ರಮಾದವು ಮರುಕಳಿಸಬಾರದು ಎಂದು ತಮ್ಮ ಅಧಿಕೃತ ಜಾಲತಾಣದಲ್ಲಿ ಹೇಳಿಕೆಯನ್ನು ಅವರು ನೀಡಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.</p>.<p>*<br />ದುರಂತಕ್ಕೆ ನಾವೇ ಜವಾಬ್ದಾರರು. ಇದನ್ನು ನೋಡಿ ಯಾಕಾದರೂ ಬದುಕಿರಬೇಕು ಎನ್ನಿಸಿತು. ಘಟನೆಯಿಂದ ನಾವು ಪಾಠ ಕಲಿತಿದ್ದೇವೆ.<br /><em><strong>-ಜನರಲ್ ಅಮೀರ್ ಅಲಿ ಹಾಜೀಜಾದೆ,ಕಮಾಂಡರ್, ರೆವಲ್ಯೂಷನರಿ ಗಾರ್ಡ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೆಹರಾನ್</strong>: ಉಕ್ರೇನ್ನ ನಾಗರಿಕ ವಿಮಾನ ಪತನದ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ. 176 ಮಂದಿ ಸಾವಿಗೆ ಕಾರಣವಾಗಿರುವ ಈ ಪ್ರಮಾದ ಕ್ಷಮಾರ್ಹವಲ್ಲ ಎಂದಿರುವ ಇರಾನ್, ಉದ್ದೇಶಪೂರ್ವಕವಾಗಿ ಹೊಡೆದುರುಳಿಸಿದ್ದಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದೆ.</p>.<p>ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾಯಿಸಲಾಗಿದ್ದು,ಅದು ವಿಮಾನವನ್ನು ಹೊಡೆದುರುಳಿಸಿದೆ. ಅಮಾಯಕರ ಸಾವಿಗೆ ಕಾರಣವಾಗಿದೆ ಎಂಬುದು ಸೇನೆಯು ನಡೆಸಿದ ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಮಾದಕ್ಕೆ ಇರಾನ್ ಕ್ಷಮೆ ಕೋರುತ್ತದೆ.ದುರಂತಕ್ಕೆ ಕಾರಣರಾದವರ ಪತ್ತೆಗೆತನಿಖೆಯನ್ನು ಮುಂದುವರಿಸಲಾಗಿದೆ ಎಂದು ಅಧ್ಯಕ್ಷ ಹಸನ್ ರೌಹಾನಿ ಟ್ವೀಟ್ ಮಾಡಿದ್ದಾರೆ.</p>.<p>ಇರಾಕ್ನಲ್ಲಿ ಅಮೆರಿಕದ ಡ್ರೋನ್ ದಾಳಿಗೆ ಬಲಿಯಾದ ಖಾಸಿಂ ಸುಲೇಮಾನಿ ಹತ್ಯೆಗೆ ಪ್ರತೀಕಾರವಾಗಿ ಬುಧವಾರಕ್ಷಿಪಣಿ ಪ್ರಯೋಗಿಸಲಾಗಿತ್ತು ಎಂದು ಸೇನೆಯ ಅಧಿಕಾರಿ ಹೇಳಿದ್ದರು. ಈ ಹೇಳಿಕೆಯ ಹಿಂದೆಯೇ ರೌಹಾನಿ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ.</p>.<p><strong>ತನಿಖೆಗೆ ಆಹ್ವಾನ:</strong> ಅಮೆರಿಕದ ಪ್ರಚೋದನಾತ್ಮಕತೆಯು ಮಾನವ ಸಹಜ ತಪ್ಪಿಗೆ ಎಡೆಮಾಡಿಕೊಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜಾವೇದ್ ಜಾರೀಫ್ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ತನಿಖೆ ನಡೆಸುವಂತೆ ಅಮೆರಿಕ, ಉಕ್ರೇನ್, ಕೆನಡಾ ದೇಶಗಳಿಗೆ ಇರಾನ್ ಆಹ್ವಾನ ನೀಡಿದೆ.</p>.<p>ಶತ್ರುರಾಷ್ಟ್ರಗಳ ಬೆದರಿಕೆಗಳು ತೀವ್ರವಾಗಿದ್ದಾಗ ಬೋಯಿಂಗ್ 737 ವಿಮಾನವನ್ನು ‘ಶತ್ರು ಪಡೆ’ಯ ವಿಮಾನ ಎಂದು ಇರಾನ್ ಗ್ರಹಿಸಿದ್ದಾಗಿ ಸೇನೆಯ ಹೇಳಿಕೆಯನ್ನು ಇರಾನ್ನ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಐಆರ್ಎನ್ಎಈ ಮೊದಲು ವರದಿಮಾಡಿತ್ತು. ಅಂತರರಾಷ್ಟ್ರೀಯ ಒತ್ತಡಗಳು ಹೆಚ್ಚಾದಾಗ ಇರಾನ್ ತನಿಖೆಗೆ ಮುಂದಾಗಿತ್ತು.</p>.<p>ಟೆಹರಾನ್ನಿಂದ ಹೊರಟಿದ್ದ ಯುಐಎ ಪಿಎಸ್ 752 ವಿಮಾನದಲ್ಲಿ ಇರಾನ್– ಕೆನಡಾದ ದ್ವಿ ಪೌರತ್ವ ಪಡೆದ ನಾಗರಿಕರು, ಉಕ್ರೇನ್, ಅಫ್ಗಾನಿಸ್ತಾನ್, ಸ್ವೀಡನ್, ಬ್ರಿಟನ್ ಪ್ರಜೆಗಳು ಇದ್ದರು. ದುರಂತದ ನಂತರ ಹಲವು ವಿಮಾನಯಾನ ಸಂಸ್ಥೆಗಳು ಇರಾನ್ನ ವಾಯು ಪ್ರದೇಶದ ಮೇಲೆ ಹಾರಾಟ ನಡೆಸುವುದನ್ನು ಮೊಟಕುಗೊಳಿಸಿವೆ. </p>.<p><strong>ಶಿಕ್ಷೆಗೆ ಉಕ್ರೇನ್ ಅಧ್ಯಕ್ಷರ ಆಗ್ರಹ</strong><br />ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಜಿಲೆನ್ಸ್ಕಿ ಅವರು ವಿಮಾನ ಪತನಕ್ಕೆ ಕಾರಣರಾದವರಿಗೆ ಶಿಕ್ಷೆ ನೀಡುವಂತೆ ಇರಾನ್ಗೆ ಆಗ್ರಹಿಸಿದ್ದಾರೆ. ಅಲ್ಲದೆ, ಪರಿಹಾರ ಮೊತ್ತವನ್ನು ಪಾವತಿಸುವಂತೆ ಫೇಸ್ಬುಕ್ನಲ್ಲಿ ಆಗ್ರಹಿಸಿದ್ದಾರೆ.</p>.<p>ತಪ್ಪಿತಸ್ಥರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕು ಎಂಬುದನ್ನು ಇರಾನ್ನಿಂದ ಬಯಸುತ್ತೇವೆ. ಅಂತೆಯೇ ಪರಿಹಾರವನ್ನು ಪಾವತಿಸಬೇಕು ಎಂದು ಟೆಹರಾನ್ಗೆ ಹೇಳಿದ್ದಾರೆ.</p>.<p><strong>ನ್ಯೂನತೆ ಪತ್ತೆ: ಖೊಮೇನಿ ಸೂಚನೆ</strong><br />ವಿಮಾನ ಪತನಕ್ಕೆ ಕಾರಣವಾದ ನ್ಯೂನತೆಗಳ ಪತ್ತೆಗೆ ಇರಾನ್ನ ಸರ್ವೋಚ್ಚ ನಾಯಕ ಅಯಾತ್ಉಲ್ಲಾ ಅಲಿ ಖೊಮೇನಿ ಸೇನಾಪಡೆಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.</p>.<p>ಈ ರೀತಿಯ ಪ್ರಮಾದವು ಮರುಕಳಿಸಬಾರದು ಎಂದು ತಮ್ಮ ಅಧಿಕೃತ ಜಾಲತಾಣದಲ್ಲಿ ಹೇಳಿಕೆಯನ್ನು ಅವರು ನೀಡಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.</p>.<p>*<br />ದುರಂತಕ್ಕೆ ನಾವೇ ಜವಾಬ್ದಾರರು. ಇದನ್ನು ನೋಡಿ ಯಾಕಾದರೂ ಬದುಕಿರಬೇಕು ಎನ್ನಿಸಿತು. ಘಟನೆಯಿಂದ ನಾವು ಪಾಠ ಕಲಿತಿದ್ದೇವೆ.<br /><em><strong>-ಜನರಲ್ ಅಮೀರ್ ಅಲಿ ಹಾಜೀಜಾದೆ,ಕಮಾಂಡರ್, ರೆವಲ್ಯೂಷನರಿ ಗಾರ್ಡ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>